18 ಸಾಹಿತಿಗಳಿಗೆ ರಾಜ್ಯಮಟ್ಟದ ಬಸವ ಪುರಸ್ಕಾರ ಪ್ರದಾನ


Team Udayavani, May 9, 2022, 10:15 AM IST

3award

ಕಲಬರುಗಿ: 12ನೇ ಶತಮಾನದಲ್ಲಿ ಅಶಾಂತಿ ಅಧರ್ಮ, ಮೌಡ್ಯತೆ, ಕಂದಾಚಾರಗಳು ವಿಜೃಂಭಿಸುತ್ತಿದ್ದವು. ಆಗ ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಶರಣರನ್ನು ಒಂದುಗೂಡಿಸಿ ಸಮ ಸಮಾಜ ನಿರ್ಮಾಣ ಮಾಡಿದರು ಎಂದು ಗುವಿವಿ ಕುಲಪತಿ ಪ್ರೊ| ದಯಾನಂದ ಅಗಸರ್‌ ವ್ಯಾಖ್ಯಾನಿಸಿದರು.

ಗುವಿವಿ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ರವಿವಾರ ಪಾಳಾ ಗ್ರಾಮದ ಸುಭಾಶ್ಚಂದ್ರ ಪಾಟೀಲ್‌ ಸ್ಮಾರಕ ಜನಕಲ್ಯಾಣ ಟ್ರಸ್ಟ್‌ ನಾಲ್ಕನೇ ವರ್ಷದ ಬಸವ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 18 ಸಾಹಿತಿಗಳಿಗೆ 2022ನೇ ಸಾಲಿನ ರಾಜ್ಯಮಟ್ಟದ ಬಸವ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.

ಬಸವ ಪುರಸ್ಕಾರ ಪಡೆದ 18 ಸಾಹಿತಿಗಳಿಗೆ ಜವಾಬ್ದಾರಿ ಹೆಚ್ಚಿಸಿದೆ. ಪ್ರಶಸ್ತಿ ಪ್ರತಿಭೆಗಳನ್ನು ಅರಿಸಿಕೊಂಡು ಹೋಗಬೇಕು ಆಗ ಮಾತ್ರ ಪ್ರಶಸ್ತಿಗಳ ಮೌಲ್ಯ ಹೆಚ್ಚುತ್ತದೆ. ಇದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಆದರೆ, ಇವತ್ತು ಕೆಲವರು ಪ್ರಶಸ್ತಿಗಳನ್ನು ಅರಸಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಅವುಗಳ ಮೌಲ್ಯವೂ ಕುಸಿಯುತ್ತಿದೆ. ಈ ವೇಳೆಯಲ್ಲಿ ಪಾಳಾದ ಸುಭಾಶ್ಚಂದ್ರ ಪಾಟೀಲ್‌ ಸ್ಮಾರಕ ಜನಕಲ್ಯಾಣ ಟ್ರಸ್‌ ಸೂಕ್ತ ಸಾಹಿತಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ಮೌಲ್ಯಯುತ ಎಂದರು.

ಸಾನಿಧ್ಯವಹಿಸಿದ್ದ ಚಿಗರಹಳ್ಳಿ ಮರುಳಸಿದ್ದೇಶ್ವರ ದೇವರ ಗುರುಪೀಠದ ಸಿದ್ಧಬಸವ ಕಬೀರ ಮಹಾ ಸ್ವಾಮಿಗಳು ಮಾತನಾಡುತ್ತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಳೆದುಕೊಳ್ಳುತ್ತಿವೆ. ಮೌಲ್ಯಗಳನ್ನು ರೂಪಿಸಲು ಬಸವ ಪುರಸ್ಕಾರದ ಮೂಲಕ ಶರಣಗೌಡ ಪಾಟೀಲ ಪಾಳಾ ಅವರು ಮಾಡಿದ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಸಾರ್ವಜನಿಕ ಇಲಾಖೆ ಗ್ರಂಥಾಲಯ ನಿರ್ದೇಶಕ ಡಾ ಸತೀಶ್‌ ಕುಮಾರ್‌ ಹೊಸಮನಿ ಮಾತನಾಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಡೀನ್‌ (ಕಲಾನಿಕಾಯ) ಪ್ರೊ| ರಮೇಶ ರಾಠೊಡ್‌ ಅಧ್ಯಕ್ಷತೆವಹಿಸಿದ್ದರು. ಗುಲಬರ್ಗಾ ವಿಶ್ವ ವಿದ್ಯಾ ಲಯದ ಸೆನೆಟ್‌ ಸದಸ್ಯ ರಾಜೇಂದ್ರ ಕಗ್ಗನಮಡಿ ಅತಿಥಿಗಳಾಗಿದ್ದರು. ಸುಭಾಶ್ಚಂದ್ರ ಪಾಟೀಲ್‌ ಸ್ಮಾರಕ ಜನಕಲ್ಯಾಣ ಟ್ರಸ್ಟ್‌ ಅಧ್ಯಕ್ಷ ಶರಣಗೌಡ ಪಾಟೀಲ, ಪಾಳಾ ಸ್ವಾಗತಿಸಿದರು. ಬಿ ಎಚ್‌ ನಿರಗುಡಿ ಪ್ರಾಸ್ತಾವಿಕ ಮಾತನಾಡಿದರು. ಡಾ| ಶರಣಬಸವ ವಡ್ಡಕೇರಿ ನಿರೂಪಿಸಿದರು. ಡಾ| ಶಿವಶಂಕರ ಬಿರಾದಾರ, ಹಾಗೂ ಕಿರಣ್‌ ಪಾಟೀಲ ಅವರ ತಂಡದಿಂದ ಜರುಗಿದ ವಚನಗಳ ಗಾಯನ ಮನ ಸೆಳೆಯಿತು. ಡಾ| ವಿಜಯಕುಮಾರ ಪರುತೆ, ಡಾ| ಆನಂದ ಸಿದ್ಧಮಣಿ, ಸಂತೋಷ ತೊಟ್ನಳ್ಳಿ, ಮಂಗಲಾ ಕಪರೆ, ನಾಗರಾಜ ಕಲ್ಲಾ, ಜಗದೀಶ ಪಾಟೀಲ ಸಣ್ಣೂರ ಇತರರು ಇದ್ದರು.

ಪ್ರಶಸ್ತಿಗೆ ಭಾಜನರಾದ ಸಾಹಿತಿಗಳು

ಸತೀಶಕುಮಾರ ಹೊಸಮನಿ (ಕಾವ್ಯಧಾರೆ), ಬಸವರಾಜ ಪೊಲೀಸ್‌ ಪಾಟೀಲ್‌ (ಜಾನಪದ ಸಂಪದ), ಶಿವಕವಿ ಹಿರೇಮಠ ಜೋಗೂರು (ಮಹಾತಪಸ್ವಿ), ಡಾ| ಕೆ.ವಿ. ರಾಜೇಶ್ವರಿ (ಅಪರೂಪದ ರಾಜಕಾರಣಿರಿ-ಲಾಲ್‌ ಬಹಾದ್ದೂರ ಶಾಸ್ತ್ರೀ), ಬಸವರಾಜ ಕಡ್ಡಿ (ಅರಿವಿನ ಬೆಳಕು), ಕಾವ್ಯಶ್ರೀ ಮಹಾಗಾಂವಕರ್‌ (ಬಟ್ಟೆಯೊಳಗಿನ ಚಿತ್ತಾರ), ಶೈಲಜಾ ಎನ್‌. ಬಾಗೇವಾಡಿ (ಅಂತರಂಗದ ಅಕ್ಷರ ಲೋಕ), ತಯಬಲಿ ಹೊಂಬಳ (101ಮಕ್ಕಳ ಕಥೆಗಳು-3), ಶಿವಪುತ್ರ ಕಂಠಿ ಚಿಂಚನಸೂರ್‌ (ಶರಣರ ಜೀವನ ದರ್ಶನ ಮತ್ತು ವಚನಾಂತರಾಳ), ಸಹನಾ ಕಾಂತಬೆ„ಲು (ಇದು ಬರೀ ಮಣ್ಣಲ್ಲ), ಸಂಗಮೇಶ ಉಪಾಸೆ (ದೇವರುಗಳಿವೆ ಎಚ್ಚರಿಕೆ), ಸನಾವುಲ್ಲಾ ನವಿಲೆಹಾಳು (ಪಂಜು), ಬನ್ನಪ್ಪ ಬಿ.ಕೆ. (ನೈತಿಕ ಶಿಕ್ಷಣ), ಮಧುರಾ ಮೂರ್ತಿ (ಮಧುರ ಗಝಲ್‌), ಅನನ್ಯ ತುಷಿರಾ (ಅರ್ಧ ನೆನಪು ಅರ್ಧ ಕನಸು), ಮಕರಂದ ಮನೋಜ್‌ (ಮನೋಜ್ಞ ಹೈಕುಗಳು), ಸಂಕಲ್ಪ (ಅನಂದ ಪುಷ್ಟ).

ಟಾಪ್ ನ್ಯೂಸ್

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಸಚಿವರು ಲೀಡ್‌ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್‌

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ

ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.