ಕೆಐಎಎಲ್ನಲ್ಲಿ ಮೂರುವರೆ ಕೆಜಿ ಚಿನ್ನ ಸಹಿತ ವ್ಯಕ್ತಿ ಸೆರೆ
ದುಬೈನಲ್ಲಿ ಕಬ್ಬಿಣದಲ್ಲಿ ಪ್ಯಾಕ್ ಮಾಡಿ ಕಳ್ಳ ಸಾಗಾಣಿಕೆ
Team Udayavani, May 3, 2019, 4:10 PM IST
Representative Image
ಬೆಂಗಳೂರು : ಇಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದಿದ್ದ ಪ್ರಯಾಣಿಕನೊಬ್ಬನನ್ನು
1ಕೋಟಿ 19 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಚಾಮರಾಜನಗರ ಮೂಲದ ವ್ಯಕ್ತಿ ಚಿನ್ನವನ್ನುಕಳ್ಳಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿ ಎಂದು ತಿಳಿದು ಬಂದಿದೆ.
3 ಕೆಜಿ 680 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದ್ದು,ದುಬೈನಿಂದ
ಕಬ್ಬಿಣದ ತಗಡುಗಳಲ್ಲಿ ಹಾಕಿ ಪ್ಯಾಕ್ ಮಾಡಿ ಕಳ್ಳಸಾಗಾಣಿಕೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಹೈದರಾಬಾದ್ನಲ್ಲೂ 650 ಗ್ರಾಂ ಚಿನ್ನವನ್ನುದೈಬೈನಿಂದ ಬಂದ ಪ್ರಯಾಣಿಕನ ಬಳಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.