ಹಕ್ಕಿಫಿಕ್ಕಿ ಸಮುದಾಯದ ಗಿಡಮೂಲಿಕೆ ಔಷಧಿಗೆ ಅಂತರಾಷ್ಟ್ರೀಯ ಮಾರೂಕಟ್ಟೆ: ಶ್ರೀರಾಮುಲು
Team Udayavani, Nov 26, 2020, 9:50 PM IST
ಹುಣಸೂರು: ಆದಿವಾಸಿ ಹಕ್ಕಿ ಪಿಕ್ಕಿ ಸಮುದಾಯದ ಅಭಿವೃದ್ದಿಗಾಗಿ ಕೇಂದ್ರ ಸರಕಾರ 5 ಕೋಟಿರೂ ಮೀಸಲಿಟ್ಟಿದ್ದು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಯ ಹಕ್ಕಿಫಿಕ್ಕಿ ಸಮುದಾಯದ ಪಾರಂಪಾರಿಕ ಗಿಡಮೂಲಿಕೆ ಔಷಧಿಗೆ ಅಂತರಾಷ್ಟ್ರೀಯ ಮಾರೂಕಟ್ಟೆ ಒದಗಿಸಲು ಕ್ರಮವಹಿಸುವುದಾಗಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪ್ರಕಟಿಸಿದರು.
ತಾಲೂಕಿನ ಪಕ್ಷಿರಾಜಪುರದಲ್ಲಿ ಸಮಾಜಕಲ್ಯಾಣ ಇಲಾಖೆವತಿಯಿಂದ ನಡೆದ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾತನಾಡಿ ಹಕ್ಕಿಪಿಕ್ಕಿ ಸಮುದಾಯ ತಯಾರಿಸುತ್ತಿರುವ ಗಿಡಮೂಲಿಕೆ ಔಷದಕ್ಕೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವುದು. ಅವರಿಗೆ ತರಬೇತಿ ಹಾಗೂ ಕಾರ್ಖಾನೆ ಸ್ಥಾಪನೆಗೆ ಪಕ್ಷಿರಾಜಪುರ ಮತ್ತು ಶಿಕಾರಿಪುರವನ್ನು ಪೈಲೆಟ್ ಪ್ರಜೆಕ್ಟ್ ಆಗಿಸಿ ಕೇಂದ್ರ ಸರಕಾರ 5 ಕೋಟಿರೂ ಬಿಡುಗಡೆಗೊಳಿಸಿದ್ದು. ಎರಡು ಕೇಂದ್ರದಲ್ಲಿ ಕಿರು ಪ್ಯಾಕ್ಟರಿ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುವುದೆಂದರು. ಇಲಾಖೆವತಿಯಿಂದ ಇಲ್ಲಿನವರಿಗೆ ಆಯುಷ್ ಇಲಾಖೆ ಸಹಯೋಗದಲ್ಲಿ ತರಬೇತಿ. ಹಾಗೂ ಮಾರಾಟಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದೆಂದರು.
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ಹಕ್ಕಿ ಪಿಕ್ಕಿ ಸಮುದಾಯದ ಮಂದಿ ಸ್ವಾಭಿಮಾನಿಗಳು. ಇವರಿಗೆ ಸೌಲಭ್ಯ ಕಲ್ಪಿಸಲು ಹಾಗೂ ಗ್ರಾಮದೊಳಗಿನ ಸಂಪರ್ಕ ರಸ್ತೆಗೆ ಅನುದಾನ ಕೊಡಿಸುವಂತೆ ಮನವಿ ಮಾಡಿದರು.
ಈವೇಳೆ ಮಾಜಿ ಸಚಿವ ಶಿವಣ್ಣ. ಮಾಜಿ ಶಾಸಕ ಸಿದ್ದರಾಜು.ಜಿ.ಪಂ.ಅಧ್ಯಕ್ಷೆ ಪರಿಮಳಶ್ಯಾಮ್. ತಾ.ಪಂ.ಅಧ್ಯಕ್ಷೆ ಪದ್ಮಮ್ಮ. ಸಮಾಜಕಲ್ಯಾಣ ಇಲಾಖೆ ನಿರ್ಧೇಶಕ ಸಂಗಪ್ಪ.ತಾಲೂಕು ಬಿಜೆಪಿ ಅಧ್ಯಕ್ಷ ನಾಗಣ್ಣ.ಮುಖಂಡರಾದ ನೀಮಾಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್ ವಶಕ್ಕೆ
Aranthodu ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ