42 ಸಾವು, ನಾಲ್ಕು ಲಕ್ಷ ಹೆಕ್ಟೇರ್ ಬೆಳೆ ಹಾನಿ
Team Udayavani, Aug 13, 2019, 3:09 AM IST
ಬೆಂಗಳೂರು: ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯಿಂದ ಆ.1 ರಿಂದ 12 ರವರೆಗೆ ಪ್ರವಾಹ ಪೀಡಿತ 17 ಜಿಲ್ಲೆಗಳಲ್ಲಿ 86 ತಾಲೂಕುಗಳು ಪ್ರವಾಹಕ್ಕೆ ಸಿಲುಕಿವೆ. 42 ಜನ ಜೀವ ಕಳೆದುಕೊಂಡಿದ್ದು, 12 ಜನ ಕಾಣೆಯಾಗಿದ್ದಾರೆ. 548 ಪ್ರಾಣಿಗಳು ಜೀವ ಕಳೆದುಕೊಂಡಿವೆ. ಜನ ಜಾನುವಾರು ಹಾನಿ ಹಾಗೂ ಆಸ್ತಿಪಾಸ್ತಿಗೆ ನಷ್ಟವಾಗಿರುವ ಕುರಿತು ರಾಜ್ಯ ಸರ್ಕಾರ ಅಧಿಕೃತ ಮಾಹಿತಿ ಪ್ರಕಟಿಸಿದ್ದು, ಹದಿನೇಳು ಜಿಲ್ಲೆಗಳ 2694 ಹಳ್ಳಿಗಳು ಪ್ರವಾಹಕ್ಕೆ ಸಿಲುಕಿಕೊಂಡಿವೆ.
ಪ್ರವಾಹದಲ್ಲಿ ಸಿಲುಕಿದ್ದ 5.81 ಲಕ್ಷ ಜನರನ್ನು ರಕ್ಷಿಸಲಾ ಗಿದ್ದು, ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 3.45 ಲಕ್ಷ ಜನರನ್ನು ರಕ್ಷಿಸಲಾಗಿದೆ. ಬಾಗಲಕೋಟೆಯಲ್ಲಿ 1 ಲಕ್ಷ ಸಂತ್ರಸ್ತರನ್ನು ರಕ್ಷಿಸಲಾಗಿದೆ. ಪ್ರವಾಹದಲ್ಲಿ ನಿರಾಶ್ರಿತರಾಗಿರುವ ಜನರಿಗೆ 1181 ಸಾಂತ್ವನ ಕೇಂದ್ರಗಳನ್ನು ತೆರೆಯಲಾಗಿದ್ದು, 3.32 ಲಕ್ಷ ಜನರು ಸಾಂತ್ವನ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಪ್ರವಾಹದಲ್ಲಿ ಸಿಲುಕಿದ್ದ 50,595 ಜಾನುವಾರುಗಳನ್ನು ರಕ್ಷಿಸಲಾಗಿದ್ದು, ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 50,554 ಪ್ರಾಣಿಗಳನ್ನು ರಕ್ಷಿಸಲಾಗಿದ್ದು, 32,305 ಜಾನುವಾರಗಳಿಗೆ ಗೋ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಪ್ರವಾಹದಿಂದ 4 ಲಕ್ಷ 21 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶವಾಗಿದ್ದು, 31,800 ಮನೆಗಳು ಜಖಂಗೊಂಡಿವೆ ಎಂದು ಕಂದಾಯ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಸಾವಿಗೀಡಾದ ಪ್ರಾಣಿಗಳು: ಬೆಳಗಾವಿ 133, ಬಾಗಲಕೋಟೆ-29, ಉತ್ತರ ಕನ್ನಡ-31, ಶಿವಮೊಗ್ಗ-24, ಉಡುಪಿ-4, ಚಿಕ್ಕಮಗಳೂರು-2, ಗದಗ-25, ಮೈಸೂರು-4, ಧಾರವಾಡ-187, ಹಾವೇರಿ-109 ಜಾನುವಾರುಗಳು ಸಾವಿಗೀಡಾಗಿವೆ.
ತಾಲೂಕುಗಳು: ಬೆಳಗಾವಿ-10, ಬಾಗಲಕೋಟೆ-6, ವಿಜಯಪುರ-4,ರಾಯ ಚೂರು-3, ಯಾದಗಿರಿ-3, ಉತ್ತರ ಕನ್ನಡ-11, ದಕ್ಷಿಣ ಕನ್ನಡ-5, ಶಿವಮೊಗ್ಗ-7, ಉಡುಪಿ-3, ಕೊಡಗು-3, ಚಿಕ್ಕಮಗ ಳೂರು-4, ಹಾಸನ-8, ಗದಗ-3, ಮೈಸೂರು-3, ಧಾರವಾಡ-5, ಹಾವೇರಿ-6, ಕಲಬುರಗಿ-2 ತಾಲೂಕು ಗಳಿಗೆ ಹಾನಿಗೊಳಗಾಗಿವೆ.
ಹಳ್ಳಿಗಳು: ಬೆಳಗಾವಿ-365, ಬಾಗಲ ಕೋಟೆ-173, ವಿಜಯಪುರ-73, ರಾಯ ಚೂರು-29, ಯಾದಗಿರಿ-8, ಉತ್ತರ ಕನ್ನಡ-216, ದಕ್ಷಿಣ ಕನ್ನಡ-50, ಶಿವಮೊಗ್ಗ-556, ಉಡುಪಿ-4, ಕೊಡಗು-58, ಚಿಕ್ಕಮಗಳೂರು-72, ಹಾಸನ- 655, ಗದಗ-175, ಮೈಸೂರು- 51, ಧಾರವಾಡ-21, ಹಾವೇರಿ-138, ಕಲಬುರಗಿ-50 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ.
ಜನರ ರಕ್ಷಣೆ: ಬೆಳಗಾವಿ-3.45 ಲಕ್ಷ, ಬಾಗಲಕೋಟೆ-1 ಲಕ್ಷ, ವಿಜಯಪುರ- 8650, ರಾಯಚೂರು-2639, ಯಾದಗಿರಿ-318, ಉತ್ತರ ಕನ್ನಡ-3088, ದಕ್ಷಿಣ ಕನ್ನಡ-3516, ಶಿವಮೊಗ್ಗ-6200, ಕೊಡಗು-4600, ಚಿಕ್ಕಮಗಳೂರು-980, ಗದಗ-51171, ಮೈಸೂರು-4889, ಧಾರವಾಡ-35680, ಹಾವೇರಿ-14350 ಜನರನ್ನು ರಕ್ಷಿಸಲಾಗಿದೆ.
ಸಾಂತ್ವನ ಕೇಂದ್ರಗಳು: ಬೆಳಗಾವಿ-436, ಬಾಗಲಕೋಟೆ-203, ವಿಜಯಪುರ-7, ರಾಯಚೂರು-15, ಯಾದಗಿರಿ-15, ಉತ್ತರ ಕನ್ನಡ-93, ದಕ್ಷಿಣ ಕನ್ನಡ-30, ಶಿವಮೊಗ್ಗ-25, ಉಡುಪಿ-0, ಕೊಡಗು-44, ಚಿಕ್ಕಮಗಳೂರು-12, ಹಾಸನ-11, ಗದಗ-40, ಮೈಸೂರು-32, ಧಾರವಾಡ-81, ಹಾವೇರಿ-137 ಸಾಂತ್ವನ ಕೇಂದ್ರಗಳನ್ನು ತೆರೆಯಲಾಗಿದೆ.
ಬೆಳೆ ಹಾನಿ: ಬೆಳಗಾವಿ-1.57 ಲಕ್ಷ ಹೆ., ಬಾಗಲಕೋಟೆ-29,765, ವಿಜಯಪುರ -16642, ರಾಯಚೂರು-2821, ಯಾದಗಿರಿ-2360, ಉತ್ತರ ಕನ್ನಡ- 10,100, ದಕ್ಷಿಣ ಕನ್ನಡ-14, ಶಿವಮೊಗ್ಗ- 18319, ಉಡುಪಿ-1171, ಕೊಡಗು-0, ಚಿಕ್ಕಮಗಳೂರು-1483, ಹಾಸನ- 2485, ಗದಗ-6172, ಮೈಸೂರು-201, ಧಾರವಾಡ-1.07 ಲಕ್ಷ, ಹಾವೇರಿ- 59773, ಕಲಬುರಗಿ-5830 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
ಮನೆ ಹಾನಿ: ಬೆಳಗಾವಿ-9748, ಬಾಗಲಕೋಟೆ-ಪರಿಶೀಲನೆಯಲ್ಲಿದೆ. ಉತ್ತರ ಕನ್ನಡ-2072, ದಕ್ಷಿಣ ಕನ್ನಡ-432, ಶಿವಮೊಗ್ಗ-805, ಉಡುಪಿ-455, ಕೊಡಗು-16, ಚಿಕ್ಕಮಗಳೂರು-327, ಹಾಸನ-763, ಗದಗ-1853, ಮೈಸೂರು-832, ಧಾರವಾಡ-7931, ಹಾವೇರಿ-6566 ಮನೆಗಳು ಹಾನಿಗೊಳಗಾಗಿವೆ.
ಎಲ್ಲಿ, ಎಷ್ಟು ಜೀವಹಾನಿ?
ಬೆಳಗಾವಿ 12
ಬಾಗಲಕೋಟೆ 2
ಉತ್ತರ ಕನ್ನಡ 4
ದಕ್ಷಿಣ ಕನ್ನಡ 2
ಶಿವಮೊಗ್ಗ 3
ಉಡುಪಿ-2
ಕೊಡಗು-7
ಚಿಕ್ಕಮಗಳೂರು 5
ಮೈಸೂರು 2
ಧಾರವಾಡ 3
ಕಾಣೆಯಾದವರು: ಬೆಳಗಾವಿ-2, ಕೊಡಗು-8, ಚಿಕ್ಕಮಗಳೂರು-1, ಹಾವೇರಿ-1 ಕಾಣೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್