ಸತ್ತ ಮೇಲೆ ಸೌಲಭ್ಯ ಕೊಡ್ತೀರಾ?: ಅಂಗವಿಕಲನ ಅಳಲು
ಹೆಂಡರು ಮಕ್ಕಳನ್ನು ತವರಿಗೆ ಕಳಿಸಿ ನಾನೀಗ ಬೀದಿಗೆ ಬಿದ್ದಿದ್ದೇನೆ.
Team Udayavani, Jul 30, 2021, 5:56 PM IST
ವಾಡಿ: ನಾನು, ನನ್ನ ಹೆಂಡತಿ ಮಕ್ಕಳು ಸತ್ತಮೇಲೆ ಸೌಲಭ್ಯ ಕೊಡ್ತೀರಾ? ನಾನೇನು ಪಾಪ ಮಾಡಿದ್ದೇನೆ. ನನಗೇಕೆ ಮೋಸ ಮಾಡ್ತಿದ್ದೀರಿ. ನಾನು ಬದುಕಬಾರದಾ? ಮನೆ ಬಿದ್ದಿದೆ. ಸಂಸಾರ ದಿಕ್ಕಾಪಾಲಾಗಿದೆ. ಇದ್ದ ಕೂಲಿ ಕೆಲಸ ಕೈತಪ್ಪಿದೆ. ಬದುಕು ಬೀದಿಗೆ ಬಿದ್ದಿದೆ. ನನಗೇಕೆ ಸರ್ಕಾರ ಸಹಾಯ ಮಾಡಲ್ಲ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ಗದ್ಗದಿತನಾದ ಅಂಗವಿಕಲ ಧರ್ಮಸಿಂಗ್ ರಾಠೊಡ ಪುರಸಭೆ ಅಧಿಕಾರಿಗಳು ಮತ್ತು ವಾರ್ಡ್ ಸದಸ್ಯರನ್ನು ಕ್ಷಣಕಾಲ ಕಂಗಾಲಾಗುವಂತೆ ಮಾಡಿದ ಪ್ರಸಂಗ ಪಟ್ಟಣದಲ್ಲಿ ನಡೆದಿದೆ.
ತ್ರಿಚಕ್ರ ವಾಹ, ವಸತಿ ಸೌಲಭ್ಯ, ಧನ ಸಹಾಯ ಹಾಗೂ ವಿವಿಧ ಸರಕಾರಿ ಸೌಲಭ್ಯಗಳಿಂದ ವಂಚಿತ ನಾದ ಪಟ್ಟಣದ ಅಂಗವಿಕಲ ಧರ್ಮಸಿಂಗ್ ರಾಠೊಡ, ಗುರುವಾರ ಪುರಸಭೆ ಕಚೇರಿಗೆ ಆಗಮಿಸಿ ಮುಖ್ಯಾ ಧಿಕಾರಿ ಚಿದಾನಂದ ಸ್ವಾಮಿ ಅವರೆದುರು ಕಣ್ಣೀರು ಹಾಕಿ ಗೋಳಾಡಿದ್ದಾನೆ.
ಪುರಸಭೆ ಅನುದಾನದಡಿ ಇತ್ತೀಚೆಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರಿಂದ ಕೆಲ ಅಂಗವಿಕಲರಿಗೆ ತ್ರಿಚಕ್ರ ಬೈಕ್ ನೀಡಲಾಗಿತ್ತು. ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಗಿತ್ತು. ಕೋಲಿನ ಸಹಾಯವಿಲ್ಲದೆ ನನಗೂ ನಡೆಯಲು ಬರುವುದಿಲ್ಲ. ನನಗೇಕೆ ತ್ರಿಚಕ್ರ ವಾಹನದ ಫಲಾನುಭವಿಯಾಗಿ ಆಯ್ಕೆ ಮಾಡಿಲ್ಲ? ಕೊರೊನಾ ಕಾರಣದಿಂದ ರೈಲು ನಿಲ್ದಾಣದಲ್ಲಿನ ವಾಹನ ಪಾರ್ಕಿಂಗ್ ನಿರ್ವಹಣೆ ಕೆಲಸವೂ ಕೈತಪ್ಪಿ ವರ್ಷವಾಯಿತು.
ಮನೆ ಕಟ್ಟಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಧನಸಹಾಯ ಮಂಜೂರಾಗಿದೆ ಎಂದಿದ್ದಕ್ಕೆ ಇದ್ದ ಗುಡಿಸಲು ಮನೆ ಉರುಳಿಸಿದ್ದೇನೆ. ಈಗ ಧನಸಹಾಯ ವಾಪಸ್ ಹೋಗಿದೆ ಎನ್ನುತ್ತಿದ್ದೀರಿ. ನಾನೆಲ್ಲಿ ಬದುಕಲಿ ಹೇಳಿ? ಹೆಂಡರು ಮಕ್ಕಳನ್ನು ತವರಿಗೆ ಕಳಿಸಿ ನಾನೀಗ ಬೀದಿಗೆ ಬಿದ್ದಿದ್ದೇನೆ. ಸರ್ಕಾರದಿಂದಾಗಲಿ ಅಥವಾ ಪುರಸಭೆಯಿಂದಾಗಲಿ ನನಗೆ ಯಾವ ಸೌಲಭ್ಯವೂ ಸಿಕ್ಕಿಲ್ಲ. ಪುರಸಭೆ ಕಚೇರಿಯಲ್ಲಿ ನಾನೊಬ್ಬ ಅಂಗವಿಕಲ ಎಂದು ಹೆಸರು ದಾಖಲಾಗಿಲ್ಲ ಎಂದು ಆರೋಪಗಳ ಸುರಿಮಳೆಯನ್ನೇ ಸುರಿಸಿದ ಧರ್ಮಸಿಂಗ್ ರಾಠೊಡ.
ನನಗೆ ಬದುಕಲು ವಸತಿ ಸಹಿತ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಿ. ತ್ರಿಚಕ್ರ ವಾಹನ ನೀಡಿ ನೆರವಾಗಿರಿ. ಉಪಜೀವನಕ್ಕೆ ದಾರಿ ತೋರಿಸಿ ಎಂದು ಗೋಳಿಟ್ಟ ಪ್ರಸಂಗ ನಡೆಯಿತು. ಫಲಾನುಭವಿಯ ಅಳಲು ಕಂಡು ಸಮಾಧಾನಪಡಿಸಿದ ಮುಖ್ಯಾಧಿಕಾರಿ ಚಿದಾನಂದ ಸ್ವಾಮಿ, ನಾನು ಕೆಲವೇ ದಿನಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದೇನೆ. ಹಿಂದೆ ಏನಾಗಿದೆಯೋ ನನಗೆ ಗೊತ್ತಿಲ್ಲ. ಇನ್ನುಮುಂದೆ ನಿಮಗೆ ಪುರಸಭೆಯಿಂದ ಮಂಜೂರಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುತ್ತೇವೆ ಎಂದು ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ