ತಾಜ್ ಹೊಟೇಲ್ಗಳಿಗೆ 26/11ಮಾದರಿ ದಾಳಿ
Team Udayavani, Jul 1, 2020, 11:54 AM IST
ಮುಂಬಯಿ: ದಕ್ಷಿಣ ಮುಂಬಯಿನ ಬಾಂದ್ರಾದಲ್ಲಿ ತಾಜ್ ಲ್ಯಾಂಡ್ಸ್ ಎಂಡ್ ಹಾಗೂ ಕೊಲಾಬಾದಲ್ಲಿರುವ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ಗಳಿಗೆ 26/11 ಮಾದರಿಯ ದಾಳಿ ನಡೆಸಲಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ. ಸೋಮವಾರ ತಡರಾತ್ರಿ ಪಾಕಿಸ್ಥಾನದಿಂದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಯಬಾ ಸಂಘಟನೆಯ ಹೆಸರಲ್ಲಿ ವ್ಯಕ್ತಿ ಫೋನ್ ಮಾಡಿ ಬೆದರಿಕೆ ಹಾಕಿದ್ದಾನೆ.
ಹೀಗಾಗಿ, ಎರಡೂ ಹೊಟೇಲ್ಗಳಿಗೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿದೆ. ಮದ್ಯರಾತ್ರಿ 12.30ರ ವೇಳೆಗೆ ಬಂದ ಫೋನ್ನಲ್ಲಿ ವ್ಯಕ್ತಿ ತಾನು ಕರಾಚಿಯಿಂದ ಮಾತನಾಡುತ್ತಿರುವ ಬಗ್ಗೆ ಹೇಳಿದ್ದಾನೆ. 2008ರಲ್ಲಿ ಮುಂಬಯಿನಲ್ಲಿ ನಡೆಸಿದ್ದ ದಾಳಿಯ ರೀತಿಯಲ್ಲಿಯೇ 2 ಹೊಟೇಲ್ಗಳಿಗೆ ದಾಳಿ ನಡೆಸುವ ಬಗ್ಗೆ ಹೇಳಿದ್ದಾನೆ. ಹೋಟೆಲ್ಗಳಲ್ಲಿ ಈಗಾಗಲೇ ಬಾಂಬ್ ಇರಿಸಲಾಗಿದೆ ಎಂಬ ಮಾತನ್ನು ಆಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ಈ ಬಗ್ಗೆ ಸುದ್ದಿ ಮುಟ್ಟಿಸಲಾಯಿತು. ಕರೆ ಸ್ವೀಕರಿಸಿದ ಹೋಟೆಲ್ ಸಿಬ್ಬಂದಿಯಿಂದ ವಿವರಣೆ ಪಡೆಯಲಾಗಿದೆ. ಜತೆಗೆ ಈ ಕರೆಯ ಸತ್ಯಾಸತ್ಯತೆ ಹಾಗೂ ಕರಾಚಿಯಿಂದ ಬಂದದದ್ದು ಹೌದೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.
2008ರಲ್ಲಿ ನಡೆದಿದ್ದ ಮುಂಬಯಿ ದಾಳಿಯ ಸಂದರ್ಭದಲ್ಲಿ ಕೊಲಾಬಾದಲ್ಲಿರುವ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ನೊಳಕ್ಕೆ ನುಗ್ಗಿದ್ದ ಉಗ್ರರು, ಹಲವಾರು ಜನರನ್ನು ಕೊಂದಿದ್ದರು. ಭಾರತದ ಇತಿಹಾಸದಲ್ಲೇ ಅತಿ ಭೀಕರವಾದ ದಾಳಿಗಳಲ್ಲೊಂದಾದ ಮುಂಬಯಿ ದಾಳಿಗೆ ಒಟ್ಟು 170 ಜನರು ಬಲಿಯಾಗಿದ್ದರು. ಒಟ್ಟು ಮೂರು ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಎನ್ಎಸ್ಜಿ ಯೋಧ ಸಂದೀಪ್ ಉನ್ನಿಕೃಷ್ಣನ್, ಮುಂಬಯಿ ಪೊಲೀಸ್ನ ಹಲವಾರು ಧೀಮಂತ ಅಧಿಕಾರಿಗಳು ಹುತಾತ್ಮರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
MUST WATCH
ಹೊಸ ಸೇರ್ಪಡೆ
Kasaragod ವಿವಿಪ್ಯಾಟ್ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ