ಪರರ ದುಃಖದಲ್ಲಿ ಪಾಲ್ಗೊಂಡವರೇ ನಿಜವಾದ ಬುದ್ದ
Team Udayavani, Nov 7, 2021, 9:56 AM IST
ವಾಡಿ: ಮಾನವನ ದುಃಖದ ಮೂಲ ಪತ್ತೆಹಚ್ಚಿದ ಸಿದ್ಧಾರ್ಥನನ್ನು ಇಡೀ ವಿಶ್ವವೇ ಬುದ್ಧ ಎಂದು ಕರೆಯಿತು. ಅಂಬೇಡ್ಕರ್ ಮತ್ತು ಬುದ್ಧನ ಅನುಯಾಯಿಗಳು ಪರರ ದುಃಖದಲ್ಲಿ ಪಾಲ್ಗೊಳ್ಳುವ ಮೂಲಕ ಬುದ್ಧನಾಗಿ ಹೊರ ಹೊಮ್ಮಬೇಕು ಎಂದು ಬೌದ್ಧ ಭಿಕ್ಷು, ಮಹಾಥೇರೊ ಬೋದಿಧಮ್ಮ ಜಪಾನ್ ಹೇಳಿದರು.
ಅಂತಾರಾಷ್ಟ್ರೀಯ ಬೌದ್ಧ ಯುವ ಸಂಘಟನೆ, ಡಾ| ಬಿ.ಆರ್.ಅಂಬೇಡ್ಕರ್ ತರುಣ ಸಂಘದ ವತಿಯಿಂದ ಶುಕ್ರವಾರ ನಗರದ ಅಂಬೇಡ್ಕರ್ ಕಾಲೋನಿಯ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಏರ್ಪಡಿಸಲಾಗಿದ್ದ ಆರು ದಿನಗಳ ಜಪಾನೀಸ್ ಜೆನ್ ಧ್ಯಾನ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು.
ಪ್ರಬುದ್ಧ ಭಾರತ ನಿರ್ಮಿಸಲು ಅಂಬೇಡ್ಕರ್ ಆಶಯದಂತೆ ಬುದ್ಧನ ಮಾರ್ಗದಲ್ಲಿ ನಡೆಯಬೇಕು ಎನ್ನುವವರು ಕೊಲ್ಲುವ ಪವೃತ್ತಿಯಿಂದ ಹೊರಬರಬೇಕು. ಮೋಸ, ವಂಚನೆ, ಮಾನಭಂಗ, ಅತ್ಯಾಚಾರ, ದೌರ್ಜನ್ಯಗಳಂತ ಅಮಾನವೀಯ ಕೃತ್ಯಗಳಿಗೆ ಕೈಹಾಕಬಾರದು. ಇತರರ ದುಃಖವನ್ನು ತನ್ನ ದುಃಖವಾಗಿ ಸ್ವೀಕರಿಸುವ ಜತೆಗೆ ನರರ ಪ್ರಾಣ ರಕ್ಷಣೆ ಬೌದ್ಧನ ಕರ್ತವ್ಯವಾಗಿದೆ ಎಂಬುದನ್ನು ಮನನ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಬುದ್ಧತ್ವ ಪ್ರಾಪ್ತಿಯಾಗುತ್ತದೆ ಎಂದರು.
ಮೈತ್ರಿ ಮಾರ್ಗದಲ್ಲಿ ಸಾಗುವವರು ಬೌದ್ಧ ಧಮ್ಮವನ್ನು ಹೆಚ್ಚು ಜನರಿಗೆ ತಲುಪಿಸಬಲ್ಲರು. ಕಷ್ಟದಲ್ಲಿರುವವರಿಗೆ ಹಣದಿಂದ ಸಹಾಯ ಮಾಡಲಾಗದಿದ್ದರೂ ಆತ್ಮಸ್ತೈರ್ಯ ತುಂಬುವ ಸರಳ ಕೆಲಸ ಮಾಡಿದರೆ ಇತರರ ಬದುಕಿನಲ್ಲಿ ಹೊಸ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಂಬೇಡ್ಕರ್ ತರುಣ ಸಂಘದ ಅಧ್ಯಕ್ಷ ಸಂದೀಪ ಕಟ್ಟಿ, ಮುಖಂಡರಾದ ಸಂತೋಷ ಜೋಗೂರ, ಕಿಶೋರಕುಮಾರ ಸಿಂಗೆ ಹಾಗೂ ಬೌದ್ಧ ಉಪಾಸಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು