16 ವರ್ಷಬಳಿಕ ತಾಯಿ ಮಡಿಲು ಸೇರಿದ ಮಗ!


Team Udayavani, Nov 21, 2021, 12:50 PM IST

12sun

ಮೂಡಲಗಿ: ಶ್ರೀಶೈಲ ಪಾದಯಾತ್ರೆಗೆ ಹೋಗಿದ್ದಾಗ ನಾಪತ್ತೆಯಾಗಿದ್ದ ಮಗ ಹದಿನಾರು ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ.

ಬಸವರಾಜ ಬಾಳಪ್ಪ ಗಡ್ಡಿ ಎಂಬ ಯುವಕ ನ.15ರಂದು ಸಿನಿಮೀಯ ರೀತಿಯಲ್ಲಿ ಹೆತ್ತವರ ಮಡಿಲು ಸೇರಿದ್ದಾನೆ. 2005ರ ಮಾರ್ಚ್‌ ತಿಂಗಳಲ್ಲಿ ಶ್ರೀಶೈಲ ಪಾದಯಾತ್ರೆಗೆ ಹೋಗಿದ್ದು, ಮರಳಿ ಬಾರದ ಮಗನ ಪತ್ತೆಗಾಗಿ ತಂದೆ-ತಾಯಿ ಇರುವ ಅಲ್ಪ ಸ್ವಲ್ಪ ಆಸ್ತಿ ಅಡವಿಟ್ಟು ಸಾಲ ಮಾಡಿ ಬಾಗಲಕೋಟೆ, ರಾಯಚೂರು ಸೇರಿ ಹಲವೆಡೆ ಹುಡುಕಿದ್ದರು. ಪ್ರಯೋಜನ ಆಗಿರಲಿಲ್ಲ. ಬಾಳಪ್ಪ ಹಾಗೂ ಮಹಾದೇವಿ ದಂಪತಿಗೆ ಒಬ್ಬನೇ ಮಗ ಹಾಗೂ ಮೂವರು ಪುತ್ರಿಯರು. ಅದರಲ್ಲಿ ಓರ್ವ ಪುತ್ರಿ ಅಂಗವಿಕಲೆ. ಅಣ್ಣ ನಾಪತ್ತೆಯಾದ ಹಿನ್ನೆಲೆ ಮನನೊಂದು ಆತನ ಬರುವಿಕೆಗಾಗಿ ಕಾದು ಕಾದು 2007ರಲ್ಲಿ ತೀರಿಕೊಂಡಳು. ಮಗ ನಾಪತ್ತೆ ಹಾಗೂ ಪುತ್ರಿ ಮೃತಪಟ್ಟಿದ್ದರಿಂದ ಮಾನಸಿಕವಾಗಿ ನೊಂದ ತಂದೆ ಬಾಳಪ್ಪ 2015ರಲ್ಲಿ ಮೃತಪಟ್ಟಿದ್ದರು.

ಮಗನ ಸುಳಿವು

ಹಳ್ಳೂರ ಗ್ರಾಮದ ಯಲ್ಲಪ್ಪ ಸನದಿ ಎಂಬ ಸಂಬಂಧಿ ತಾಲೂಕಿನ ನಾಗನೂರ ಗ್ರಾಮದವರು. ನಾಗನೂರಿನ ಸಂಬಂಧಿಕರು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಜಾಲಿಹಾಳ ಗ್ರಾಮದವರು. ಯಾವುದೋ ವಿಚಾರಕ್ಕೆ ಚರ್ಚಿಸುವ ಸಂದರ್ಭದಲ್ಲಿ ಮುಂಡರಗಿ ತಾಲೂಕಿನ ಜಾಲಿಹಾಳ ಗ್ರಾಮದ ಭೀರಪ್ಪ ಫಕೀರಪ್ಪ ಹರಕಿ ಎಂಬುವರ ಮನೆಯಲ್ಲಿ ಯುವಕನಿರುವ ಮಾಹಿತಿ ಗೊತ್ತಾಗಿದೆ. ತಕ್ಷಣವೇ ತಾಯಿ ಕರೆದುಕೊಂಡು ಜಾಲಿ ಹಾಳ ಗ್ರಾಮದ ಭೀರಪ್ಪ ಅವರ ಮನೆ ಮುಂದೆ ಹೋದ ಸಂದರ್ಭ ಬಸವರಾಜ (33) ತಾಯಿಯನ್ನು ಗುರುತು ಹಿಡಿದು ಅಪ್ಪಿಕೊಂಡು ಕಣ್ಣೀರಿಟ್ಟು ಅವರ ಮಡಿಲು ಸೇರಿದ್ದಾನೆ. ಆದರೆ ಬಸವರಾಜ ಭೀರಪ್ಪ ಫಕೀರಪ್ಪ ಹರಕಿಯವರ ಮನೆಯಲ್ಲಿ 16 ವರ್ಷದಿಂದ ಮನೆ ಮಗನಾಗಿದ್ದ.

ಇದನ್ನೂ ಓದಿ:ಶೀಘ್ರ ಪರಿಹಾರ ಬಿಡುಗಡೆ: ರೇಣುಕಾಚಾರ್ಯ

ಕುಟುಂಬದವರ ಜತೆ ಪ್ರೀತಿ- ವಿಶ್ವಾಸದಿಂದಿದ್ದ ಎನ್ನಲಾಗಿದೆಕಣ್ಮುಂದೆಯೇ 16 ವರ್ಷದಿಂದ ಮಗನನ್ನು ಕಾಣದೇ ಎಷ್ಟೆಲ್ಲ ನೋವುಗಳು ಆ ಕುಟುಂಬಕ್ಕೆ ಆಗಿರಬೇಕು. ದೇವರ ದಯೆಯಿಂದ ಮುಪ್ಪಿನ ವಯಸ್ಸಿನಲ್ಲಿ ನಾಪತ್ತೆಯಾದ ಮಗ ಮತ್ತೆ ಸಿಕ್ಕಿದ್ದಾನೆ. ಇನ್ನು ಮಗನ ಮದುವೆ ಆಗಿಲ್ಲ, ಹೀಗಿರುವಾಗ ಆದಷ್ಟೂ ಶೀಘ್ರ ಮದುವೆ ಮಾಡಿ ಸೊಸೆ ಕಾಣುವ ಮಂದಹಾಸ ಆ ತಾಯಿ ಮುಖದಲ್ಲಿ ಮೂಡಿದೆ. -ಈರಪ್ಪ ಬನ್ನೂರ, ತಾಯಿ ಸಂಬಂಧಿಕರು

ಟಾಪ್ ನ್ಯೂಸ್

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

police crime

ಗೋ ಸಾಗಾಟ ತಡೆದು ಹಲ್ಲೆ:7 ಹಿಂದೂ ಕಾರ್ಯಕರ್ತರ ಬಂಧನ

Belagavi; ಸೋಲಿನ ಭಯದಿಂದ ಮೃಣಾಲ್‌ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ

Belagavi; ಸೋಲಿನ ಭಯದಿಂದ ಮೃಣಾಲ್‌ ಬಾಯಿಗೆ ಬಂದಂಗೆ ಮಾತನಾಡುತ್ತಿದ್ದಾರೆ: ಮಂಗಲಾ ಅಂಗಡಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.