ಸೋಂಕಿತ 9 ಜನ ಊರೊಳಗೆ-ಸೋಂಕಿಲ್ಲದವ ಆಸ್ಪತ್ರೆಗೆ!

ಅಧಿಕಾರಿಗಳ ಎಡವಟ್ಟು: ದೇವಾಪುರ ತಾಂಡಾದಲ್ಲಿ ಆತಂಕ

Team Udayavani, May 31, 2020, 10:52 AM IST

31-May-01

ವಾಡಿ: ಕ್ವಾರಂಟೈನ್‌ ಕೇಂದ್ರದಿಂದ ಬಿಡುಗಡೆಯಾದ ಬಳಿಕ ಮಹಾಷ್ಟ್ರದಿಂದ ಆಗಮಿಸಿದ ಗುಳೆ ಕಾರ್ಮಿಕರ ಕೋವಿಡ್ ವರದಿ ಪ್ರಕಟಗೊಂಡಿದ್ದು, ಎರಡು ದಿನ ಊರೊಳಗೆ ಅಡ್ಡಾಡಿದ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋವಿಡ್ ಪಾಜಿಟಿವ್‌ ಬಂದವನನ್ನು ಊರೊಳಗೆ ಬಿಟ್ಟು, ನೆಗೆಟಿವ್‌ ಬಂದಾತನನ್ನು ಅಧಿಕಾರಿಗಳು ಚಿಕಿತ್ಸೆಗೆ ದಾಖಲಿಸಿದ್ದಾರೆ ಎನ್ನುವ ಇನ್ನೊಂದು ಎಡವಟ್ಟು ನಡೆದಿರುವುದು ಬೆಳಕಿಗೆ ಬಂದಿದ್ದು, ತೀವ್ರ ಆತಂಕ ಮೂಡಿಸಿದೆ. ಚಿತ್ತಾಪುರ ತಾಲೂಕಿನ ಕರದಾಳ ಕಸ್ತೂರಿಬಾ ವಸತಿ ಶಾಲೆ ಕ್ವಾರಂಟೈನ್‌ ಕೇಂದ್ರದಲ್ಲಿ 14 ದಿನ ಕಳೆದ ಬಳಿಕ ವಿವಿಧ ಗ್ರಾಮ ಮತ್ತು ತಾಂಡಾಗಳಿಗೆ ಸೇರಿದ ಮಹಾರಾಷ್ಟ್ರದ ವಲಸಿಗರನ್ನು ಗಂಟಲು ದ್ರಾವಣದ ವರದಿ ಬರುವ ಮುಂಚೆಯೇ ಬಿಡುಗಡೆಗೊಳಿಸಲಾಗಿತ್ತು. ಇವರೆಲ್ಲ ದೇವಾಪುರ ತಾಂಡಾಕ್ಕೆ ಸೇರಿದ 10 ಜನರಾಗಿದ್ದಾರೆ.

ಈ ಹತ್ತು ವಲಸಿಗರು ಕ್ವಾರಂಟೈನ್‌ ಕೇಂದ್ರದಿಂದ ಬಿಡುಗಡೆಯಾಗಿ ಊರೊಳಗೆ ಪ್ರವೇಶಿಸಿದ ಎರಡು ದಿನದ ಬಳಿಕ ಒಂಭತ್ತು ಜನರಿಗೆ ಸೋಂಕು ಇರುವುದು ಪತ್ತೆಯಾಗಿತ್ತು. ಒಬ್ಬನಿಗೆ ನೆಗೆಟಿವ್‌ ಬಂದಿತ್ತು. ಸೋಂಕು ಖಚಿತವಾದ ವ್ಯಕ್ತಿ ತಾಂಡಾದೊಳಗೆ ಉಳಿದುಕೊಂಡಿದ್ದಾನೆ. ಈತ ತನ್ನ ಕುಟುಂಬ ಸದಸ್ಯರೊಂದಿಗೆ ಬೆರೆತಿದ್ದಾನೆ.

ತಾಂಡಾದಲ್ಲೆಲ್ಲ ಅಲೆದಾಡಿದ್ದಾನೆ. ವಾಡಿ ಪಟ್ಟಣಕ್ಕೂ ಹೋಗಿ ಸುತ್ತಾಡಿ ಬಂದಿದ್ದಾನೆ. ಅಧಿಕಾರಿಗಳಿಗೆ ತಪ್ಪಿನ ಅರಿವಾದ ಬಳಿಕ ಶನಿವಾರ ದೇವಾಪುರ ತಾಂಡಾಕ್ಕೆ 108 ವಾಹನ ಕಳಿಸಿ ಸೋಂಕಿತನನ್ನು ವಶಕ್ಕೆ ಪಡೆಯುವ ಮೂಲಕ ಆಸ್ಪತ್ರೆಗೆ ಸೇರಿಸಿದ್ದಾರೆ ಎಂದು ಕಮರವಾಡಿ ಗ್ರಾ.ಪಂ ಸದಸ್ಯ ಹೀರಾ ಜಾಧವ ಹಾಗೂ ದೇವಾಪುರ ತಾಂಡಾ ನಿವಾಸಿ ಪ್ರೇಮಕುಮಾರ ರಾಠೊಡ ಆಪಾದಿಸಿದ್ದಾರೆ. ಈ ನಡುವೆ ಮಹಾಮಾರಿ ಕೊರೊನಾ ಕಟ್ಟಿಹಾಕಲು ಮಹಾರಾಷ್ಟ್ರದ ವಲಸಿಗರಿಗೆ 14 ದಿನಗಳ ಕ್ವಾರಂಟೈನ್‌ ಮಾಡಿದರೂ ಅಧಿ ಕಾರಿಗಳ ಎಡವಟ್ಟಿನಿಂದ ಸೋಂಕು ಗ್ರಾಮದೊಳಗೆ ಪ್ರವೇಶ ಪಡೆದಿದೆ. ಹೀಗಾಗಿ ಹಳಕರ್ಟಿ ಗ್ರಾ.ಪಂ ವ್ಯಾಪ್ತಿಯ ದೇವಾಪುರ ತಾಂಡಾದ ಜನರಲ್ಲಿ ಭೀತಿ ಶುರುವಾಗಿದೆ.

ಸ‌ರ್ಕಾರದ ಆದೇಶದಂತೆ ಬಿಡುಗಡೆ
ದೇವಾಪುರ ತಾಂಡಾಕ್ಕೆ ಸೇರಿದ ಮಹಾರಾಷ್ಟ್ರದ ವಲಸಿಗರನ್ನು 14 ದಿನಗಳ ಕ್ವಾರಂಟೈನ್‌ ಪೂರ್ಣಗೊಂಡ ಬಳಿಕ ಬಿಡುಗಡೆ ಮಾಡಬೇಕು ಎನ್ನುವ ಸರಕಾರದ ಆದೇಶದಂತೆ ಬಿಡುಗಡೆ ಮಾಡಿದ್ದೇವೆ. ಇದಕ್ಕೂ ಮೊದಲು ಅವರ ಗಂಟಲು ದ್ರಾವಣ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ತಾಂಡಾದ 10 ಜನರಲ್ಲಿ ಸೋಂಕು ದೃಢಪಟ್ಟ ಬಳಿಕ ಮತ್ತೆ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಅಲ್ಲದೇ ಒಂದೇ ಮನೆಯ ಸಹೋದರರು ನೀಡಿದ ತಪ್ಪು ಮಾಹಿತಿಯಿಂದಾಗಿ ಸೋಂಕಿತ ಮನೆಯಲ್ಲೇ ಉಳಿದು, ಸೋಂಕಿಲ್ಲದ ಯುವಕ ಆಸ್ಪತ್ರೆಗೆ ದಾಖಲಾದ ಅಚಾತುರ್ಯ ಘಟಿಸಿದೆ. ಈಗ ಸೋಂಕಿತ ಆಸ್ಪತ್ರೆಯಲ್ಲಿದ್ದಾನೆ. ಸೋಂಕಿಲ್ಲದಾತ ಹೋಂ ಕ್ವಾರಂಟೈನ್‌ದಲ್ಲಿ ಇದ್ದಾನೆ. ಕ್ವಾರಂಟೈನ್‌ ಪೂರ್ಣಗೊಳಿಸದವರೆಲ್ಲ ನಮ್ಮ ಆದೇಶ ಉಲ್ಲಂಘಸಿದ್ದರಿಂದ ಸೋಂಕು ಪಸರಿಸುವ ಆತಂಕ ಹೆಚ್ಚಾಗಿದೆ.
ಡಾ| ಅಮೃತ,
ಪ್ರಭಾರಿ ತಾಲೂಕು ವೈದ್ಯಾಧಿಕಾರಿ, ಚಿತ್ತಾಪುರ

ಟಾಪ್ ನ್ಯೂಸ್

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

yatnal

Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.