ಎಸ್ಡಿಆರ್ಎಫ್ ಕೇಂದ್ರದಿಂದ 395 ಕೋ. ರೂ.
Team Udayavani, Apr 6, 2020, 5:15 AM IST
ಬೆಂಗಳೂರು: ಕೋವಿಡ್ 19 ಸೋಂಕು ಪೀಡಿತರಿಗೆ ಚಿಕಿತ್ಸೆ ಜತೆಗೆ ಸೋಂಕು ತಡೆ ಮೂಲಕ ಸಮುದಾಯ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ರಾಜ್ಯ ವಿಪತ್ತು ಸ್ಪಂದನ ನಿರ್ವಹಣ ನಿಧಿ (ಎಸ್ಡಿಆರ್ಎಫ್)ಯಡಿ ತನ್ನ ಪಾಲಿನ 11,067 ಕೋ.ರೂ. ಘೋಷಿಸಿದ್ದು, ರಾಜ್ಯಕ್ಕೆ 395.50 ಕೋ. ರೂ. ಬಿಡುಗಡೆಯಾಗಿದೆ.
ರಾಜ್ಯಕ್ಕೆ 2020-21ನೇ ಸಾಲಿಗೆ ಕೇಂದ್ರ ಸರಕಾರವು ಎಸ್ಡಿಆರ್ಎಫ್ ಅಡಿ 1,054 ಕೋ. ರೂ. ಕಾಯ್ದಿರಿಸಿದ್ದು, ಅದರಡಿ ಮೊದಲ ಕಂತಿನಲ್ಲಿ 395 ಕೋ. ರೂ. ಬಿಡುಗಡೆ ಮಾಡಿದೆ. ಹಾಗಾಗಿ ಎಸ್ಡಿಆರ್ಎಫ್ನಡಿ ಬಾಕಿ ಉಳಿಯುವ 659 ಕೋ.ರೂ. ಮಾತ್ರ ವರ್ಷಪೂರ್ತಿ ಎದುರಾಗಬಹುದಾದ ವಿಪತ್ತುಗಳ ನಿರ್ವಹಣೆಗೆ ಸಿಗುವ ಆಪದ್ಧನವಾಗಿದೆ.ರಾಜ್ಯ ಸರಕಾರ ಎಸ್ಡಿಆರ್ಎಫ್ನಡಿ 80 ಕೋ. ರೂ. ಹಣವನ್ನು ಕೋವಿಡ್ 19 ಸೋಂಕು ನಿಯಂತ್ರಣಕ್ಕೆ ಬಳಸುವುದಾಗಿ ಈ ಹಿಂದೆ ಪ್ರಕಟಿಸಿತ್ತು.
ಕೇಂದ್ರದಿಂದ ಎಸ್ಡಿಆರ್ಎಫ್ ನಿಧಿಯಡಿ 395 ಕೋ.ರೂ. ಬಿಡುಗಡೆಯಾಗಿದೆ. ಪ್ರತಿ ರಾಜ್ಯಗಳಲ್ಲಿ ಕೋವಿಡ್ 19 ಸೋಂಕು ತಡೆ, ನಿಯಂತ್ರಣ ಸ್ಥಿತಿಗತಿ ಆಧಾರದ ಮೇಲೆ ಕೇಂದ್ರ ಹಣ ನೀಡಿದಂತಿದೆ. ಸದ್ಯದಲ್ಲೇ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಭೆ ನಡೆಸಿ ಹಣ ಬಳಕೆಗೆ ಕಾರ್ಯ ಯೋಜನೆ ರೂಪಿಸಿ ಸೋಂಕು ತಡೆಗೆ ಸರಕಾರ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಿದೆ.
-ಆರ್.ಅಶೋಕ್, ಕಂದಾಯ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ
Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ