ತಿರುಪತಿಯಿಂದ 522 ಕಿ.ಮೀ.ಕ್ರಮಿಸಿ ಅಚ್ಚರಿ ಮೂಡಿಸಿದ ಶ್ವಾನ
Team Udayavani, Nov 17, 2019, 3:04 AM IST
ಚಿಕ್ಕಮಗಳೂರು: ತಿರುಪತಿಯಿಂದ ಶಬರಿಮಲೆಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಮೂಡುಬಿದ್ರೆ ಮೂಲದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ತಂಡದ ಜತೆ ಶ್ವಾನವೊಂದು ಹೆಜ್ಜೆ ಹಾಕಿದ್ದು, ತಿರುಪತಿಯಿಂದ ನೂರಾರು ಕಿ.ಮೀ.ನಡೆದುಕೊಂಡು ಬಂದಿದ್ದು, ಅಚ್ಚರಿ ಮೂಡಿಸಿದೆ.
ತಿರುಪತಿಯಿಂದ ಅ.31ರಂದು ಪಾದಯಾತ್ರೆ ಆರಂಭಿಸಿ ಸುಮಾರು 522 ಕಿ.ಮೀ. ಕ್ರಮಿಸಿದ ಮೂಡುಬಿದ್ರೆಯ ತೋಡಾರು ಗ್ರಾಮದ ಅಯ್ಯಪ್ಪ ಮಾಲಾಧಾರಿಗಳು, ಶನಿವಾರ ಕೊಟ್ಟಿಗೆಹಾರ ತಲುಪಿದ್ದು, ಈ ಶ್ವಾನ ಅವರೊಂದಿಗೆ ಹಿಂಬಾಲಿಸಿಕೊಂಡು ಬಂದಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಗುರುಸ್ವಾಮಿ ರಾಜೇಶ್, ತಿರುಪತಿಯಿಂದ ಅಯ್ಯಪ್ಪ ಮಾಲಾಧಾರಣೆ ಮಾಡಿ 5 ಕಿ.ಮೀ.ಮುಂದೆ ಬರುವಾಗ ನಾಯಿಯೊಂದು ಹಿಂಬಾಲಿಸಲು ಆರಂಭಿಸಿ, 16 ದಿನಗಳ ಕಾಲ ಪಾದಯಾತ್ರೆಯಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕಿದೆ. ಸ್ವಲ್ಪ ದೂರ ಬಂದ ನಂತರ ಕುಂಟಲು ಆರಂಭಿಸಿತು.
2 ಕಡೆಗಳಲ್ಲಿ ನಾಯಿಗೆ ಚಿಕಿತ್ಸೆ ಕೊಡಿಸಿದೆವು ಎಂದರು.ಹಗಲು ವೇಳೆಯಲ್ಲಿ ಪಾದಯಾತ್ರೆ ಮಾಡುವ ನಾವು ರಾತ್ರಿ ಸಮಯದಲ್ಲಿ ದಾರಿಯಲ್ಲಿ ಸಿಗುವ ದೇವ ಸ್ಥಾನಗಳಲ್ಲಿ ತಂಗುತ್ತೇವೆ. ಶುಕ್ರವಾರ ಮೂಡಿಗೆರೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಉಳಿದುಕೊಂಡಿದ್ದೆವು. ಡಿ.15ರಂದು ಶಬರಿಮಲೆ ತಲುಪುತ್ತೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ