ದಿನಕ್ಕೆ 500 ಕೆ.ಜಿ. ಒಣ ತ್ಯಾಜ್ಯ ಬರ್ನ್

ಸುಳ್ಯ: ತಂತ್ರಜ್ಞಾನ ಆಧಾರಿತ ತ್ಯಾಜ್ಯ ವಿಲೇವಾರಿ ಪ್ರಾಯೋಗಿಕ ಆರಂಭ

Team Udayavani, Aug 25, 2022, 10:14 AM IST

1

ಸುಳ್ಯ: ಅಭಿವೃದ್ಧಿ ಹೊಂದುತ್ತಿರುವ ಕಡೆಗಳಲ್ಲಿ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ ತ್ಯಾಜ್ಯ ವಿಲೇವಾರಿ. ಪ್ಲಾಸ್ಟಿಕ್‌ ಹಾವಳಿಯಿಂದ ಜಗತ್ತೇ ತಲ್ಲಣಗೊಳ್ಳುತ್ತಿದೆ. ಇದರ ಮಧ್ಯೆ ಸುಳ್ಯ ನಗರ ಪಂಚಾಯತ್‌ ವತಿಯಿಂದ ಕಸವನ್ನು ಆಧುನಿಕ ತಂತ್ರಜ್ಞಾನ ಬಳಸಿ ಗ್ಯಾಸಿಫಿಕೇಷನ್‌ ಯಂತ್ರದ ಸಹಾಯದಿಂದ ಪ್ಲಾಸ್ಟಿಕ್‌ ಸಹಿತ ವಿಲೇವಾರಿ (ಸುಡುವ) ಮಾಡುವ ಘಟಕ ಪ್ರಾಯೋಗಿಕವಾಗಿ ಕಾರ್ಯಾರಂಭಗೊಂಡಿದ್ದು ಪ್ರಯೋಗ ಯಶಸ್ವಿ ಹಂತದಲ್ಲಿದೆ.

ಸುಳ್ಯದ ಕಲ್ಚಪೆìಯಲ್ಲಿ ಬರ್ನಿಂಗ್‌ ಘಟಕ ಕಾರ್ಯಾಚರಿಸುತ್ತಿದೆ. ಒಣ ಕಸ ಸೇರಿದಂತೆ ಸುಮಾರು 500 ಕೆ.ಜಿ.ಯಷ್ಟು ತ್ಯಾಜ್ಯವನ್ನು ಪ್ರತೀ ದಿನ ಘಟಕದಲ್ಲಿ ಉರಿಸಲಾಗುತ್ತದೆ. ಕಳೆದ ಒಂದು ವರ್ಷಗಳ ಹಿಂದೆ ಯಂತ್ರ ಅಳವಡಿಕೆ ಮಾಡಲಾಗಿದ್ದು, ಇದೀಗ ಕಾರ್ಯಾರಂಭಿಸಿದೆ. ಬೆಂಗಳೂರಿನ ಪೆಟ್ರಿಕೋರ್‌ ಈಕೊ ಇನ್ನೋವೇಶನ್ಸ್‌ ಪ್ರೈವೆಟ್‌ ಲಿಮಿಟೆಡ್‌ ಎಂಬ ಸಂಸ್ಥೆ ಘಟಕ ನಿರ್ಮಿಸಿದ್ದು, 3 ತಿಂಗಳು ಕಂಪೆನಿ ಯವರೇ ಘಟಕದ ಕೆಲಸ ಹಾಗೂ ನಿರ್ವಹಣೆ ಮಾಡಲಿ ದ್ದಾರೆ. ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಘಟಕ ನಿರ್ಮಾಣಗೊಂಡಿದೆ.

ತ್ರಿಫೇಸ್‌ ವಿದ್ಯುತ್‌ ಅಗತ್ಯ ಘಟಕ ಕಾರ್ಯಾಚರಿಸಲು ನಿರಂತರವಾಗಿ ತ್ರಿಫೇಸ್‌ ವಿದ್ಯುತ್‌ ಪೂರೈಕೆ ಅತ್ಯಗತ್ಯವಾಗಿದೆ. ಘಟಕದಲ್ಲಿ ಒಟ್ಟು ಏಳು ಪಂಪ್‌ಗ್ಳಿದ್ದು, ನಾಲ್ಕು ನಿರಂತರ ಕಾರ್ಯಚರಿಸುತ್ತದೆ. ಎರಡು ಲೋಡ್‌ ಮಾಡುವಾಗ ಕಾರ್ಯಾಚರಿಸುತ್ತದೆ. ವಿದ್ಯುತ್‌ ಇಲ್ಲದೇ ಇರುವ ಸಂದರ್ಭದಲ್ಲಿ ಜನರೇಟರ್‌ ಬಳಕೆ ಮಾಡಲಾಗುತ್ತದೆ.

ಕಾರ್ಯನಿರ್ವಹಣೆ ಘಟಕದಲ್ಲಿ ಇಬ್ಬರು ಇದೀಗ ಕಂಪೆನಿ ಕಡೆಯಿಂದ ನಿರ್ವಾಹಕರಿದ್ದಾರೆ. ಬರ್ನಿಂಗ್‌ ಯಂತ್ರಕ್ಕೆ ಒಂದು ಬಾರಿಗೆ 250 ಕೆ.ಜಿ.ಯಷ್ಟು ತ್ಯಾಜ್ಯ ಲೋಡ್‌ ಮಾಡಬೇಕಾಗುತ್ತದೆ. ಕೆಳಭಾಗದಲ್ಲಿ ಕಸವನ್ನು ಪುಲ್ಲಿಂಗ್‌ ಮಾಡಿ ಮೇಲ್ಭಾಗದ ಕೊಳವೆಗೆ ತುಂಬಲಾಗುತ್ತದೆ. ಬಳಿಕ ಯಂತ್ರ ಆನ್‌ ಮಾಡಲಾಗಿ, ಕೆಳಭಾಗದಿಂದ ಬೆಂಕಿ ನೀಡಲಾಗುತ್ತದೆ. ಕೊಳವೆಗೆ ನಿರಂತರ ನೀರು ಪೂರೈಕೆಯೂ ಬೇಕಾಗಿದೆ. ಗ್ಯಾಸಿಫಿಕೇಶನ್‌ ತಂತ್ರಜ್ಞಾನದ ಮೂಲಕ ಕಸವನ್ನು ಉರಿಸಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಕಸವನ್ನು ವಿಲೇವಾರಿ ಮಾಡಿದಾಗ ಗ್ಯಾಸ್‌ ಉತ್ಪಾದನೆ ಆಗುತ್ತದೆ. ಇದನ್ನು ಮರು ಬಳಕೆ ಮಾಡಬಹುದಾಗಿದೆ. 250 ಕೆ.ಜಿ. ಕಸ ಉರಿಸಲು 3-4 ಗಂಟೆ ಬೇಕಿದೆ. ಈಗ ದಿನಕ್ಕೆ ಎರಡು ಬಾರಿ ಕಸ ಉರಿಸಲಾಗುತ್ತದೆ.

ಇಲ್ಲಿ ದೊರೆತ ಗ್ಯಾಸನ್ನು ಸಂಗ್ರಹಿಸಿ ಬಳಕೆ ಮಾಡಬಹುದಾಗಿದೆ. ಅದರ ಬಳಕೆಗೂ ಪ್ರಯೋಗಗಳು ನಡೆ ಯುತ್ತಿದೆ. ಇಲ್ಲಿ ಉತ್ಪತ್ತಿ ಯಾಗುವ ಹೊಗೆ ಅಥವಾ ಇನ್ನಾವುದೇ ಪ್ರಕ್ರಿಯೆಗಳು ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂದು ಸಂಸ್ಥೆಯವರು ಹೇಳುತ್ತಾರೆ. ನ. ಪಂ.ನ ಹಾಲಿ ಆಡಳಿತ ಮಂಡಳಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬರ್ನಿಂಗ್‌ ಮೆಷಿನ್‌ ಅಳವಡಿಸಲು ಯೋಜನೆ ರೂಪಿಸಿತ್ತು. ಈಗ ದಿನಕ್ಕೆ 500 ಕೆ.ಜಿ. ತ್ಯಾಜ್ಯ ವಿಲೇವಾರಿ ಆಗುತ್ತಿದ್ದು ಅದನ್ನು 1 ಸಾವಿರ ಕೆ.ಜಿ.ಗೆ ಹೆಚ್ಚಿಸುವ ಗುರಿ ಇರಿಸಲಾಗಿದೆ ಎಂದು ನ.ಪಂ. ಮುಖ್ಯಾಧಿಕಾರಿ ಸುಧಾಕರ ಎಂ.ಎಚ್‌. ತಿಳಿಸಿದ್ದಾರೆ.

ವಿದ್ಯುತ್‌ ಉತ್ಪಾದನೆ

ಇಲ್ಲಿ ಉತ್ಪತ್ತಿಯಾಗುವ ಗ್ಯಾಸ್‌ನಿಂದ ವಿದ್ಯುತ್‌ ಉತ್ಪಾದಿಸುವ ಪ್ರಕ್ರಿಯೆಗಳ ಬಗ್ಗೆ ಯೋಜನೆ ರೂಪಿಸುವ ಕೆಲಸವನ್ನು ಸಂಸ್ಥೆ ನಡೆಸುತ್ತಿದೆ. ಅದನ್ನು ಇಲ್ಲಿನ ಘಟಕ ಕಾರ್ಯನಿರ್ವಹಿಸಲು ಪೂರೈಸುವಂತೆ ಮಾಡಲು ಚಿಂತನೆಗಳು ನಡೆದಿದೆ. ಜತೆಗೆ ಸಂಸ್ಥೆಯವರು ಉರಿಸಲ್ಪಡುವ ಇತರ ವಸ್ತುಗಳಿಂದಲೂ ವಿದ್ಯುತ್‌ ಉತ್ಪಾದನೆಗೆ ಮುಂದಾಗಿದ್ದಾರೆ.

ಪರಿಸರ ಸ್ನೇಹಿ ಘಟಕ: ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬರ್ನಿಂಗ್‌ ಮೆಷಿನ್‌ ಅಳವಡಿಸಲಾಗಿದೆ. ಇದೀಗ ಕಸ ಉರಿಸುವಿಕೆ ಯಶಸ್ವಿಯಾಗಿ ನಡೆಯುತ್ತಿದೆ. ಪರಿಸರ ಸ್ನೇಹಿ ಘಟಕದಿಂದ ಪರಿಸರಕ್ಕೆ ಯಾವುದೇ ಹಾನಿಯಿರುವುದಿಲ್ಲ. ಸುಳ್ಯದ ಕಸದ ಸಮಸ್ಯೆ ಪರಿಹರಿಸಲು ಇಲ್ಲಿನ ಘಟಕ ಪೂರಕವಾಗಲಿದೆ. –ವಿನಯಕುಮಾರ್‌ ಕಂದಡ್ಕ, ಅಧ್ಯಕ್ಷರು ನಗರ ಪಂಚಾಯತ್‌ ಸುಳ್ಯ

-ದಯಾನಂದ ಕಲ್ನಾರ್‌

 

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.