ಕ್ವಾರಂಟೈನ್ದಿಂದ ಮನೆಗೆ ಹೋದವರಿಗೆ ಸೋಂಕು
Team Udayavani, May 30, 2020, 10:38 AM IST
ಸಾಂದರ್ಭಿಕ ಚಿತ್ರ
ಶಹಾಬಾದ: ನಗರದ ವಿವಿಧ ಕ್ವಾರಂಟೈನ್ ಕೇಂದ್ರದಿಂದ ಗುರುವಾರ ಮನೆಗೆ ತೆರಳಿದ್ದ ಸುಮಾರು ಏಳು ಜನರಿಗೆ ಶುಕ್ರವಾರ ಕೋವಿಡ್ ಸೋಂಕು ಪತ್ತೆಯಾಗಿದೆ.
ನಗರದ ಜಿಪಿಎಸ್ ಶಾಲೆಯ ಕ್ವಾರಂಟೈನ್ ಕೇಂದ್ರದಿಂದ ಗುರುವಾರ ಮನೆಗೆ ಹೋಗಿದ್ದ ನಾಲ್ವರಿಗೆ ಹಾಗೂ ಭಂಕೂರ ವಸತಿ ನಿಲಯದಲ್ಲಿದ್ದ ಮೂವರಿಗೆ ಸೋಂಕು ಕಂಡು ಬಂದಿದೆ. ನಗರ ಜಿಪಿಎಸ್ ಶಾಲೆಯಲ್ಲಿ 69 ಜನ ಮುಂಬೈ ವಲಸಿಗರನ್ನು ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ ಗುರುವಾರ ಓರ್ವ ಮಹಿಳೆಗೆ ಸೋಂಕು ಕಂಡು ಬಂದಿತ್ತು. ಅವಳನ್ನು ಕಲಬುರಗಿಗೆ ಸಾಗಿಸಿ, ಉಳಿದವರನ್ನು ಕ್ವಾರಂಟೈನ್ ಕೇಂದ್ರದಿಂದ ಮನೆಗೆ ಕಳುಹಿಸಲಾಗಿತ್ತು. ಹೀಗೆ ಕಳುಹಿಸಿದ ಮೂವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲರನ್ನು ಶುಕ್ರವಾರ ಅಂಬುಲೆನ್ಸ್ ಮೂಲಕ ಕಲಬುರಗಿಗೆ ಕಳುಹಿಸಲಾಗಿದೆ.
ನಗರದ ಜಿಪಿಎಸ್ ಶಾಲೆಯಲ್ಲಿ ಸೋಂಕು ಕಂಡು ಬಂದ ವ್ಯಕ್ತಿಯೊಬ್ಬ ಗುರುವಾರ ಗೋಳಾ (ಕೆ) ಗ್ರಾಮದ ಮನೆಯಲ್ಲಿದ್ದು, ಶುಕ್ರವಾರ ಮದುವೆ ಕಾರ್ಯಕ್ರಮವೊಂದಕ್ಕೆ ಹೋಗಿ ಬಂದಿದ್ದಾನೆ ಎನ್ನಲಾಗಿದೆ. ಆತನ ಕುಟುಂಬಸ್ಥರು ಶುಕ್ರವಾರ ಗೋಳಾ ಶಾಲೆ ಆವರಣದಲ್ಲಿ ಶಾಸಕರು ನೀಡಿದ ದಿನಸಿ ಕಿಟ್ ಪಡೆಯಲು ಜನರ ಮಧ್ಯೆ ಇದ್ದರು ಎನ್ನಲಾಗಿದೆ.
ಭಂಕೂರನಲ್ಲಿ ಕೋವಿಡ್ ಸೊಂಕು ಕಂಡು ಬಂದ ವ್ಯಕ್ತಿಗಳು ಕ್ವಾರಂಟೈನ್ ಕೇಂದ್ರದ ಸಮೀಪದಲ್ಲಿಯೇ ತಮ್ಮ ಮನೆ ಇರುವುದರಿಂದ ಇದ್ದ 14 ದಿನ ತಮ್ಮ ಮನೆಗೆ ಹೋಗಿ, ಮನೆಯವರೊಂದಿಗೆ ಬೆರೆತಿದ್ದು, ಅವರಲ್ಲಿ ಓರ್ವ ವ್ಯಕ್ತಿ ಕ್ರೂಸರ್ನಲ್ಲಿ ಕಲಬುರಗಿಗೆ ಹೋಗಿದ್ದಾನೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
Kalaburagi:ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ
MUST WATCH
ಹೊಸ ಸೇರ್ಪಡೆ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ