ಕುಡಿವ ನೀರು ಯೋಜನೆ ಅನುಷ್ಠಾನ
Team Udayavani, May 21, 2020, 5:17 AM IST
ಹುಣಸೂರು: ನಗರಕ್ಕೆ ಮುಂದಿನ 20 ವರ್ಷಗಳ ಅವಧಿಯ ದೂರದೃಷ್ಟಿಯಿಂದ ನಗರೋತ್ಥಾನ ಯೋಜನೆಯಡಿ 3ನೇ ಹಂತದ 5.50 ಕೋಟಿ ರೂ, ನಗರಸಭೆ 14ನೇ ಹಣಕಾಸು ಯೋಜನೆಯಡಿ 2 ಕೋಟಿ, ಎಸ್ಎಫ್ಸಿ ವಿಶೇಷ ಅನುದಾನ 1.50 ಕೋಟಿ ಸೇರಿದಂತೆ ಒಟ್ಟು 9 ಕೋಟಿ ವೆಚ್ಚದಲ್ಲಿ ಸಮಗ್ರ ಯೋಜನೆ ಇದಾಗಿದ್ದು, ಸುಮಾರು ಒಂದು ಲಕ್ಷ ಮಂದಿಗೆ ಸಮರ್ಪಕ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಮಂಜುನಾಥ್ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಯೋಜನೆ ಅನುಷ್ಠಾನ ಸಂಬಂಧ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ, ನಗರಸಭೆ ಅಧಿಕಾರಿಗಳು ಮತ್ತು ಇಂಜಿನಿಯರ್ಗಳ ಸಭೆ ನಂತರ ಮಾತನಾಡಿ, ನೀರು ಪೂರೈಸುವ ಕಾವೇರಿ ನೀರು ಸರಬರಾಜು ಯೋಜನೆಯ ಹಾಲಿ 270 ಎಚ್ .ಪಿಯಿಂದ 350 ಎಚ್.ಪಿಯ ಎರಡು ಮೋಟಾರ್ ಅಳವಡಿಸುವುದು. ನೂತನವಾಗಿ ನಿರ್ಮಿಸಿರುವ ಟ್ಯಾಂಕ್ಗಳಿಗೆ ಹೊಸ ಪೈಪ್ಲೈನ್ ಸಂಪರ್ಕ ಕಲ್ಪಿಸುವ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಟ್ಯಾಂಕ್ ನಿರ್ಮಾಣ: ನಗರೋತ್ಥಾನ ಯೋಜನೆಯಡಿ ನಗರದ ಕಲ್ಕುಣಿಕೆ ಅಯ್ಯಪ್ಪಸ್ವಾಮಿ ಬೆಟ್ಟ, ನರಸಿಂಹಸ್ವಾಮಿ ತಿಟ್ಟಿನ ದೇವಾಲಯದ ಬಳಿ ಹಾಗೂ ಶಬ್ಬೀರ್ ನಗರದಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ದೊಡ್ಡ ಟ್ಯಾಂಕ್ ನಿರ್ಮಿಸಲಾಗುವುದು. ಈಗಾಗಲೇ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. 2021ರ ಮಾರ್ಚ್ ಒಳಗೆ ಕಾಮಗಾರಿ ಮುಗಿಸಿ ನೀರು ಪೂರೈಸಬೇಕು ಎಂದು ಹೇಳಿದರು. ನಗರಸಭಾ ಪೌರಾಯುಕ್ತ ಮಂಜುನಾಥ್, ಎಇಇ ಮಂಜುನಾಥ್, ಎಂಜಿನಿಯರ್ಗಳಾದ ಸದಾಶಿವಪ್ಪ, ಅನುಪಮ, ರೂಪ, ದೀಪಕ್, ಸಮನ್ವಯಾಧಿಕಾರಿ ಸುದರ್ಶನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ
UPSC ಪರೀಕ್ಷೆಯಲ್ಲಿ ಹುಣಸೂರಿನ ಲೇಖನ್ಗೆ 77ನೇ ರ್ಯಾಂಕ್
Congress ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್ ನಾಂದಿ
Mysore; ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಛತೆ ನಡೆಸಿದ ಯದುವೀರ್ ಒಡೆಯರ್ ದಂಪತಿ
Food Poisoning: ಮಾಂಸದೂಟ ಸೇವಿಸಿದ ಸಹೋದರರಿಗೆ ವಾಂತಿ ಭೇದಿ… ಓರ್ವ ಬಾಲಕ ಮೃತ್ಯು