ಎಸ್ಬಿಆರ್ ಕಾಲೇಜಿನಲ್ಲಿ ಸಿಂಪಿ ಮತಯಾಚನೆ
Team Udayavani, Nov 12, 2021, 10:22 AM IST
ಕಲಬುರಗಿ: ಸಾಹಿತ್ಯ ಸೇವೆಗೆ ಜೀವನ ಪರ್ಯಂತ ಶ್ರಮಿಸುತ್ತಾ ಬಂದಿರುವುದು ಸಾಕಷ್ಟು ಅನುಭವ ನೀಡಿದೆ. ಇದೇ ಸೇವಾ ಹಿರಿತನ ಮತ್ತಷ್ಟು ಕಾರ್ಯಗಳಿಗೆ ಸ್ಫೂರ್ತಿ ನೀಡಿದೆ ಎಂದು ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವೀರಭದ್ರ ಸಿಂಪಿ ಹೇಳಿದರು.
ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಎಸ್ಬಿಆರ್ ಶಾಲಾ-ಕಾಲೇಜುಗಳಲ್ಲಿ ಮತದಾರರ ಶಿಕ್ಷಕರು ಹಾಗೂ ಮತದಾರರನ್ನು ಭೇಟಿಯಾಗಿ ಮತಯಾಚಿಸಿದ ಅವರು, ತಾವಂತು ಈಗ ನಿವೃತ್ತಿಯಾಗಿದ್ದು, ಹಗಲಿರಳು ಕನ್ನಡ ಹಾಗೂ ಸಾಹಿತ್ಯ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ತಮ್ಮ ಅವಧಿಯಲ್ಲಂತೂ ಅಖೀಲ ಭಾರತ ಸಾಹಿತ್ಯ ಸಮ್ಮೇಳನ, ಸಮ್ಮೇಳನಾಧ್ಯಕ್ಷತೆ ತಂದಿರುವುದು ಸೇರಿದಂತೆ ಇತರ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ಎಲ್ಲ ಮತದಾರರಿಗೆ ಸಂಪೂರ್ಣ ಅರಿವಿದೆ. ತಮ್ಮ ಸೇವಾ ಸಾಧನೆ ಗುರುತಿಸಿ ಹಾಗೂ ಮತ್ತಷ್ಟು ಹೊಸ-ಹೊಸ ಯೋಜನೆಗಳನ್ನು ಕೈಗೊಳ್ಳಲು ಜತೆಗೆ ಬಾಪುಗೌಡ ದರ್ಶನಾಪುರ ರಂಗ ಮಂದಿರ ಸುಂದರವಾಗಿ ಅಭಿವೃದ್ಧಿಗೊಳ್ಳಲು ಪ್ರಮುಖವಾಗಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಕಲಬುರಗಿಗೆ ತರಲು ಮಗದೊಮ್ಮೆ ತಮಗೆ ಅವಕಾಶ ನೀಡಬೇಕೆಂದು ಸಿಂಪಿ ಕೋರಿದರು. ಈ ಸಂದರ್ಭದಲ್ಲಿ ದೌಲತರಾವ ಪಾಟೀಲ್ ಸೇರಿದಂತೆ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ