ಗುಡುಗು ಸಹಿತ ಮಳೆ: ನೆಲಕಚ್ಚಿದ ಭತ್ತದ ಬೆಳೆ
600 ಎಕರೆ ಭತ್ತ ಹಾನಿ: ಸರಕಾರದ ನೆರವಿಗೆ ಆಗ್ರಹ
Team Udayavani, Apr 9, 2020, 10:38 AM IST
ಯಡ್ರಾಮಿ: ತಾಲೂಕಿನ ಕುರುಳಗೇರಾ ಗ್ರಾಮದ ಸರ್ವೇ ನಂ.17ರ ಜಮೀನಿನಲ್ಲಿ ಮಳೆ-ಬಿರುಗಾಳಿಗೆ ನೆಲಕ್ಕೆ ಬಿದ್ದ ಭತ್ತ.
ಯಡ್ರಾಮಿ: ತಾಲೂಕಿನಾದ್ಯಂತ ಮಂಗಳವಾರ ಸುರಿದ ಮಳೆಯಿಂದ ಅಪಾರ ಪ್ರಮಾಣದ ಭತ್ತದ ಬೆಳೆ ನಾಶವಾಗಿದ್ದು, ಲಾಕ್ಡೌನ್ ಜತೆಯಲ್ಲಿ ಮತ್ತೂಂದು ಬರೆ ಎಳೆದಂತಾಗಿದೆ. ಕೊರೊನಾ ಲಾಕ್ಡೌನ್ನಿಂದ ಕಲ್ಲಂಗಡಿ, ಟೊಮ್ಯಾಟೋ, ಮೆಣಸಿನಕಾಯಿ ಬೆಳೆದ ರೈತರು ಅವುಗಳನ್ನು ಸರಿಯಾದ ರೀತಿಯಲ್ಲಿ ಮಾರುಕಟ್ಟೆಗೆ ಸಾಗಿಸಲಾಗದೇ ಅಸಹಾಯಕರಾಗಿ ದನಕರುಗಳಿಗೆ ತಿನ್ನಲು ಹಾಕುತ್ತಿರುವುದು ಒಂದೆಡೆಯಾದರೆ, ಇತ್ತ ಭತ್ತ ನಾಟಿ ಮಾಡಿದ ರೈತರ ಗೋಳು ಕೇಳುವವರು ಇಲ್ಲದಂತಾಗಿದೆ.
ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳ ರೈತರು ತಮ್ಮ ಗದ್ದೆಗಳಲ್ಲಿ ಹುಲುಸಾಗಿ ಬೆಳೆದ ಭತ್ತವನ್ನು ಇನ್ನೇನು ಒಂದೇ ವಾರದಲ್ಲಿ ಕಟಾವು ಮಾಡಿ, ರಾಶಿ ಮಾಡಬೇಕೆಂದಿದ್ದರು. ಇನ್ನೇನು ಲಾಕ್ಡೌನ್ ಮುಗಿಯುತ್ತದೆ, ವಾಹನಗಳ ಓಡಾಟ ಸುಗಮವಾಗಿ, ಪಂಜಾಬಿ ಮಷೀನ್ ಗಳನ್ನು ಗದ್ದೆಗಳಿಗೆ ಇಳಿಸಿಬಿಡಬೇಕು ಎನ್ನುವ ಆತುರದಲ್ಲಿದ್ದರು. ಆದರೆ ವಿಧಿ ಯಾಟವೇ ಬೇರೆ ಆಗಿತ್ತು.
ಮಂಗಳವಾರ ಸಂಜೆ ಗುಡುಗು ಮಿಂಚು, ಬಿರುಗಾಳಿ ಜೊತೆಗೆ ಸುರಿದ ಅಕಾಲಿಕ ಮಳೆ, ಅನ್ನದಾತನ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ. ಕುರುಳಗೇರಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸುಮಾರು 600ಕ್ಕೂ ಹೆಚ್ಚಿನ ಎಕರೆ ವಿಸ್ತೀರ್ಣದ ಭತ್ತದ ಬೆಳೆ ಮಳೆ-ಬಿರುಗಾಳಿಗೆ ನೆಲಕ್ಕುರುಳಿ ಅಪಾರ ನಷ್ಟವುಂಟಾಗಿದೆ. ಮುಂಗಾರಿನಲ್ಲಿ ಬೆಳೆದ ಭತ್ತದ ಖರ್ಚುನ್ನು ಈ ಹಿಂಗಾರಿನ ಬೆಳೆ ತೂಗಿಸಿಕೊಂಡು ಹೋಗುತ್ತದೆ. ಈ ಹಿಂಗಾರಿ ಪೀಕು ಒಂದಿಷ್ಟು ಲಾಭವನ್ನು ಕೊಡುತ್ತಿತ್ತು. ಆದರೆ ಮಳೆ-ಗಾಳಿಯಿಂದ ಇದಕ್ಕೂ ಕುತ್ತ ಬಂದಿದೆ. ಆದ್ದರಿಂದ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ