ವಿಶ್ವವಿದ್ಯಾನಿಲಯಗಳಲ್ಲಿ ಶೇ.40 ಆನ್‌ಲೈನ್‌ ಪಾಠ?


Team Udayavani, May 23, 2021, 7:05 AM IST

ವಿಶ್ವವಿದ್ಯಾನಿಲಯಗಳಲ್ಲಿ ಶೇ.40 ಆನ್‌ಲೈನ್‌ ಪಾಠ?

ಹೊಸದಿಲ್ಲಿ: ಕೊರೊನಾ ಬಂದ ಮೇಲೆ ದೇಶದ ಶಿಕ್ಷಣ ವ್ಯವಸ್ಥೆ ಹೆಚ್ಚು ಕಡಿಮೆ ಬದಲಾಗಿ ಹೋಗಿದೆ. ಪ್ರತ್ಯಕ್ಷ ತರಗತಿಗಳು ಸ್ಥಗಿತಗೊಂಡು, ಆನ್‌ಲೈನ್‌ನಲ್ಲೇ ನಡೆಯುತ್ತಿವೆ. ಈ ವ್ಯವಸ್ಥೆ ಮುಂದೆ ಶಾಶ್ವತವಾದರೆ…?

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ)ದ ಸಮಿತಿಯೊಂದು ಇಂಥ ದೂರದೃಷ್ಟಿಯನ್ನು ಇರಿಸಿಕೊಂಡು ಕೆಲವು ಶಿಫಾರಸುಗಳನ್ನು ಮಾಡಿದೆ. “ಸಮ್ಮಿಶ್ರ ಶಿಕ್ಷಣ ಮತ್ತು ಕಲಿಕೆ’ ಎಂಬ ಕರಡು ವರದಿಯನ್ನು ಯುಜಿಸಿ ರೂಪಿಸಿದ್ದು, ಇದರಲ್ಲಿ ಆನ್‌ಲೈನ್‌ ಕಲಿಕೆಯನ್ನು ಶೇ. 40ರಷ್ಟು ಮುಂದುವರಿಸುವ ಬಗ್ಗೆ ಪ್ರಸ್ತಾವಿಸಲಾಗಿದೆ. ಈ ಕರಡನ್ನು ಯುಜಿಸಿ ವೆಬ್‌ ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಲಾಗಿದೆ.

ಏನಿದು ಸಮ್ಮಿಶ್ರ ಕಲಿಕೆ?
ಯುಜಿಸಿ ಸಮಿತಿ ಹೇಳಿರುವಂತೆ ವಿದ್ಯಾರ್ಥಿಗಳೇ ಇನ್ನು ಮುಂದೆ ಶಿಕ್ಷಕರು ಮತ್ತು ಪಾಠ ಮಾಡುವ ಸಮಯ ಆಯ್ದುಕೊಳ್ಳಬಹುದು. ತಮಗೆ ಬೇಕಾದ ಕೋರ್ಸ್‌ಗಳನ್ನೂ ರೂಪಿಸಿಕೊಳ್ಳಬಹುದು. ಆನ್‌ಲೈನ್‌ ಅಥವಾ ಆಫ್ ಲೈನ್‌ ಕಲಿಕೆ ಆಯ್ದುಕೊಳ್ಳಬಹುದು. ಪರೀಕ್ಷೆಗಳು ಬೇಡಿಕೆಗೆ ತಕ್ಕಂತೆ ನಡೆಯುತ್ತವೆ.

ಎನ್‌ಇಪಿಯಂತೆ ಶಿಫಾರಸು
ರಾಷ್ಟ್ರೀಯ ಶಿಕ್ಷಣ ನೀತಿ 2020(ಎನ್‌ಇಪಿ)ರ ಪ್ರತಿಪಾದನೆಗಳಿಗೆ ಅನುಗುಣವಾಗಿ ಯುಜಿಸಿ ಸಮಿತಿ ಈ ಶಿಫಾರಸುಗಳನ್ನು ಮಾಡಿದೆ.

ಶೇ. 40-60ರ ಅನುಪಾತ
ಎಲ್ಲಕ್ಕಿಂತ ಮುಖ್ಯವಾಗಿ ಯುಜಿಸಿ ಸಮಿತಿ ಮುಂದಿನ ದಿನಗಳಲ್ಲಿ ಶೇ. 40ರಷ್ಟನ್ನು ಆನ್‌ಲೈನ್‌ ನಲ್ಲಿ ಮತ್ತು ಶೇ. 60ರಷ್ಟನ್ನು ಆಫ್ಲೈನ್‌ ನಲ್ಲಿ ಕಲಿಸುವ ಬಗ್ಗೆ ಶಿಫಾರಸು ಮಾಡಿದೆ. ಪರೀಕ್ಷೆಗಳನ್ನೂ ಈ ಎರಡೂ ಮಾದರಿಗಳಲ್ಲಿ ಮಾಡಬಹುದು ಎಂದು ಹೇಳಿದೆ.

ಸಮ್ಮಿಶ್ರ ಕಲಿಕೆಯಿಂದ ವಿದ್ಯಾರ್ಥಿಗಳ ಕೌಶಲ, ಮಾಹಿತಿ ಲಭ್ಯತೆ, ಹೆಚ್ಚಿನ ತೃಪ್ತಿ ಮತ್ತು ಕಲಿಕೆಯ ಫ‌ಲಿತಾಂಶ ಹೆಚ್ಚುತ್ತದೆ.
ಈ ಸಮ್ಮಿಶ್ರ ಕಲಿಕೆಯಲ್ಲಿ ಶಿಕ್ಷಕರು ತರಬೇತುದಾರ ಮತ್ತು ಮಾರ್ಗದರ್ಶಕನಾಗಿ ಬದಲಾಗುತ್ತಾರೆ.

ಪ್ರತ್ಯಕ್ಷ ತರಗತಿಗಳಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರಾದರೆ ಸಮ್ಮಿಶ್ರ ಕಲಿಕೆಯಲ್ಲಿ ವಿದ್ಯಾರ್ಥಿಗಳದ್ದೇ ಪ್ರಮುಖ ಪಾತ್ರ . ವಿದ್ಯಾರ್ಥಿಗಳ ಇಚ್ಛೆಯಂತೆ ಕಲಿಕೆ ಸಾಗುತ್ತದೆ. ಇದು ಆರಂಭದಲ್ಲಿ ಉನ್ನತ ಶಿಕ್ಷಣದಲ್ಲಿ ಜಾರಿಯಾಗಲಿದೆ ಎಂದು ಯುಜಿಸಿ
ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.