ಸಮಾಜಕ್ಕೆ ಜೀವನ ಸವೆಸಿದ್ದರು ಇಂಗಿನಶೆಟ್ಟಿ
Team Udayavani, Dec 22, 2021, 2:25 PM IST
ಶಹಾಬಾದ: ಸಮಾಜದ ಏಳ್ಗೆಗಾಗಿ ತ್ಯಾಗ ಮಯಿ ಜೀವನ ಸವೆಸಿದ ತ್ಯಾಗವೀರ ಸಂತೋಷ ಇಂಗಿನಶೆಟ್ಟಿ ಅವರ ತ್ಯಾಗ ಸ್ಮರಣಾರ್ಹವಾದದ್ದು ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ದಿ.ಸಂತೋಷ ಇಂಗಿನಶೆಟ್ಟಿ ಗೆಳೆಯರ ಬಳಗದ ವತಿಯಿಂದ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ದಿ.ಸಂತೋಷಕುಮಾರ ಇಂಗಿನಶೆಟ್ಟಿ ಜನ್ಮದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ತಾವು ಬದುಕುವುದರೊಂದಿಗೆ ಸಮಾಜದಲ್ಲಿರುವ ಹಲವಾರು ಸಂಘ, ಸಂಸ್ಥೆಗಳಿಗೆ, ಉದಯೋನ್ಮುಖ ಬರಹಗಾರರಿಗೆ, ಕವಿಗಳಿಗೆ ಹಾಗೂ ಕಷ್ಟದಲ್ಲಿರುವ ಜನರಿಗೆ ದಾನಿಗಳಾಗಿ, ಸಮಾಜಮುಖೀಯಾಗಿ ಬದುಕಿನ ಸಾರ್ಥಕ ಜೀವನ ನಡೆಸಿದವರು ಅವರು ಎಂದರು.
ಎಪಿಎಂಸಿ ಅಧ್ಯಕ್ಷ ಸಿದ್ಧುಗೌಡ ಅಫಜಲಪುರಕರ್, ಅಣವೀರ ಇಂಗಿನಶೆಟ್ಟಿ, ಡಾ|ರಶೀದ್ ಮರ್ಚಂಟ್, ದಿಲೀಪ ನಾಯಕ, ನಿಂಗಣ್ಣ ಹುಳಗೋಳಕರ್, ಅಣ್ಣಪ್ಪ ದಸ್ತಾಪುರ, ನಾಗರಾಜ ಮೇಲಗಿರಿ, ಡಿ.ಸಿ.ಹೊಸಮನಿ, ಸೂರ್ಯಕಾಂತ ಕೋಬಾಳ, ಡಾ| ಅಹ್ಮದ್ ಪಟೇಲ, ಸದಾನಂದ ಕುಂಬಾರ, ಭೀಮಯ್ಯ ಗುತ್ತೆದಾರ, ವಿರೇಶ ಬಂದಳ್ಳಿ, ರಾಜೇಶ ಯನಗುಂಟಿಕರ್, ಮೀರ ಅಲಿ ನಾಗೂರೆ, ಕಿರಣ ಚವ್ಹಾಣ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್