ಅಕ್ರಮ ಪ್ರಯಾಣಕ್ಕೆ ವಿರೋಧ
Team Udayavani, May 18, 2020, 5:56 AM IST
ಎಚ್.ಡಿ.ಕೋಟೆ: ಗೂಡ್ಸ್ ವಾಹನದಲ್ಲಿ ಕೇರಳ ಮೂಲದ 24 ಮಂದಿ ಕೂಲಿ ಕಾರ್ಮಿಕರನ್ನು ರಾಜ್ಯದಿಂದ ಕೇರಳಕ್ಕೆ ತರಕಾರಿ ಸಾಗಣೆ ನೆಪದಲ್ಲಿ ಹೋಗುತ್ತಿದ್ದಾಗ ಗ್ರಾಪಂ ಅಧ್ಯಕ್ಷರ ತಂಡ ವಿರೋಧ ವ್ಯಕ್ತಪಡಿ, ವಾಪಸ್ ಕಳಿಸಿದರು.
ತಾಲೂಕಿನ ಗಡಿಭಾಗದ ಡಿ.ಬಿ.ಕುಪ್ಪೆ ಗ್ರಾಪಂ ಅಧ್ಯಕ್ಷ ತಿರುಪತಿ ಮತ್ತು ತಂಡ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಇಲ್ಲ ಅನ್ನುವ ನಾಮಫಲಕವಿದ್ದ ಗೂಡ್ಸ್ ವಾಹನದಲ್ಲಿದ್ದ ಕೇರಳದ ಕಾರ್ಮಿಕನ್ನು ಕೆಳಗಿಳಿಸಿ, ಕೆಲವೇ ದೂರ ಕಾಲುನಡಿಗೆಯಲ್ಲಿ ಬಂದು ಕರ್ನಾಟಕ ರಾಜ್ಯದ ಗಡಿ ದಾಟುತ್ತಿದ್ದಂತೆಯೇ ಕೇರಳ ರಾಜ್ಯದಲ್ಲಿ ಅವರನ್ನು ಅವರ ಸ್ವಗ್ರಾಮಕ್ಕೆ ಕರೆದೊಯ್ಯುವ ಸಮಗ್ರ ಮಾಹಿತಿ ಪಡೆದುಕೊಂಡರು.
ತಾಲೂಕಿನ ಹಂಪಾಪುರದಲ್ಲಿ ಕೆಲಸ ಮಾಡುತ್ತಿದ್ದ ಕೇರಳಿಗರನ್ನು ಸ್ವಗ್ರಾಮಕ್ಕೆ ಹೋಗಲು ಸರ್ಕಾರದ ಅನುಮತಿ ಪಡೆಯದೇ ಗೂಡ್ಸ್ ವಾಹನದಲ್ಲಿ ತರಕಾರಿ ಇದೆ ಎಂದು ಸುಳ್ಳು ನೆಪಹೇಳಿ ಅವರನ್ನು ಕರೆತರುವಾಗ, ಅಂತರಸಂತೆ ಗ್ರಾಮದ ಚೆಕ್ಪೋಸ್ಟ್ ಮತ್ತು ಉದೂºರು ಗ್ರಾಮದ ಅರಣ್ಯ ಇಲಾಖೆ ಚೆಕ್ಪೋಸ್ಟ್ ಕ್ರಮಿಸಿ ಬಂದದ್ದು ಹೇಗೆ ಅನ್ನುವ ಅನುಮಾನ ಕಾಡುತ್ತಿದೆ. ಕೊರೊನಾ ತಡೆಗೆ ಚೆಕ್ಪೋಸ್ಟ್ಗಳು ತಪಾಸಣೆ ನಡೆಸಬೇಕು ಅನ್ನುವ ಆದೇಶವಿದೆ. ಆದರೂ ತಾಲೂಕಿನ 2 ಚೆಕ್ಪೋಸ್ಟ್ಗಳು ವಾಹನದ ತಪಾಸಣೆ ನಡೆಸಿಲ್ಲ.
ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಹೋಗಲು ಸೇವಾಸಿಂಧು ಯೋಜನೆಯಡಿ ಅನುಮತಿ ಪಡೆಯದೇ 24 ಮಂದಿ ಕಾರ್ಮಿಕರು ಗೂಡ್ಸ್ ವಾಹನದಲ್ಲಿ ಪ್ರಯಾಣಿಸಿದರೂ ಪೊಲೀಸ್, ಅರಣ್ಯ ಇಲಾಖೆ ಚೆಕ್ಪೋಸ್ಟ್ಗಳ ಅಧಿಕಾರಿಗಳು ತಪಾಸಣೆ ನಡೆಸದೇ ಇರುವುದು ಎಷ್ಟು ಸರಿ ಎಂದು ಗ್ರಾಪಂ ಅಧ್ಯಕ್ಷರೇ ತೀವ್ರ ವಿರೋಧ ವ್ಯಕ್ತಪಡಿಸಿ, ವಾಹನ ಕೇರಳಕ್ಕೆ ಹೋಗಲು ಬಿಡದೆ ಕಾರ್ಮಿಕರನ್ನು ಹಂಪಾಪುರಕ್ಕೆ ಕಳುಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ