ಔಷಧಕ್ಕಾಗಿ 15 ಕಿ.ಮೀ. ನಡೆದು ಬಂದ ವೃದ್ಧೆ !
Team Udayavani, Apr 10, 2020, 6:30 AM IST
ಗುತ್ತಿಗಾರು: ಲಾಕ್ಡೌನ್ನಿಂದ ವಾಹನ ಸಿಗದೆ ಪರಿತಪಿಸಿದ ಕೊಲ್ಲಮೊಗ್ರದ ವೃದ್ಧೆಯೋರ್ವರು ಔಷಧಕ್ಕಾಗಿ 15 ಕಿ.ಮೀ. ದೂರದ ಗುತ್ತಿಗಾರಿಗೆ ನಡೆದು ಬಂದ ಘಟನೆ ಇಂದು ನಡೆದಿದೆ.
ತುಂಬಾ ನಿತ್ರಾಣಗೊಂಡಿದ್ದ ಅಜ್ಜಿಯನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ಈ ವೇಳೆ ವಿಷಯ ಬೆಳಕಿಗೆ ಬಂದಿದೆ. ಗ್ರಾ.ಪಂ. ಅಧ್ಯಕ್ಷ ಅಚ್ಯುತ ಗುತ್ತಿಗಾರು, ಪಿಡಿಒ ಶ್ಯಾಮಪ್ರಸಾದ್ ಹಾಗೂ ತುರ್ತು ಕಾರ್ಯಪಡೆ ಸದಸ್ಯರು ಆಕೆಗೆ ಸೂಕ್ತ ಔಷಧದ ವ್ಯವಸ್ಥೆ ಮಾಡಿ ಖಾಸಗಿ ವಾಹನದಲ್ಲಿ ಮನೆಗೆ ಕಳುಹಿಸಿದರು.