ಕೋವಿಡ್‌ 19 ವಿರುದ್ಧ ಹೋರಾಡಿ ಬದುಕು ರೂಪಿಸಿಕೊಳ್ಳಿ


Team Udayavani, May 23, 2020, 5:17 AM IST

coro-mys

ಮೈಸೂರು: ಕೋವಿಡ್‌ 19 ವಿರುದ್ಧ ಹೋರಾಡುತ್ತಲೇ ನಾವು ನಮ್ಮ ಬದುಕು ರೂಪಿಸಿಕೊಳ್ಳಬೇಕಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಕುವೆಂಪುನಗರದ ಕಲ್ಯಾಣ ಮಂಟಪವೊಂದರಲ್ಲಿ ಶಾಸಕ ಎಸ್‌.ಎ. ರಾಮದಾಸ್‌  ಏರ್ಪಡಿಸಿದ್ದ ಕ್ಷೇತ್ರದ ಜನತೆಗೆ ಆಯುಷ್‌ ಕಿಟ್‌ ವಿತರಣೆಗೆ ಚಾಲನೆ ನೀಡಿ ಮಾತನಾಡಿ, ಒಂದು ಸೂಕ್ಷ್ಮ ವೈರಾಣುವಿನಿಂದ ಮನುಷ್ಯನ ಜೀವನ ಶೈಲಿ, ಆಹಾರ ಪದ್ಧತಿ, ಚಿಂತನೆಯಲ್ಲಿ ಬದಲಾವಣೆಯಾಗಿದೆ.

ನಮ್ಮ  ಮೌಲ್ಯಗಳ ಬಗ್ಗೆ ಪುನರ್‌ ಚಿಂತನೆ ನಡೆಯುತ್ತಿದೆ. ಸಂಬಂಧಗಳು ಗಟ್ಟಿಗೊಳ್ಳುತ್ತಿವೆ. ಮಹಾಯುದ್ಧದಲ್ಲಿ ಸಾವನ್ನಪ್ಪಿದವರಿಗಿಂತ ಈ ಸಣ್ಣ ವೈರಸ್‌ನಿಂದ ಸತ್ತವರೆ ಹೆಚ್ಚು. ಈ ನಿಟ್ಟಿನಲ್ಲಿ ನಾವು ಅಗತ್ಯ ಮುಂಜಾಗ್ರತೆ ಕ್ರಮಗಳ ಜೊತೆಗೆ ವೈರಸ್‌ನ ಜೊತೆಗೆ ಬದುಕು ಸಾಗಿಸುವುದನ್ನು  ಕಲಿಯಬೇಕಿದೆ ಎಂದರು. ಆರಂಭದಲ್ಲಿ ಜಗತ್ತಿನ ಇತರೆ ರಾಷ್ಟ್ರಗಳು ಎಚ್ಚೆತ್ತುಕೊಳ್ಳವ ಮುನ್ನವೇ ಭಾರತದ ಪ್ರಧಾನಿ ಅಪಾಯ ಅರಿತು ದೇಶವನ್ನು ಲಾಕ್‌ಡೌನ್‌ ಹೇರಿದರು.

ನಮ್ಮ  ಪ್ರಧಾನಿಯವರು ತೆಗೆದುಕೊಂಡ ದಿಟ್ಟ ನಿಲುವುಗಳಿಂದ ಇತರೆ ದೇಶಗಳು ನಮ್ಮನ್ನುತಿರುಗಿ ನೋಡುವಂತಾಗಿದೆ. ನಮ್ಮಲ್ಲಿ ವೈರಾಣು ಹೆಚ್ಚು ಬಾಧಿಸದಿರುವುದಕ್ಕೆ ಕಾರಣ ನಮ್ಮ ದೇಶದ ಜನರಲ್ಲಿ ಇರುವ ರೋಗ ನಿರೋಧಕ ಶಕ್ತಿ. ಇದು  ನಮ್ಮ ಜೀವನ ಪದ್ಧತಿ, ಆಹಾರ ಕ್ರಮ, ಆಯುರ್ವೇಧ ಚಿಕಿತ್ಸಾ ವಿಧಾನಗಳಿಂದ ಬಂದಿದೆ. ಕೋವಿಡ್‌-19 ನಿಯಂತ್ರಣ ನಮ್ಮ ಕೈಯಲ್ಲಿದೆ. ನಾವು ಸಾರ್ವಜನಿಕವಾಗಿ ಹೇಗೆ ಕಾರ್ಯನಿರ್ವಹಿಸುತ್ತೇವೆ ಎಂಬುದು ಮುಖ್ಯ.

ಸಾಮಾಜಿಕ  ಅಂತರ, ಸ್ವತ್ಛತೆ ಕಾಪಾಡಿಕೊಳ್ಳಬೇಕು ಎಂದರು. ಕಳೆದ 20 ವರ್ಷದಲ್ಲಿ ಜಗತ್ತು ಆರ್ಥಿಕ ವಿಪತ್ತಿನಿಂದ ಎಷ್ಟು ನಷ್ಟ ಅನುಭವಿಸಿತ್ತೋ ಅಷ್ಟೇ ನಷ್ಟವನ್ನು ಕಳೆದ 3-4 ತಿಂಗಳಲ್ಲಿ ಕೋವಿಡ್‌ 19ದಿಂದ ಅನುಭವಿಸಿದೆ. ನಮ್ಮ ದೇಶದ ಆರ್ಥಿಕತೆಯನ್ನು ಸಾಹುಕಾರರು, ಶ್ರೀಮಂತರು ನಿರ್ಧರಿಸಲು ಅಸಾಧ್ಯ. ನಮ್ಮ ಆರ್ಥಿಕತೆ ದುಡಿಯುವ ವರ್ಗದ ಮೇಲೆ ಅವಲಂಬಿತ ವಾಗಿದೆ. ಇದನ್ನು ಗಮನದಲ್ಲಿರಿಸಿಕೊಂಡ ದುಡಿಯುವ ವರ್ಗ, ರೈತರಿಗೆ ವಿಶೇಷ ಪ್ಯಾಕೇಜ್‌  ಷಿಸಿದೆ ಎಂದರು. ಕೋವಿಡ್‌ 19ವನ್ನು ಸಮರ್ಥವಾಗಿ ಎದುರಿಸಲು ಪೊಲೀಸ್‌ ಇಲಾಖೆ ಪಾತ್ರ ಮಹತ್ವದದ್ದು, ಇದರ ಜೊತೆಗೆ ವೈದ್ಯರು, ಅಧಿಕಾರಿಗಳ ಪಾತ್ರವನ್ನು ಸ್ಮರಿಸಬೇಕು.

ಕೋವಿಡ್‌ 19 ನಿಯಂತ್ರಸುವಲ್ಲಿ ಇಡೀ ರಾಜ್ಯಕ್ಕೆ ಮೈಸೂರು ಅನುಕರಣೀಯ. ಡೀಸಿ ಅಭಿರಾಂ ಜಿ. ಶಂಕರ್‌ ಇದಕ್ಕೆ  ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಬಳಿಕ ಕೇತ್ರದ 19 ವಾರ್ಡ್‌ಗಳಿಗೂ ತೆರಳಿ ಆಯುಷ್‌ ಕಿಟ್‌ ಗಳನ್ನು ವಿತರಣೆ ಮಾಡುವ ವಾಹನಗಳಿಗೆ ಸಚಿವದ್ವಯರು ಚಾಲನೆ ನೀಡಿದರು. ಸಚಿವ ಎಸ್‌.ಟಿ.ಸೋಮಶೇಖರ್‌, ಶಾಸಕ ಎಸ್‌.ಎ. ರಾಮದಾಸ್‌, ಮೇಯರ್‌ ತಸ್ನೀಂ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಡೀಸಿ ಅಭಿರಾಂ ಜಿ. ಶಂಕರ್‌, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಡಿಸಿಪಿ ಪ್ರಕಾಶ್‌ಗೌಡ ಹಾಜರಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.