ಶ್ರೀರಾಮನ ವನವಾಸ ನೆನಪಿಸಿದ ವ್ರತ; ಗೋಣಿಚೀಲ ತೊಟ್ಟು 11 ದಿನ ಪಾದಯಾತ್ರೆ

ಭಕ್ತಾದಿಗಳು 11 ದಿನಗಳ ಕಾಲ ಸಂಪೂರ್ಣ ಫಲಹಾರ ಮಾತ್ರ ಸೇವಿಸಿ ವ್ರತ ಆಚರಿಸಿದರು.

Team Udayavani, Aug 4, 2021, 6:09 PM IST

ಶ್ರೀರಾಮನ ವನವಾಸ ನೆನಪಿಸಿದ ವ್ರತ; ಗೋಣಿಚೀಲ ತೊಟ್ಟು 11 ದಿನ ಪಾದಯಾತ್ರೆ

ಆಳಂದ: ಭಾರತೀಯ ಸಂಸ್ಕೃತಿ, ಪರಂಪರೆ, ಪ್ರಾಚೀನ ಗತವೈಭವ ಸಾರುವ ರಾಮಾಯಣದ ಆದರ್ಶ ಪುರುಷ ಶ್ರೀರಾಮಚಂದ್ರ ಕೈಗೊಂಡಿದ್ದ 14 ವರ್ಷದ ವನವಾಸ ಸ್ಮರಣಾರ್ಥವಾಗಿ ನಿರಗುಡಿ ಗ್ರಾಮದ 14 ಮಂದಿ ಭಕ್ತಾದಿಗಳು ಸೇರಿ ಶ್ರೀರಾಮನ ದೇವಸ್ಥಾನಗಳಿಗೆ ತೆರಳಿ ವನವಾಸ ವ್ರತಾಚರಣೆ ಕೈಗೊಂಡರು.

ತಾಲೂಕಿನ ನಿರಗುಡಿ ಗ್ರಾಮದ ಹನುಮಾನ ದೇವಸ್ಥಾನ ಸಮಿತಿ ಮುಖಂಡರು ದೇಗುಲದ ಶಿಖರ, ಕಳಸಾಹರೋಹಣ ನೆರವೇರಿಸಿ ಬಳಿಕ ನಿರಗುಡಿಯ ಮಲ್ಲಯ್ನಾ ಮುತ್ಯಾ ಮಾರ್ಗದರ್ಶನದಲ್ಲಿ ಗ್ರಾಮದಲ್ಲಿ ಸುಖ-ಶಾಂತಿ ನೆಲಸುವಂತಾಗಿಸಲು ಎಲ್ಲರೂ ಸೇರಿ 11 ಗ್ರಾಮಗಳಿಗೆ ಪಾದಯಾತ್ರೆ ಕೈಗೊಂಡು ವನವಾಸ ವ್ರತಾಚರಣೆ ಮಾಡಿದರು.

ವನವಾಸದ ವೇಳೆ ಅಂದು ಶ್ರೀರಾಮಚಂದ್ರ ತೊಟ್ಟಿದ್ದ ಗೋಣಿ ಚೀಲ ಹೊದ್ದುಕೊಂಡಿದ್ದನಂತೆ. ಅದೇ ರೀತಿ ಭಕ್ತಾದಿಗಳು ಗೋಣಿ ಚೀಲ ಹೊದ್ದು 11 ದಿನಗಳ ಕಾಲ ಮನೆ ತೊರೆದು ಪಾದಯಾತ್ರೆ ಮೂಲಕ ಬಸವ ಕಲ್ಯಾಣ ತಾಲೂಕಿನ ರಾಮತೀರ್ಥ ಗುಂಡ, ಚಿಂಚೋಳಿ ತಾಲೂಕಿನ ಸಿರಸಂಗಿ, ಉಜಳಂಬಿ, ಬಸವ ಕಲ್ಯಾಣದ ಜಳಕಾಪುರ, ಹಾರಕೂಡ, ಮುಡಬಿವಾಡಿ, ಕಲಬುರಗಿ ತಾಲೂಕಿನ ಕಮಲಾಪುರ, ರಟಗಲ್‌, ವಟವಟಿ, ಮಹಾಗಾಂವ್‌ ಕ್ರಾಸ್‌, ಬಬಲಾದ ಮಠ, ಆಳಂದ ತಾಲೂಕಿನ ಬಾಳಿ, ಕೊರಳ್ಳಿ ಡ್ಯಾಂನ್‌ ಮಲ್ಲಯ್ಯ ಮುತ್ತಾ ಆಶ್ರಮ, ಜಿಡಗಾ ಮಠ, ಖಾನಾಪುರದ ಚನ್ನವೀರ ಮಠಕ್ಕೆ ತೆರಳಿ ಕೊನೆಯದಾಗಿ ನಿರಗುಡಿ ಗ್ರಾಮಕ್ಕೆ ತಲುಪಿ ವ್ರತಾಚರಣೆ ಸಮಾರೋಪ ಕೈಗೊಂಡರು.

ವನವಾಸದಿಂದ ಮರಳಿ ಬಂದ ವ್ರತಾಧಾರಿಗಳಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಭಕ್ತರು ಡೊಳ್ಳು ಬಾರಿಸಿ, ಭಜನೆ ಮಾಡಿದರೆ, ಸುಮಂಗಲೆಯರು ಕುಂಭ, ಕಳಸ ಹೊತ್ತು ಮೆರವಣಿಗೆಗೆ ಮೆರಗು ನೀಡಿದರು. ನಂತರ ಹನುಮಾನ, ಶ್ರೀ ರಾಮ ಚಂದ್ರನಿಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದಲ್ಲಿ ಮಳೆ, ಬೆಳೆ ಸರಿಯಾಗಿ ಆಗಲಿ, ಸುಖ-ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಲಾಯಿತು.

ದಶರಥನ ಪತ್ನಿ ಕೈಕೇಯಿ ತನ್ನ ಮಗ ಭರತನಿಗೆ ರಾಜ್ಯಾಭಿಷೇಕ ಮಾಡಬೇಕು ಎನ್ನುವ ಉದ್ದೇಶದಿಂದ ಶ್ರೀ ರಾಮನಿಗೆ 14 ವರ್ಷ ಕಾಲ ವನವಾಸಕ್ಕೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು. ಶ್ರೀ ರಾಮಚಂದ್ರ, ಲಕ್ಷ್ಮಣ, ಸೀತೆ ವನವಾಸ ಮುಗಿಸಿ ಮತ್ತೆ ರಾಜ್ಯಾಭಿಷೇಕ ಸ್ವೀಕರಿಸಿದ ಐತಿಹ್ಯವನ್ನು ಮರುಕಳಿಸಿದ ಭಕ್ತಾದಿಗಳು 11 ದಿನಗಳ ಕಾಲ ಸಂಪೂರ್ಣ ಫಲಹಾರ ಮಾತ್ರ ಸೇವಿಸಿ ವ್ರತ ಆಚರಿಸಿದರು. ಪ್ರಮುಖರಾದ ಕಲ್ಯಾಣಿ ಬಿರಾದಾರ, ಸಿದ್ಧು ಯಬರಾಸೆ, ಶಂಕರ ನಾಗೂರೆ, ಪರಮೇಶ್ವರ ಮುರುಮೆ, ದಸ್ತಗೀರ ಬಾವಡೆ, ಮಹೇಶ ಸುತಾರ, ಕಲ್ಲಪ್ಪ ನಿಂಬಾಳ, ಚಂದ್ರಕಾಂತ ಅಣೂರೆ, ಹಸನ ಮುರುಮಕರ್‌, ಶಿವಲಿಂಗಪ್ಪ ಗಡಶೆಟ್ಟಿ, ಸೋಮಲಿಂಗ ಗಾಡೆಕರ್‌, ಪ್ರಭು ಕುರನೆ, ಕಮಲಾಬಾಯಿ ನಾಗೂರೆ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಗ್ರಾಮದಲ್ಲಿ ಸುಖ-ಶಾಂತಿ ನೆಲೆಸಲೆಂದು ಹನುಮಾನ್‌ ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ ಬಾಬುರಾವ್‌ ಬಿರಾದಾರ ನೇತೃತ್ವದಲ್ಲಿ ವನವಾಸ ವ್ರತಾಚರಣೆ ಕೈಗೊಳ್ಳುವಂತೆ ಶ್ರೀ ಮಲ್ಲಯ್ನಾ ಮುತ್ಯಾ ಸಲಹೆ ನೀಡಿದ್ದರ ಮೇರೆಗೆ ಭಕ್ತಾದಿಗಳು ವನವಾಸ ವ್ರತಾಚರಣೆ ಕೈಗೊಂಡಿದ್ದಾರೆ.
ಆನಂದ ಎಸ್‌. ದೇಶಮುಖ, ನಿರಗುಡಿ

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.