40 ಕಿ.ಮೀ. ನಡೆದು ಅಭಿಷೇಕಕ್ಕೆ ಕಪಿಲಾ ನದಿ ನೀರು ತಂದರು!
Team Udayavani, Feb 19, 2023, 6:55 AM IST
ಚಾಮರಾಜನಗರ: ಪ್ರತಿ ವರ್ಷದಂತೆಯೇ, ಈ ಬಾರಿಯೂ ತಾಲೂಕಿನ ಹೆಗ್ಗೊಠಾರ ಗ್ರಾಮದ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಐದು ಕುಟುಂಬಗಳ ತಲಾ ಒಬ್ಬೊಬ್ಬರು ಸದಸ್ಯರು ಕಪಿಲಾ ನದಿಯಿಂದ ಬರಿಗಾಲಲ್ಲಿ ನಡೆದುಕೊಂಡು, ತಲೆ ಮೇಲೆ ಕೊಡ ಹೊತ್ತು ಅಭಿಷೇಕಕ್ಕೆ ನೀರುತಂದರು.
ಶಿವರಾತ್ರಿ ದಿನ ಬೆಳ್ಳಂಬೆಳಗ್ಗೆಯೇ ಹೊರಟು 40 ಕಿ.ಮೀ. ದೂರದ ಕಪಿಲಾ ನದಿಯಿಂದ ತಾಮ್ರದ ಬಿಂದಿಗೆಯಲ್ಲಿ ನೀರು ತುಂಬಿಸಿಕೊಂಡು ಬರಿಗಾಲಲ್ಲಿ, ಬಿರು ಬಿಸಿಲಿನಲ್ಲಿ 40 ಕಿ.ಮೀ. ನಡೆದು ಆ ನೀರನ್ನು ತಂದು ಗ್ರಾಮದ ಸಿದ್ದರಾಮೇಶ್ವರಸ್ವಾಮಿಯ ಅಭಿಷೇಕಕ್ಕೆ ನೀಡುವ ಆಚರಣೆ ಹಿಂದಿನಿಂದಲೂ ನಡೆದುಬಂದಿದೆ.
ಅಂತೆಯೇ ಈ ಬಾರಿಯೂ ಕುಮಾರಸ್ವಾಮಿ, ಶಿವಮಲ್ಲು, ರಾಜು, ಕುಮಾರ, ಕರಿಯಪ್ಪ ಅವರು ಬೆಳಗ್ಗೆಯೇ ಕಪಿಲಾ ನದಿಗೆ ತೆರಳಿ, ಅಲ್ಲಿಂದ ಕೊಡದಲ್ಲಿ ನೀರು ಹೊತ್ತು 40 ಕಿ.ಮೀ. ದೂರ ತಮ್ಮ ಗ್ರಾಮಕ್ಕೆ ನಡೆದುಕೊಂಡು ಬಂದು ಸಂಜೆ 4.30ರಲ್ಲಿ ಗ್ರಾಮಕ್ಕೆ ತಲುಪಿದರು. ಕೊಡಗಳನ್ನು ದೇವಾಲಯದಲ್ಲಿರಿಸಿದರು. ರಾತ್ರಿ ನಡೆಯುವ ಶಿವಲಿಂಗ ಪೂಜೆಗೆ ಈ ನೀರನ್ನು ಅಭಿಷೇಕ ಮಾಡಿ, ಭಕ್ತರಿಗೆ ತೀರ್ಥವನ್ನಾಗಿ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ