2 ನಿಮಿಷದಲ್ಲಿ ಅರ್ಧ ಕಿ.ಮೀ. ಈಜಿದ ಹುಲಿರಾಯ!

ಕಬಿನಿ ಹಿನ್ನೀರಿನಲ್ಲಿ ಈಜಿ ದಡ ಸೇರಿದ ವ್ಯಾಘ್ರ ಹುಲಿಯ ಸಾಮರ್ಥ್ಯ ಕಂಡು ನಿಬ್ಬೆರಗಾದ ವನ್ಯಪ್ರಿಯರು

Team Udayavani, Oct 28, 2021, 5:20 PM IST

tiger swimming

Representative Image used

ಮೈಸೂರು: ಎರಡು ಹುಲಿ ಸಂರಕ್ಷಿತಾರಣ್ಯಗಳ ನಡುವೆ ವಿಶಾಲವಾಗಿ ಹರಡಿಕೊಂಡಿರುವ ಕಬಿನಿ ಹಿನ್ನೀರಿನಲ್ಲಿ ಹುಲಿಯೊಂದು ಅರ್ಧ ಕಿ.ಮೀ.ಗೂ ಹೆಚ್ಚು ನಿರಾತಂಕವಾಗಿ ಈಜಿ ದಡ ಸೇರಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಡುವೆ ಸಾವಿರಾರು ಎಕರೆ ಪ್ರದೇಶದಲ್ಲಿ ವಿಸ್ತಾರ ವಾಗಿ ಚಾಚಿಕೊಂಡಿರುವ ಕಬಿನಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಸೋಮವಾರ ಮುಂಜಾನೆ ಬಂಡೀಪುರ ಅರಣ್ಯದಂಚಿನಿಂದ ಹುಲಿಯೊಂದು ಅರ್ಧ ಕಿ.ಮೀ. ಗೂ ಹೆಚ್ಚು ದೂರ ನೀರಿನಲ್ಲಿ ಈಜಿ ನಾಗರಹೊಳೆ ಅರಣ್ಯವನ್ನು ಪ್ರವೇಶಿಸಿದೆ.

ಈ ದೃಶ್ಯವನ್ನು ಸೆರೆ ಹಿಡಿದಿರುವ ಅರಣ್ಯಾಧಿಕಾರಿಗಳು ಮತ್ತು ಪ್ರವಾಸಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿ ದ್ದಂತೆ ಎಲ್ಲೆಡೆ ವೈರಲ್‌ ಆಗಿದ್ದು ಹುಲಿಯ ಈಜಾಟದ ಸಾಮರ್ಥ್ಯಕ್ಕೆ ಮಾರುಹೋಗಿದ್ದಾರೆ. ಮೈಕೊರೆಯುವ ಚಳಿ, ವಿಶಾಲವಾಗಿ ಚಾಚಿಕೊಂಡ ಹಿನ್ನೀರು, ನೀರಿನ ಸೆಳೆತ, ಆಳವನ್ನು ಲೆಕ್ಕಿಸದ ವ್ಯಾಘ್ರ 400 ಮೀಟರ್‌ಗೂ ಅಧಿಕ ದೂರವಿರುವ ಮತ್ತೂಂದು ದಡವನ್ನು ನಿರಾತಂಕವಾಗಿ ಎರಡು ನಿಮಿಷಗಳ ಅವಧಿಯಲ್ಲಿ ಈಜಿ ದಡ ಸೇರುವ ಮೂಲಕ ತಾನೊಬ್ಬ ಅಪ್ರತಿಮ ಈಜುಪಟು ಎಂಬು ದನ್ನು ಸಾಬೀತು ಪಡಿಸಿದೆ.

ಹುಲಿಯೊಂದು ಸಣ್ಣ ಪ್ರಮಾಣದ ತೊರೆ, ನದಿಯನ್ನು ಈಜಿರುವ ದೃಶ್ಯಗಳು ಕಂಡುಬಂದಿತ್ತಾದರೂ ಜಲಾಶಯ ವೊಂದ ರಲ್ಲಿ ತುಂಬಿ ತುಳುಕುತ್ತಿರುವ ಹಿನ್ನೀರನ್ನು ಯಾವ ನಿರ್ಭಯವೂ ಇಲ್ಲದೇ ಹುಲಿ ಈಜಿರುವ ದೃಶ್ಯ ಇದೇ ಮೊದಲು ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ. ಹುಲಿ ಸೇರಿದಂತೆ ವನ್ಯ ಜೀವಿಗಳಿಗೆ ನಾಗರಹೊಳೆ, ಬಂಡೀಪುರ ಎಂಬ ಕಾಡಿನ ಗಡಿ ಇರುವುದಿಲ್ಲ. ಈ ಎರಡೂ ಪ್ರದೇಶವನ್ನೊಳಗೊಂಡಂತೆ ತನ್ನ ಗಡಿ ಗುರುತಿಸಿಕೊಂಡಿರುತ್ತವೆ.

ಇದನ್ನೂ ಓದಿ;- ಜೋಗ ಜಲಪಾತದ ಎದುರು ನಾಡಗೀತೆ: ಕನ್ನಡ ಮಾಸ ಆಚರಣೆಗೆ ಮುನ್ನುಡಿ

ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದಾಗ ಎರಡೂ ಅರಣ್ಯ ಪ್ರದೇಶಗಳಿಗೆ ಓಡಾಡಿಕೊಂಡಿರುವ ಹುಲಿ ನೀರು ತುಂಬಿದಾಗ ಈಜಿ ತನ್ನ ಗಡಿಯಲ್ಲಿ ಓಡಾಡುವುದು ಅದರ ಸ್ವಾಭಾವ. ಜೊತೆಗೆ ನದಿಯಿಂದಾಚೆಗೆ ಹೆಣ್ಣು ಹುಲಿ ಕೂಡುವ ಕಾಲಕ್ಕೆ ಬಂದಿದ್ದರೆ ಅದನ್ನು ಅನುಸರಿಸಿ ಹುಲಿಗಳು ನದಿಯನ್ನು ಈಜಿ ದಡ ಸೇರುತ್ತವೆ. ಹುಲಿ ಸೇರಿದಂತೆ ಎಲ್ಲಾ ವನ್ಯ ಜೀವಿಗಳಿಗೂ ಈಜು ಎಂಬುದು ಸಹಜವಾಗಿ ದಕ್ಕಿರುವ ಕಲೆ ಎಂದು ವನ್ಯ ಜೀವಿ ತಜ್ಞ ಕೃಪಾಕರ್‌ ಉದಯವಾಣಿಗೆ ತಿಳಿಸಿದ್ದಾರೆ.

“ಹುಲಿಯೊಂದು ಅರ್ಧ ಕಿ.ಮೀ. ದೂರ ಕಬಿನಿ ಹಿನ್ನೀರಿನಲ್ಲಿ ಈಜಿರುವುದು ತೀರಾ ಸಾಮಾನ್ಯ ಸಂಗತಿ. ಈ ನೋಟ ನಮಗೆ ಅಪರೂಪವಾಗಿದ್ದರೂ, ವನ್ಯಜೀವಿಗಳು ನದಿ, ತೊರೆ ದಾಟುವುದು ಸಾಮಾನ್ಯ. ಅವುಗಳಿಗೆ ಈಜುವ ಕಲೆ ಸಹಜವಾಗಿ ಬಂದಿರುವಂತದ್ದು.” ಕೃಪಾಕರ ಸೇನಾನಿ, ವನ್ಯಜೀವಿ ತಜ್ಞರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.