ಹಕ್ಕಿಫಿಕ್ಕಿ ಸಮುದಾಯದ ಗಿಡಮೂಲಿಕೆ ಔಷಧಿಗೆ ಅಂತರಾಷ್ಟ್ರೀಯ ಮಾರೂಕಟ್ಟೆ: ಶ್ರೀರಾಮುಲು
Team Udayavani, Nov 26, 2020, 9:50 PM IST
ಹುಣಸೂರು: ಆದಿವಾಸಿ ಹಕ್ಕಿ ಪಿಕ್ಕಿ ಸಮುದಾಯದ ಅಭಿವೃದ್ದಿಗಾಗಿ ಕೇಂದ್ರ ಸರಕಾರ 5 ಕೋಟಿರೂ ಮೀಸಲಿಟ್ಟಿದ್ದು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಯ ಹಕ್ಕಿಫಿಕ್ಕಿ ಸಮುದಾಯದ ಪಾರಂಪಾರಿಕ ಗಿಡಮೂಲಿಕೆ ಔಷಧಿಗೆ ಅಂತರಾಷ್ಟ್ರೀಯ ಮಾರೂಕಟ್ಟೆ ಒದಗಿಸಲು ಕ್ರಮವಹಿಸುವುದಾಗಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪ್ರಕಟಿಸಿದರು.
ತಾಲೂಕಿನ ಪಕ್ಷಿರಾಜಪುರದಲ್ಲಿ ಸಮಾಜಕಲ್ಯಾಣ ಇಲಾಖೆವತಿಯಿಂದ ನಡೆದ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ಅವರು ಮಾತನಾಡಿ ಹಕ್ಕಿಪಿಕ್ಕಿ ಸಮುದಾಯ ತಯಾರಿಸುತ್ತಿರುವ ಗಿಡಮೂಲಿಕೆ ಔಷದಕ್ಕೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವುದು. ಅವರಿಗೆ ತರಬೇತಿ ಹಾಗೂ ಕಾರ್ಖಾನೆ ಸ್ಥಾಪನೆಗೆ ಪಕ್ಷಿರಾಜಪುರ ಮತ್ತು ಶಿಕಾರಿಪುರವನ್ನು ಪೈಲೆಟ್ ಪ್ರಜೆಕ್ಟ್ ಆಗಿಸಿ ಕೇಂದ್ರ ಸರಕಾರ 5 ಕೋಟಿರೂ ಬಿಡುಗಡೆಗೊಳಿಸಿದ್ದು. ಎರಡು ಕೇಂದ್ರದಲ್ಲಿ ಕಿರು ಪ್ಯಾಕ್ಟರಿ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುವುದೆಂದರು. ಇಲಾಖೆವತಿಯಿಂದ ಇಲ್ಲಿನವರಿಗೆ ಆಯುಷ್ ಇಲಾಖೆ ಸಹಯೋಗದಲ್ಲಿ ತರಬೇತಿ. ಹಾಗೂ ಮಾರಾಟಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದೆಂದರು.
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ಹಕ್ಕಿ ಪಿಕ್ಕಿ ಸಮುದಾಯದ ಮಂದಿ ಸ್ವಾಭಿಮಾನಿಗಳು. ಇವರಿಗೆ ಸೌಲಭ್ಯ ಕಲ್ಪಿಸಲು ಹಾಗೂ ಗ್ರಾಮದೊಳಗಿನ ಸಂಪರ್ಕ ರಸ್ತೆಗೆ ಅನುದಾನ ಕೊಡಿಸುವಂತೆ ಮನವಿ ಮಾಡಿದರು.
ಈವೇಳೆ ಮಾಜಿ ಸಚಿವ ಶಿವಣ್ಣ. ಮಾಜಿ ಶಾಸಕ ಸಿದ್ದರಾಜು.ಜಿ.ಪಂ.ಅಧ್ಯಕ್ಷೆ ಪರಿಮಳಶ್ಯಾಮ್. ತಾ.ಪಂ.ಅಧ್ಯಕ್ಷೆ ಪದ್ಮಮ್ಮ. ಸಮಾಜಕಲ್ಯಾಣ ಇಲಾಖೆ ನಿರ್ಧೇಶಕ ಸಂಗಪ್ಪ.ತಾಲೂಕು ಬಿಜೆಪಿ ಅಧ್ಯಕ್ಷ ನಾಗಣ್ಣ.ಮುಖಂಡರಾದ ನೀಮಾಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಾರಕಾಸ್ತ್ರ ಹಿಡಿದು ಯುವಕರಿಗೆ ಥಳಿತ, ದರೋಡೆ: ಆರು ಮಂದಿ ಖದೀಮರ ಸೆರೆ
ಯುವಕನಿಗೆ ಚೂರಿ ಇರಿದು ಹಲ್ಲೆಗೈದ ದುಷ್ಕರ್ಮಿಗಳು: ಸುರತ್ಕಲ್ ಪರಿಸರದಲ್ಲಿ ಬಿಗಿ ಭದ್ರತೆ
ಸಚಿವರುಗಳ ಸಹಾನುಭೂತಿ ಬೇಕಿಲ್ಲ: ಮಿತ್ರಮಂಡಳಿಗೆ ವಿಶ್ವನಾಥ್ ಟಾಂಗ್
ಸಾಲಗಾರರ ಕಾಟಕ್ಕೆ ಬೇಸತ್ತು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!
ದೇವೇಗೌಡರ ಮೂರ್ತಿ ಪ್ರತಿಷ್ಠಾಪಿಸಿ ವಚನ ಪಾಲಿಸಿದ್ದ ಸಿಂದಗಿಯ ಮನಗೂಳಿ ಮುತ್ಯಾ!