ಮೋದಿಯಿಂದ ಭ್ರಷ್ಟಾಚಾರ ರಹಿತ ಆಡಳಿತ
Team Udayavani, Jun 10, 2020, 5:37 AM IST
ಹುಣಸೂರು: ಪ್ರಧಾನಿ ಮೋದಿ ದೇಶದಲ್ಲಿ ಭ್ರಷ್ಟ ರಹಿತ ಆಡಳಿತ, ಕೋವಿಡ್ 19 ಸಮರ್ಪಕವಾಗಿ ನಿರ್ವಹಿಸಿ ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಬಣ್ಣಿಸಿದರು. ಮೋದಿ ಸರ್ಕಾರದ ಒಂದು ವರ್ಷದ ಸಾಧನೆಗಳ ಕುರಿತು ಬಿಜೆಪಿ ಆಯೋಜಿಸಿರುವ ಮನೆ ಮನೆಗೆ ಕರಪತ್ರ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಮೋದಿಯವರ ಹಿಂದಿನ ಐದು ವರ್ಷದ ಆಡಳಿತ ದಲ್ಲಿ ಆರ್ಥಿಕ ಶಿಸ್ತು ರೂಪಿಸಿದ್ದಲ್ಲದೆ, ಬಡವರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮ ರೂಪಿಸಿದರು. ಜಾತ್ಯಾತೀತ ಶಕ್ತಿಯನ್ನು ಬಲಗೊಳಿಸಿ ದೇಶದ ಪ್ರಗತಿ,ರಕ್ಷಣೆ, ಆರೋಗ್ಯ ಸೇವೆ, ಕೃಷಿಕರಿಗೆ ನೆರವು, ಶ್ರಮಿಕ ಸಮಾಜಗಳಿಗೆ ಆರ್ಥಿಕ ನೆರವು ಕಲ್ಪಿಸಿಕೊಟ್ಟ ಮಹಾ ನಾಯಕ. ಮಹಾತ್ಮಗಾಂಧಿ, ಅಂಬೇಡ್ಕರರನ್ನು ತಮ್ಮ ಆಡಳಿತದಲ್ಲಿ ಜೊತೆಜೊತೆಗೆ ಕೊಂಡೊಯ್ಯುವ ಮೂಲಕ ವಿಭಿನ್ನ ಆಡಳಿತ ನೀಡಿದ್ದಾರೆ.
ಎಲ್ಲ ದೇಶವನ್ನು ಮುಟ್ಟಿ ಬಂದಿರುವ ಏಕೈಕ ಪ್ರಧಾನಿ ಮೋದಿ ಎಂದರು. ದೇವರಾಜ ಅರಸರಂತೆ ಸೂಕ್ಷ್ಮಾತಿಸೂಕ್ಷ ಸಮಾಜ ದಿಂದ ಬಂದಿದ್ದು, ಜಾತಿ ಬಲವಿಲ್ಲದಿದ್ದರೂ ಸಾಮಾ ಜಿಕ ಪರಿಕಲ್ಪನೆಯಲ್ಲಿ ಎಲ್ಲ ವರ್ಗ, ಧರ್ಮದವರು ಒಪ್ಪುವಂತಹ ಆಡಳಿತ ನೀಡಿದ್ದಾರೆ. ದೇಶದ ಎಲ್ಲರ ಒಳಿತಿಗಾಗಿ ರೂಪಿಸಿರುವ ಅನೇಕ ಕಾರ್ಯಕ್ರಮಗಳ ಕುರಿತು ಪಕ್ಷ ಜೂ.15ರೊಳಗೆ ಎಲ್ಲರ ಮನೆಗೂ ಸಾಧ ನೆಯ ಕರಪತ್ರವನ್ನು ಪಕ್ಷದ ಸೇನಾನಿಗಳು ವಿತರಿಸುವರೆಂದು ತಿಳಿಸಿದರು.
ಈ ವೇಳೆ ನಗರಸಭಾ ಸದಸ್ಯ ಹರೀಶ್ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಹಳ್ಳದಕೊಪ್ಪಲು ನಾಗಣ್ಣ, ನಗರ ಅಧ್ಯಕ್ಷ ಗಣೇಶಕುಮಾರಸ್ವಾಮಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ
UPSC ಪರೀಕ್ಷೆಯಲ್ಲಿ ಹುಣಸೂರಿನ ಲೇಖನ್ಗೆ 77ನೇ ರ್ಯಾಂಕ್
Congress ಮತ್ತೆ ಸಿಎಂ ಚರ್ಚೆಗೆ ಡಿ.ಕೆ. ಶಿವಕುಮಾರ್ ನಾಂದಿ
Mysore; ಸಮಾವೇಶ ನಡೆದ ಮೈದಾನದಲ್ಲಿ ಸ್ವಚ್ಛತೆ ನಡೆಸಿದ ಯದುವೀರ್ ಒಡೆಯರ್ ದಂಪತಿ
Food Poisoning: ಮಾಂಸದೂಟ ಸೇವಿಸಿದ ಸಹೋದರರಿಗೆ ವಾಂತಿ ಭೇದಿ… ಓರ್ವ ಬಾಲಕ ಮೃತ್ಯು
MUST WATCH
ಹೊಸ ಸೇರ್ಪಡೆ
Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ
Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು