50 ನರ್ಸರಿ ಪದ್ಯ ತಪ್ಪಿಲ್ಲದೆ ಹೇಳುವ 3ರ ಪೋರಿ! 6 ತಿಂಗಳಲ್ಲಿ ಕನ್ನಡ, ತುಳು ಕಲಿತ ಜಾಣೆ ಈಕೆ
Team Udayavani, Oct 10, 2020, 3:50 PM IST
ಮಹಾನಗರ: ತೊದಲು ನುಡಿ ಕಲಿಯುವ ವಯಸ್ಸಿನಲ್ಲಿ ನರ್ಸರಿ ಪದ್ಯ, ಸಂಸ್ಕೃತ ಶ್ಲೋಕ, ರಾಷ್ಟ್ರಗೀತೆಯನ್ನು ನೆನಪಿಟ್ಟುಕೊಂಡು ತಪ್ಪಿಲ್ಲದೆ ಹಾಡುವುದು ಸಾಧ್ಯವೇ? ಸಾಧ್ಯವಾಗಿಸಿದ್ದಾಳೆ ಈ ಪೋರಿ! ಅಲ್ಲದೆ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯಿಂದಲೂ ಶ್ಲಾಘನೆಗೆ ಪಾತ್ರಳಾಗಿದ್ದಾಳೆ.
ಈಕೆ ಹೆಸರು ಪೂರ್ವಿ ಪುಷ್ಪರಾಜ್ ಕುಂದರ್. ಈಕೆಗಿನ್ನೂ 3 ವರ್ಷ. ಆದರೆ ಸಾಧನೆ ಮಾತ್ರ ದೊಡ್ಡದು. ಈಕೆ 50ಕ್ಕೂ ಹೆಚ್ಚು ನರ್ಸರಿ ಇಂಗ್ಲಿಷ್ ರಿದಮ್ಗಳನ್ನು ನಟನೆಯೊಂದಿಗೆ ಪುಸ್ತಕ ನೋಡದೆಯೇ ಹಾಡಬಲ್ಲಳು. ರಾಷ್ಟ್ರಗೀತೆ, ಶಕ್ತಿ ಸಹಿತ ಗಣಪತಿಂ ಸಂಸ್ಕೃತ ಶ್ಲೋಕವನ್ನೂ ಬಾಯಿಪಾಠ ಮಾಡಿಕೊಂಡು ತಪ್ಪಿಲ್ಲದೆ ಹಾಡುತ್ತಾಳೆ. 1ರಿಂದ 10ರ ವರೆಗೆ ಮತ್ತು ಇಂಗ್ಲಿಷ್ ವರ್ಣಮಾಲೆ ಅಕ್ಷರಗಳನ್ನು ಕೂಡ ತಪ್ಪಿಲ್ಲದೆ ಹೇಳುತ್ತಾಳೆ. ಈಕೆಯ ಪ್ರತಿಭೆಯನ್ನು ಹೆತ್ತವರು ವೀಡಿಯೋ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿಂದ ಪುಟ್ಟ ಪೋರಿಯ ಸಾಧನೆಗೆ ಶ್ಲಾಘನೆ ವ್ಯಕ್ತವಾಗಿದೆ.
ಸಂಗೀತ ಆಲಿಕೆ
ಪೂರ್ವಿ ತಂದೆ ಪುಷ್ಪರಾಜ್ ಕುಂದರ್, ತಾಯಿ ವೈಶಾಲಿ ಕುಂದರ್ ಇಬ್ಬರೂ ಉದ್ಯೋಗಿಗಳು. ರಾತ್ರಿ ವೇಳೆ ಸಿಗುವ ಅಲ್ಪ ಸಮಯದಲ್ಲೇ ಮಗಳಿಗೆ ನರ್ಸರಿ ರಿದಮ್ಗಳನ್ನು ಅಭ್ಯಾಸ ಮಾಡಿಸಿದ್ದಾರೆ. ಎರಡು ಸಲ ಹೇಳಿಕೊಟ್ಟರೆ ಮತ್ತೆ ಆಕೆಯೇ ತಪ್ಪಿಲ್ಲದೆ ಅಭ್ಯಾಸ ಮಾಡಿ ಒಪ್ಪಿಸುತ್ತಾಳೆ. ಸಂಗೀತ ಆಲಿಸುವುದನ್ನು ಆಕೆಗೆ ಎಳವೆಯಿಂದಲೇ ಅಭ್ಯಾಸ ಮಾಡಿಸಿದ್ದೇವೆ ಎನ್ನುತ್ತಾರೆ ವೈಶಾಲಿ.
3 ಭಾಷಾ ಹಿಡಿತ!
ಈ ಪುಟ್ಟ ಪೋರಿ ಮೂರು ಭಾಷೆಗಳನ್ನು ಮಾತನಾಡಬಲ್ಲಳು. ಇಂಗ್ಲಿಷ್, ಕನ್ನಡ, ತುಳುವಿನಲ್ಲಿ ಚೆನ್ನಾಗಿ ಮಾತನಾಡುವ ಕಲೆ ಈಕೆಗೆ ಕರಗತ. ಹೆತ್ತವರಿಬ್ಬರೂ ಕೆಲಸಕ್ಕೆ ಹೋಗುವಾಗ ಬೆಂಗಳೂರಿನ ಕ್ಲೇ ಡೇ ಕೇರ್ ಸೆಂಟರ್ನಲ್ಲಿ ದಿನ ಕಳೆಯುವ ಪೂರ್ವಿಗೆ ಇಂಗ್ಲಿಷ್ ಮನೆಯಲ್ಲಿ ಮಾತನಾಡುವ ಭಾಷೆ. ಲಾಕ್ಡೌನ್ ಅವಧಿಯಲ್ಲಿ ಮಂಗಳೂರಿನ ಕೊಟ್ಟಾರ ದ್ವಾರಕಾನಗರದಲ್ಲಿರುವ ಮನೆಗೆ ಹೆತ್ತವರೊಂದಿಗೆ ಆಗಮಿಸಿರುವ ಆಕೆ ಅಜ್ಜ-ಅಜ್ಜಿಯ ಜತೆ ಸೇರಿ ಕನ್ನಡ, ತುಳು ಭಾಷೆಯನ್ನು ಆರು ತಿಂಗಳುಗಳಲ್ಲೇ ಕಲಿತು ಮಾತನಾಡುವಷ್ಟು ಶಕ್ತಳಾಗಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ