ಸುಲೇಪೇಟ್: ಇಬ್ಬರು ಕಳ್ಳರ ಬಂಧನ
Team Udayavani, Nov 25, 2021, 11:20 AM IST
ಚಿಂಚೋಳಿ: ತಾಲೂಕಿನ ಸುಲೇಪೇಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹೊಲಗಳಲ್ಲಿ ಅಳವಡಿಸಿದ್ದ ಸೋಲಾರ್ ಪ್ಲೇಟ್, ಬ್ಯಾಟರಿ ಮತ್ತು ಸ್ಪೇಪ್ಲೈಜರ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸುಲೇಪೇಟ ಸಿಪಿಐ ಜಗದೀಶ ಕೆ.ಜಿ ತಿಳಿಸಿದ್ದಾರೆ.
ಕೊರವಿ ಗ್ರಾಮದಲ್ಲಿನ ಗಾಂಧಿನಗರ ತಾಂಡಾದ ಸುನೀಲ ಶೇಖರಪ್ಪ ಜಾಧವ, ಮಿಥನ್ ಸೂರುನಾಥ ಚವ್ಹಾಣ ಬಂಧಿತ ಆರೋಪಿತರು. ಈ ರೈತರು ತಮ್ಮ ಹೊಲಗಳಲ್ಲಿ ಕಾಡು ಪ್ರಾಣಿಗಳು ಬೆಳೆ ನಾಶ ಮಾಡಬಾರದೆಂಬ ಉದ್ದೇಶದಿಂದ ಅಳವಡಿಸಿದ್ದ ಸೋಲಾರ್ ಬ್ಯಾಟರಿ, ಸೋಲಾರ ಪ್ಲೇಟ್, ಬ್ಯಾಟರಿಗಳನ್ನು ರಾತ್ರಿ ಸಮಯದಲ್ಲಿ ಕಳ್ಳತನ ಮಾಡುತ್ತಿರುವ ಕುರಿತು ಹೊಡೆಬೀರನಳ್ಳಿ ಗ್ರಾಮದ ರೈತ ಹಬೀಬ ಪಟೇಲ್ ದೂರು ನೀಡಿದ್ದರು. ಮಂಗಳವಾರ ಮಧ್ಯಾಹ್ನ ಕೊರವಿ ಗಾಂಧಿನಗರ ತಾಂಡಾದಲ್ಲಿ ಕಳ್ಳರು ಇರುವ ಕುರಿತು ಖಚಿತ ಮಾಹಿತಿ ಆಧರಿಸಿ ಅಪರಾಧ ಪಿಎಸ್ಐ ಉದ್ದಂಡಪ್ಪ, ಪಿಎಸ್ಐ ಸುಖಾನಂದ ಸಿಂಗೆ ಮತ್ತು ಕಾನ್ಸ್ಟೆàಬಲ್ಗಳಾದ ಚಂದ್ರಕಾಂತ, ಮಂಜುನಾಥ, ಶರಣಪ್ಪ, ಮೇಘನಾಥರೆಡ್ಡಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿತರು ಹೊಡೆಬೀರನಳ್ಳಿ, ಕೊರವಿ, ಕೊರವಿ ತಾಂಡಾ, ಕುಡಹಳ್ಳಿ,ಬೆನಕನಳ್ಳಿ ಮತ್ತು ರೈತರು ತಮ್ಮ ಸವಳಿನ ಕಂಪನಿಗಳಲ್ಲಿ ಅಳವಡಿಸಿದ 12ಬ್ಯಾಟರಿ, ಆರು ಸೋಲಾರ್ ಪ್ಲೇಟ್, ನಾಲ್ಕು ಸ್ಟೆಪ್ಲೇಜರ್, ಯುಪಿಎಸ್ ಸೇರಿ ಒಟ್ಟು 2 ಲಕ್ಷ ರೂ. ಮೌಲ್ಯ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಸುಲೇಪೇಟ ಸಿಪಿಐ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ