ಹುಡುಕಿದ್ದು 1, ಕಾಣಿಸಿದ್ದು3 ಹುಲಿ, ಕಳ್ಳಬೇಟೆಯೂ ನಿರಂತರ

ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ

Team Udayavani, Sep 13, 2021, 6:02 PM IST

ಹುಡುಕಿದ್ದು 1, ಕಾಣಿಸಿದ್ದು3 ಹುಲಿ, ಕಳ್ಳಬೇಟೆಯೂ ನಿರಂತರ

ಹುಣಸೂರು: 3 ದಿನಗಳ ಹಿಂದೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಅಯ್ಯನಕೆರೆ ಹಾಡಿಯ ಆದಿವಾಸಿ ಯುವಕ ಗಣೇಶ್‌ನನ್ನು ಕೊಂದ ಹುಲಿರಾಯನ ಪತ್ತೆಗೆ ಒಂದೆಡೆ ಕೂಂಬಿಂಗ್‌ ಆರಂಭಿಸಿದ್ದರೆ, ಮತ್ತೂಂದೆಡೆ ಕಳ್ಳಬೇಟೆ, ಕ್ಯಾಮರಾ ಕಳ್ಳತನವೂ ನಡೆದಿದೆ. ಈ ನಡುವೆ ಭಯವಿಲ್ಲದ ಜನರು ಜಾನುವಾರುಗಳನ್ನು ಇನ್ನೂ ಕಾಡಿಗೆ ಬಿಡುತ್ತಿರುವುದು ಆತಂಕಕಾರಿ.

ಯುವಕನನ್ನು ಬಲಿ ಪಡೆದ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಅನುಮತಿ ಯೊಂದಿಗೆ ನಾಗರಹೊಳೆ ಮುಖ್ಯಸ್ಥ ಮಹೇಶ್‌ ಕುಮಾರ್‌ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ, ಹುಣಸೂರು ವಲಯದ ನೇರಳಕುಪ್ಪೆ ಬಿ.ಹಾಡಿ ಬಳಿ ಬೇಸ್‌ ಕ್ಯಾಂಪ್‌ ತೆರೆದಿದೆ. ಸೆ.9ರಿಂದಲೇ ಹುಲಿ ಸೆರೆಗೆ ತಾಂತ್ರಿಕ ತಂಡ, ಟ್ರ್ಯಾಕಿಂಗ್‌ ತಂಡ, ಅರವಳಿಕೆ ಚುಚ್ಚು ಮದ್ದು ನೀಡುವ ತಂಡ, ಆರ್‌ಆರ್‌ಟಿ ಹಾಗೂ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಪ್ರಚಾರ ತಂಡ ವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಹುಣಸೂರು ವಲಯದ ಬೇಸ್‌ ಕ್ಯಾಂಪ್‌ನಲ್ಲಿ ಮೇಟಿಕುಪ್ಪೆ ಎಸಿಎಫ್‌ ಮಹದೇವ್‌, ಆರ್‌ಎಫ್‌ಒ ಹನುಮಂತರಾಜು ಅವರೊಂದಿಗೆ ಜಂಟಿ ಸುದ್ದಿ ಗೋಷ್ಠಿಯಲ್ಲಿ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಅವರು ಘಟನೆ ನಡೆದ ರಾತ್ರಿಯೇ ಹುಲಿ ಸೆರೆಗಾಗಿ ಬೋನ್‌ ಹಾಗೂ ಟ್ರ್ಯಾಪಿಂಗ್‌ ಕ್ಯಾಮರಾ ಅಳವಡಿಸಲಾಗಿತ್ತು. ಘಟನಾ ಸ್ಥಳದಿಂದ ಸುಮಾರು 50ಮೀ.ದೂರದಲ್ಲಿ ಒಂದು ಹುಲಿ ಛಾಯಾಚಿತ್ರ ಸೆರೆಯಾಗಿತ್ತು. ಸ್ಥಳದಲ್ಲಿ ಅಟ್ಟಣೆ ನಿರ್ಮಿಸಿ, ಪಕ್ಕ ದಲ್ಲೇ ಮತ್ತೂಂದು ಕೇಜ್‌ ಇಟ್ಟು ಸುತ್ತಮುತ್ತಲಿನಲ್ಲಿ ಸುಮಾರು 40ಟ್ರ್ಯಾಪಿಂಗ್‌ ಕ್ಯಾಮರಾ ಅಳವಡಿಸಿ. ಅಟ್ಟಣೆ ಮೇಲೆ ಪಶುವೈದ್ಯಾಧಿಕಾರಿ ಡಾ.ರಮೇಶ್‌ ಮತ್ತವರ ತಂಡ ಹುಲಿ ಚಲನವಲನದ ಬಗ್ಗೆ ನಿಗಾ ವಹಿಸಿದ್ದರೂ ಮತ್ತೆ ಹುಲಿ ಪತ್ತೆಯಾಗಲಿಲ್ಲ ಎಂದರು.

4 ತಂಡ: ಹುಲಿ ಹೆಚ್ಚೆ ಗುರುತು ಮತ್ತು ಮಲದ ಆಧಾರದ ಮೇಲೆ ಹುಲಿ ಹೋದ ಕಡೆಗಳಲ್ಲೆಲ್ಲಾ ಒಟ್ಟು70 ಕ್ಯಾಮರಾ ಅಳವಡಿಸಲಾಗಿತ್ತು. ಈ ವೇಳೆ 7 ಕಡೆ ಹುಲಿಗಳ ಛಾಯಾಚಿತ್ರ ಸೆರೆಯಾಗಿದ್ದವು. ಆದರೆ ಘಟನೆ ನಡೆದ ದಿನ ಕಾಣಿಸಿಕೊಂಡಿದ್ದ ಹುಲಿ ಬೆನ್ನಮೇಲೆ ಗಾಯವಾಗಿತ್ತು. ಆ ನಂತರ ದಲ್ಲಿ ಸಿಕ್ಕ ಹುಲಿಗಳ ಛಾಯಾಚಿತ್ರ ಪರಿಶೀಲಿಸಿದ ವೇಳೆ, ಇವು ಬೇರೆ 3 ಹುಲಿಗಳಾಗಿವೆ. ಇದೀಗ ಕಾರ್ಯಾ ಚರಣೆ ಮುಂದುವರಿದಿದೆ. ಅಲ್ಲದೆ ಹಾಸನದಿಂದ ಅರವಳಿಕೆ ತಜ್ಞ ವೆಂಕಟೇಶ ಅವರನ್ನೂಕರೆಸಲಾಗಿದೆ ಎಂದರು.

ಜಗ್ಗದ ಜನ- ಕಾಡಿನತ್ತ ದನಗಳು: ಹುಲಿ ದಾಳಿಯಿಂದ ಗಣೇಶ ಸಾವಿನಘಟನೆಸಂಭವಿಸಿದ್ದರೂ ಅಕ್ಕಪಕ್ಕದ ಹಳ್ಳಿಯ ಜನ ಅರಣ್ಯದಲ್ಲಿ ಜಾನುವಾರು ಮೇಯಲು ಬಿಟ್ಟಿರುವುದು, ಸೌದೆ ತರು ತ್ತಿರುವುದು ಅಲ್ಲದೇ ಕಾಡಿನಲ್ಲಿ ಅಡ್ಡಾಡುತ್ತಿರುವುದು ಕಂಡು ಬಂದಿದೆ. ಕಳ್ಳಬೇಟೆ ಹಾಗೂ ಕ್ಯಾಮರಾ ಕಳ್ಳತನವೂ ನಡೆದಿದ್ದು, ಹುಲಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಗ್ರಾಮಸ್ಥರು ಸಹಕಾರ ನೀಡಿ: ಹಳ್ಳಿಗಳಲ್ಲಿ ಕಾಡಿಗೆ ಯಾರೂ ಬರಬಾರದು, ಜಾನುವಾರುಗಳನ್ನು ಬಿಡ ಬಾರದೆಂದು ಪ್ರಚಾರ ಮಾಡುತ್ತಿ ದ್ದರೂ ಜನ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ನಮಗೂ, ಇಲಾಖೆ ಸಿಬ್ಬಂದಿಗೂ ನೋವುಂಟಾಗಿದೆ. ಕಾರ್ಯಾಚರಣೆ ನಿಲ್ಲಿಸಿ ಪೆಟ್ರೋಲಿಂಗ್‌ ಕಡೆಗೆ ಗಮನಹರಿಸುವಂ ತಾಗಿದೆ ಎಂದು ಸತೀಶ್‌ ತಿಳಿಸಿದರು.

ಕ್ಯಾಮರಾಕಳ್ಳತನ
ಶುಕ್ರವಾರ ರಾತ್ರಿ4 ಟ್ರಾಪಿಂಗ್‌ ಕ್ಯಾಮರಾ ಕಳ್ಳತನ ಮಾಡಲಾಗಿದೆ. ಅಲ್ಲದೆ ಬೇಟೆಗಾರರು ಜಿಂಕೆಯನ್ನು ಭೇಟೆ ಯಾಡಿದ್ದು, ಗಂಭೀರವಾಗಿ ಪರಿಗಣಿಸಿದ್ದು, ಖಚಿತ ಮಾಹಿತಿ ಮೇರೆಗೆ ಹನ ಗೋಡಿಗೆ ಸಮೀಪದ ಶಿಂಡೇನಹಳ್ಳಿ ಸುಜೇಂದ್ರನ ಮನೆ ಮೇಲೆ ದಾಳಿ ಮಾಡಿ 2 ಕೆ.ಜಿ.ಜಿಂಕೆ ಮಾಂಸ ವಶಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಅಲ್ಲದೆಕ್ಯಾಮರಾಕಳುವಿನ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ ಎಂದು
ಎಸಿಎಫ್ ಸತೀಶ್‌ ಹೇಳಿದರು.

ಗಾಯಗೊಂಡಿದ್ದ ಹಸು ಸಾವು
ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಕಿಕ್ಕೇರಿಕಟ್ಟೆ ಅರಣ್ಯದಂಚಿನಲ್ಲಿ ಶನಿವಾರ ಹುಲಿ ದಾಳಿಯಿಂದ ಗಾಯಗೊಂಡಿದ್ದ ಹಸು ಚಿಕಿತ್ಸೆ ಫ‌ಲಿಸದೇ ಭಾನುವಾರ ಮೃತಪಟ್ಟಿದೆ. ತಾಲೂಕಿನ ಹನಗೋಡು ಹೋಬಳಿ ಕಿಕ್ಕೇರಿ ಕಟ್ಟೆಯ ಗಣೇಶ್‌ ತಮ್ಮ ಜಮೀನಿನಲ್ಲಿ ಜಾನುವಾರು ಗಳನ್ನು ಮೇಯಲು ಬಿಟ್ಟಿದ್ದ ವೇಳೆ ಹಸುವಿನ ಮೇಲೆ ಹಾಡಹಗಲೇ ಹುಲಿ ದಾಳಿ ನಡೆಸಿ ತೀವ್ರವಾಗಿಗಾಯಗೊಳಿಸಿತ್ತು.ಅರಣ್ಯಇಲಾಖೆ ಡಾ.ರಮೇಶ್‌ ಅವರೇ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಭಾನುವಾರ ಅಸುನೀಗಿದೆ. ಸ್ಥಳಕ್ಕೆ ಹುಣ ಸೂರು ವಲಯದ ಡಿಆರ್‌ಎಫ್‌ಒ ಸಿದ್ದರಾಜು, ಸಿಬ್ಬಂದಿ ಭೇಟಿ ನೀಡಿ ಮಹಜರ್‌ ನಡೆಸಿದರು.

ಅದೇ ಹುಲಿ ಅನುಮಾನ?: ಕಾಡಂಚಿನ ಗ್ರಾಮಗಳಲ್ಲಿ ಜಾನುವಾರುಗಳನ್ನು ಕೊಂದಿದ್ದ ಇತ್ತೀಚೆಗಷ್ಟೇ ಅಯ್ಯನಕೆರೆ ಹಾಡಿಯ ಗಣೇಶ್‌ ನನ್ನು ಕೊಂದ ಹುಲಿಯೇ ಪಕ್ಕದ ಕಿಕ್ಕೇರಿ ಕಟ್ಟೆ ಯಲ್ಲಿ ಹಸುವಿನ ಮೇಲೆ ದಾಳಿ ನಡೆಸಿರಬಹುದೆಂದು ಸಂಶಯಿಸಲಾಗಿದೆ.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.