ಶೋಷಿತರ ಬೆಳಕಾಗಿ ಉದಯಿಸಿದ ಮಹಾಪುರುಷ


Team Udayavani, Sep 13, 2019, 5:25 AM IST

q-38

ಸಮಾಜದಲ್ಲಿ ಬಲವಾಗಿ ಬೇರೂರಿದ್ದ ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕಲು ಉದಿಸಿದ ಹಲವಾರು ಸಮಾಜ ಸುಧಾರಕರಲ್ಲಿ ನಾರಾಯಣ ಗುರುಗಳು ಒಬ್ಬರು.

ಸಮಾಜದಲ್ಲಿ ಆಳವಾಗಿ ಬೇರೂರಿರುವ ಯಾವುದೇ ಅನಿಷ್ಟಗಳನ್ನು ತೊಡೆದು ಹಾಕುವುದು ಅಷ್ಟು ಸುಲಭವಲ್ಲ. ಒಬ್ಬ ಶೋಷಣೆಗೆ ಒಳಗಾದ ವ್ಯಕ್ತಿ ಮತ್ತು ಆತನ ಮನಸ್ಥಿತಿಯನ್ನು ಅರಿಯುವುದು ಹಾಗೂ ಶೋಷಿಸುವ ವ್ಯಕ್ತಿಯಲ್ಲಿನ ದರ್ಪ, ಅಹಂಕಾರಗಳ ವಿರುದ್ಧ ಶೋಷಿತ ವರ್ಗವನ್ನು ಸಿದ್ಧಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಜಾತಿ ಎನ್ನುವುದು ಮೈಗಂಟಿದ ಚರ್ಮವಾಗಿದ್ದ ಅಂದಿನ ಕಾಲಘಟ್ಟದಲ್ಲಿ, ದೇವಸ್ಥಾನ ಪ್ರವೇಶ ಮತ್ತು ಶಿಕ್ಷಣ ಎಂಬುದು ಮೇಲ್ವರ್ಗದ ಸ್ವತ್ತು ಎಂದು ನಂಬಿದ ಮತ್ತು ಬಲವಂತವಾಗಿ ನಂಬಿಸಲ್ಪಟ್ಟ ಆ ಸಮಯದಲ್ಲಿ ‘ನಾಣು’ ಎಂದು ಕರೆಯಲ್ಪಡುತ್ತಿದ್ದ ನಾರಾಯಣ ಗುರುಗಳು ಹುಟ್ಟಿದರು.

ಪ್ರತಿಯೊಂದು ದಮನಿತ ಸಮುದಾಯವು ಸೂಕ್ತವಾದ ಶಿಕ್ಷಣವನ್ನು ಪಡೆದರೆ ಮತ್ತು ಆ ಮೂಲಕ ಸಮಾಜವು ಮೌಡ್ಯಗಳಿಂದ ಮುಕ್ತವಾಗ ಬೇಕಾದರೆ ಹಾಗೂ ಇವುಗಳೆಲ್ಲದರ ಮೂಲಕ ಆತ ಹೊಸ ಆಲೋಚನೆಗಳಿಂದ ಕೂಡಿದ ಸ್ವತಂತ್ರ ವ್ಯಕ್ತಿ ಎನಿಸಿಕೊಳ್ಳಬೇಕಾದರೆ ಅದು ಸಮಯೋಚಿತ ಶಿಕ್ಷಣದಿಂದ ಮಾತ್ರ ಸಾಧ್ಯ. ಅದಕ್ಕಾಗಿಯೇ ‘ಶಿಕ್ಷಣದಿಂದ ಸ್ವತಂತ್ರರಾಗಿರಿ’ ಎಂಬ ಎಚ್ಚರಿಕೆ ನೀಡಿ ಹಲವಾರು ಕೆಳ ಜಾತಿಯವರಿಗೆ ವೇದಾಭ್ಯಾಸ ಮಾಡಿಸಿದವರು ನಾರಾಯಣ ಗುರುಗಳು.

ಹೀಗೆ ಶೈಕ್ಷಣಿಕ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ ಗುರುಗಳು ಕೆಳಜಾತಿಯವರು ಅದರಲ್ಲೂ ಈಳವರಿಗಾಗಿ (ಬಿಲ್ಲವ ಜನಾಂಗ) ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಎಲ್ಲಾ ಧರ್ಮ ಪಂಗಡದ ಮಕ್ಕಳಿಗೆ ಸಮಾನ ಶಿಕ್ಷಣ ನೀಡಿದಾಗ ಮಾತ್ರ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಂಡು ವರ್ಗ ಭೇದವಿಲ್ಲದ ಸಮಾಜ ಸೃಷ್ಟಿಯಾಗಬಲ್ಲದು ಎಂಬ ಸೂಕ್ಷ್ಮ ಜ್ಞಾನ ಅವರಿಗಿತ್ತು.

‘ಸಂಘಟನೆಯಿಂದ ಬಲಿಷ್ಠರಾಗಿರಿ’ ಎಂಬ ನಾರಾಯಣ ಗುರುಗಳ ಧ್ಯೇಯ ವಾಕ್ಯದಂತೆ ಒಬ್ಬ ವ್ಯಕ್ತಿ ಯಾವುದೇ ಸಹಕಾರವಿಲ್ಲದೆ ಬೆಳೆದಾಗ ಆತನನ್ನು ಹೇಗೆ ಬೇಕಾದರೂ ಲಯಗೊಳಿಸಬಹುದು. ಆದರೆ ಆ ವ್ಯಕ್ತಿ ಒಗ್ಗಟ್ಟಿನಿಂದ ಇದ್ದರೆ ಯಾವ ಶಕ್ತಿಯೂ ಆತನನ್ನು ಮುಟ್ಟಲಾರದು. ತಾನು ಪಡೆಯಬೇಕಾದ ತನ್ನ ಹಕ್ಕಿನ ರಕ್ಷಣೆ ಮಾಡುವ ಮತ್ತು ಆ ಮೂಲಕ ತನ್ನ ಬೇಡಿಕೆ ಏನಿದೆಯೋ ಅದನ್ನು ಸರಕಾರದ ಮೂಲಕ ಪಡೆದುಕೊಳ್ಳುವ ಹಕ್ಕು ಸಂಘಟನೆಯಿಂದ ನಿರಾಯಾಸವಾಗಿ ಬರಬಹುದು. ಹಾಗಾಗಿಯೇ ಗುರುಗಳು ಸಂಘಟನೆಯ ಮುಖಾಂತರವೇ ಕೃಷಿ, ಕೈಗಾರಿಕೆ, ಉದ್ದಿಮೆ, ತಾಂತ್ರಿಕ ಶಿಕ್ಷಣ ಮೊದಲಾದವುಗಳಿಗೆ ಹೆಚ್ಚಿನ ಮಹತ್ವ ನೀಡಿದರು. ಸ್ವಾತಂತ್ರ್ಯವು ಶಿಕ್ಷಣದಿಂದ ದೊರೆಯುತ್ತದೆ.ಸಂಘಟನೆ ಯಿಂದ ಶಕ್ತಿ ದೊರೆಯುತ್ತದೆ ಎಂದರು. ಇದು ಎಲ್ಲಾ ಜಾತಿ ಸಮುದಾಯಗಳಿಗೆ ಸಲ್ಲುವ ಸಾರ್ವಕಾಲಿಕ ಸತ್ಯ.

ಅಂದಿನ ಸಮಾಜದಲ್ಲಿ ಇದ್ದ ಮತ್ತೂಂದು ಪಿಡುಗು ಎಂದರೆ ದೇವಸ್ಥಾನ ಪ್ರವೇಶ ನಿಷೇಧ. ಬರೇ ಮೇಲ್ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಮತ್ತು ಇಂತಹ ಕಡೆಗಳಲ್ಲೆಲ್ಲಾ ಕೆಳ ವರ್ಗಗಳನ್ನು ತೀರಾ ನಿಕೃಷ್ಟವಾಗಿ ನಡೆಸಿಕೊಳ್ಳುವ ಪರಿಯನ್ನು ಗಮನಿಸಿದ ನಾರಾಯಣ ಗುರುಗಳು ದೇವರ ಭಯ ಎಂಬುದು ಜ್ಞಾನದ ವಿಕಾಸಕ್ಕೆ ಕಾರಣವಾಗ ಬೇಕು.ಪರಿಶುದ್ಧವಾದ ಮನಸ್ಸಿನಿಂದ ಮಾಡಿದ ಭಕ್ತಿ ಭಗವಂತನನ್ನು ತಲುಪಬಲ್ಲದು.ಅದಕ್ಕೆ ಮೇಲ್ವರ್ಗದ ಮತ್ತು ಮೇಲ್ವರ್ಗದವರಿಂದ ಬಂಧಿಸಲ್ಪಟ್ಟಿರುವ ದೇವರೇ ಬೇಕಾಗಿಲ್ಲ ಮತ್ತು ಅಲ್ಲಿಗೆ ಹೋಗಬೇಕಾಗಿಯೂ ಇಲ್ಲ ಎಂದು ಸ್ವತಃ ತಾವೇ ದೇವಾಲ ಯವನ್ನು ಸ್ಥಾಪಿಸುವ ಮೂಲಕ ಭಕ್ತಿ ಚಳವಳಿಗೆ ನಾಂದಿ ಹಾಡಿದರು.ಅಲ್ಲದೆ ಕೆಲವು ದೇಗುಲಗಳಲ್ಲಿ ‘ಸತ್ಯ, ಕರ್ತವ್ಯ, ದಯೆ ಮತ್ತು ಪ್ರೀತಿ’ ಎಂದು ಬರೆಸುವ ಮುಖಾಂತರ ಸ್ವತಃ ತಾವೇ ಗುರುವಾಗಿ ನಿಂತು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಪರಿಕಲ್ಪನೆ ಮೂಡಿಸಿ ಅಂದಿನಿಂದ ಇಂದಿನವರೆಗೂ ಒಬ್ಬ ಗುರುವರೇಣ್ಯರಾಗಿ, ಸ್ವಾಮಿಯಾಗಿ, ದೇವರಾಗಿ, ಅದ್ಭುತ ಶಕ್ತಿಯಾಗಿ ಕಾಯುತ್ತಾ ಬಂದವರು.

ಬದುಕಿನಲ್ಲಿ ದುಃಖರಹಿತರಾಗಿ ಬಾಳಬೇಕಾದರೆ ದೇಶ ಸೇವೆ ಮತ್ತು ಈಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಹಾಗೆಯೆ ಮೋಕ್ಷವನ್ನು ಕಂಡುಕೊಳ್ಳಬೇಕು ಎಂದು ಬೋಧಿಸಿರುವ ಉಪದೇಶಗಳ ಗಣಿಯಾಗಿರುವ ನಾರಾಯಣ ಗುರುಗಳು ನಮ್ಮೊಂದಿಗೆ ಇಲ್ಲವಾದರೂ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸರಳ, ನಿಷ್ಕಲ್ಮಶ ವ್ಯಕ್ತಿತ್ವ ಬೆಳೆಸಿಕೊಂಡು ಸುಂದರವಾದ ಜೀವನ ನಡೆಸೋಣ.ಅವರ ಮಾನವತಾವಾದವನ್ನು ಮರೆಯದಿರೋಣ.

(ಇಂದು ನಾರಾಯಣ ಗುರುಗಳ ಜಯಂತಿ)

ವಾಸಂತಿ ಅಂಬಲಪಾಡಿ

ಟಾಪ್ ನ್ಯೂಸ್

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

UPSC Result: ಬೀದರ್ ನ ಮೊಹಮ್ಮದ್ ಅಸೀಮ್‌ ಮುಜತೇಬಾಗೆ 481ನೇ ರ‍್ಯಾಂಕ್‌

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.