ಶರಣರ ಕ್ಷೇತ್ರ ಅಧ್ಯಯನ-ಸಂಶೋಧನೆ


Team Udayavani, Jan 26, 2022, 11:46 AM IST

6alanda

ಆಳಂದ: ಕಳೆದ 20 ವರ್ಷದಿಂದಲೂ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಲಭ್ಯವಿರುವ ಶರಣರ ಕ್ಷೇತ್ರಗಳನ್ನು ಸತತ ಅಧ್ಯಯನ ಆರಂಭಿಸಿರುವ ಬೆಂಗಳೂರಿನ ಸಂಶೋಧಕ ಅಶೋಕ ದೊಮ್ಮಲೂರ ಮಂಗಳವಾರ ತಾಲೂಕಿನ ಶರಣರ ಕ್ಷೇತ್ರಗಳ ಕುರಿತು ಸಮಗ್ರ ಅಧ್ಯಯನ ನಡೆಸಿದರು.

12ನೇ ಶತಮಾನದ ಬಸವಾದಿ ಶರಣರ ಮಾಹಿತಿ, ವಚನ ಸಾಹಿತ್ಯ, ಕಾರ್ಯಕ್ಷೇತ್ರ ಕುರಿತು ಡಿಜಿಟಲೀಕರಣ ಕಾರ್ಯ ಕೈಗೆತ್ತಿಕೊಂಡಿರುವ ದೊಮ್ಮಲೂರ ಈಗಾಗಲೇ ರಾಜ್ಯದಾದ್ಯಂತ ಏಳು ಲಕ್ಷ ಹಸ್ತಪ್ರತಿ ಪತ್ತೆ ಮಾಡಿದ್ದಾರೆ. ಅಲ್ಲದೇ, ಇನ್ನು ಬೆಳಕಿಗೆ ಬಾರದ ಅಳಿದುಳಿದ ಶರಣರ ಕ್ಷೇತ್ರಗಳ ಅಧ್ಯಯನ, ಸಂಶೋಧನೆ ಮುಂದುವರಿಸಲು ತಾಲೂಕಿಗೆ ಭೇಟಿ ನೀಡಿದ್ದರು.

ಮಂಗಳವಾರ ಬೆಂಗಳೂರಿನಿಂದ ಆಗಮಿಸಿದ್ದ ಸಂಶೋಧಕ ಅಶೋಕ ದೊಮ್ಮಲೂರ, ತಾಲೂಕಿನ ಮುನ್ನಹಳ್ಳಿ ಗ್ರಾಮದಲ್ಲಿನ ಶರಣ ಗಜೇಶ ಮಸಣ್ಣಯ್ಯ ದಂಪತಿಗಳ ಕ್ಷೇತ್ರ ಗೋಳಾ (ಬಿ) ಗ್ರಾಮದಲ್ಲಿ ಲಕ್ಕಮ್ಮನ ದೇವಸ್ಥಾನ, ಆಳಂದದಲ್ಲಿ ಶರಣ ಏಕಾಂತರಾಮಯ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ಗದ್ದುಗೆ, ದೇವಾಲಯ ಪರಿಸರ, ದಾಖಲೆಗಳ ಕುರಿತು ಸ್ಥಳೀಯರಿಂದ ಮಾಹಿತಿ ಕಲೆಹಾಕಿದರು.

ಬಳಿಕ ಸುಂಟನೂರ ಹತ್ತಿರದ ಬಸವಂತವಾಡಿ ಗ್ರಾಮದಲ್ಲಿನ ಮಾರಯ್ಯನ ಕ್ಷೇತ್ರ, ಅಫಜಲಪುರ ತಾಲೂಕಿನ ಶರಣಿ ನೀಲೂರ ನಿಂಬೆಕ್ಕನ ಕ್ಷೇತ್ರಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ಜತೆಯಲ್ಲಿ ಜಿಲ್ಲಾ ಜಾಗತಿಕ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್‌, ಆಳಂದದಲ್ಲಿ ರಮೇಶ ಲೋಹಾರ, ಬಾಬುರಾವ್‌ ಮಡ್ಡೆ, ಮುನ್ನೊಳ್ಳಿಯ ಗ್ರಾಮದಲ್ಲಿ ಶಿವಪುತ್ರಪ್ಪ ಪಾಟೀಲ, ಸಿದ್ಧು ವೇದಶೆಟ್ಟಿ ಇನ್ನಿತರರು ಇದ್ದರು. ಗೋಳಾ ಗ್ರಾಮದಲ್ಲಿ ಬಸವರಾಜ ಉಪ್ಪಿನ ಹಾಗೂ ಸಂಶೋಧಕರಿಗೆ ಕ್ಷೇತ್ರದ ಮಾಹಿತಿ ಒದಗಿಸಿದರು.

ಗೋಳಾದಲ್ಲಿ ಲಕ್ಕಮ್ಮನ ದೇವಸ್ಥಾನ ಪ್ರಸಿದ್ಧಿ ಪಡೆದುಕೊಂಡಿದ್ದು, 12ನೇ ಶತಮಾನದಲ್ಲಿ ಆಯ್ದಕ್ಕಿ ಲಕ್ಕಮ್ಮನವರು ಈ ಭಾಗದಲ್ಲಿ ಸಂಚರಿಸಿರಬಹುದು ಎನ್ನುವ ಕುರಿತು ಬೆಳಕಿಗೆ ಬರಬೇಕಿದೆ. ಲಕ್ಕಮ್ಮ ಎಂಬ ದೇವಸ್ಥಾನ ಗೋಳಾದಲ್ಲಿದ್ದರೆ, ನೆರೆಯ ಬಸವಂತವಾಡಿ ಗ್ರಾಮದಲ್ಲಿ ಶರಣಿ ಆಯ್ದಕ್ಕಿ ಲಕ್ಕಮನ ಪತಿ ಮಾರಯ್ಯನವರ ದೇವಸ್ಥಾನಕ್ಕೂ ಭೇಟಿ ನೀಡಿ ಸಂಶೋಧಕರು ಮಾಹಿತಿ ಕಲೆಹಾಕಿದರು.

ಇದೇ ವೇಳೆ ಮಾತನಾಡಿದ ಸಂಶೋಧಕ ಅಶೋಕ ದೊಮ್ಮಲೂರ ಅವರು, ಸದ್ಯ ಶರಣರ ಕ್ಷೇತ್ರಗಳಿಗೆ ಭೇಟಿ ಮಾಡಿ, ಈಗಾಗಲೇ ದಾಖಲಾದ ಶರಣ ಕ್ಷೇತ್ರಗಳು ಮತ್ತು ಅವರ ವಚನ ಸಾಹಿತ್ಯ, ಇನ್ನುಳಿದ ಬೇರೆ ಬೇರೆ ಕಡೆ ಅವರ ಕಾರ್ಯಕ್ಷೇತ್ರಗಳ ಮಾಹಿತಿ ಸಂಗ್ರಹಿಸಿ ನೈಜತೆ ಕರಿತು ತಾಳೆಮಾಡಿ ಡಿಜಿಟಲೀಕರಣ ಕೈಗೊಳ್ಳಲಾಗುತ್ತಿದೆ. ಒಬ್ಬ ಶರಣರ ಕುರಿತು ಮಾಹಿತಿ ಇದ್ದರೂ ಆ ಸ್ಥಳಕ್ಕೆ ಭೇಟಿ ನೀಡಲಾಗುತ್ತಿದೆ ಎಂದು ಹೇಳಿದರು.

ವಚನಗಳಲ್ಲಿ ಉಲ್ಲೇಖವಾಗಿರುವ ಶರಣರ ಮಾಹಿತಿ ದಾಖಲೀಖರಣ ಮಾಡಲಾಗುತ್ತಿದೆ. ಯಾವ ಕ್ಷೇತ್ರಗಳಲ್ಲಿ ಸ್ಮಾರಕ ಮತ್ತು ಕುರುಹುಗಳು ಇವೆಯೋ ಅವುಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತಾಳೆಗೆರೆ, ಹಸ್ತಪ್ರತಿಗಳು ಹಾಗೂ ಹೊಸ ವಚನಗಳಲ್ಲಿನ ಉಲ್ಲೇಖಗಳ ಪರಿಶೀಲನೆ ಹೊಂದಾಣಿಕೆ ಮಾಡಿ ಸಂಗ್ರಹಿಸಿ ದಾಖಲೀಕರಣ ಅಂತಿಮ ಮಾಡಲಾಗುತ್ತಿದೆ. ಶರಣರ ಕ್ಷೇತ್ರಗಳಲ್ಲಿ, ಮಠಗಳಲ್ಲಿ, ದೇವಸ್ಥಾನಗಳಲ್ಲಿ ಹಸ್ತಪ್ರತಿ, ತಾಳೆಗೆರೆ ಇದ್ದರೆ ಅವುಗಳನ್ನು ಸ್ಕ್ಯಾನ್‌ ಮಾಡಿ ಮರಳಿ ಕೊಡಲಾಗುತ್ತಿದೆ. ಇದಕ್ಕೆ ಸಾರ್ವಜನಿಕರು, ಧರ್ಮಾಧಿಕಾರಿಗಳು, ಮಠಾಧೀಶರು ಸಹಕರಿಸಬೇಕು. -ಅಶೋಕ ದೊಮ್ಮಲೂರ, ಸಂಶೋಧಕ, ಬೆಂಗಳೂರು

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.