7ರ ಹರೆಯದ ಮಗುವಿಗೆ 5 ಲಕ್ಷ ರೂ.ಮೌಲ್ಯದ ಶ್ರವಣ ಸಾಧನ ಕೊಡುಗೆ
ಮಾಹೆ-ಪೈ ಫ್ಯಾಮಿಲಿ ಎಂಡೋಮೆಂಟ್
Team Udayavani, Jan 15, 2022, 10:25 AM IST
ಮಂಗಳೂರು: ಮಾಹೆ-ಪೈ ಫ್ಯಾಮಿಲಿ ಎಂಡೋಮೆಂಟ್ (ಸುಹಾಸ್ ಗೋಪಾಲ ಪೈ ಸ್ಮರಣಾರ್ಥ) ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದರ 7 ವರ್ಷದ ಮಗುವಿಗೆ 5 ಲಕ್ಷ ರೂ. ಮೌಲ್ಯದ ಶ್ರವಣ ಸಾಧನವನ್ನು ಕೊಡುಗೆಯಾಗಿ ನೀಡಿದೆ.
ಈ ಬಾಲಕ 2 ವರ್ಷದವನಿರುವಾಗಲೇ ಕಿವಿ ಕೇಳಿಸ ದಾಗಿತ್ತು. 2016 ರಲ್ಲಿ ಕೇಂದ್ರ ಸರಕಾರದ ಎಡಿಐಪಿ ಯೋಜನೆಯಡಿ ಕೋಖೀÉಯರ್ ಶ್ರವಣ ಸಾಧನವನ್ನು ಜೋಡಿಸಲಾಗಿತ್ತು. ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನೆರವೇರಿತ್ತು. ಮಗು ಚೇತರಿಸಿದ್ದು, ವಾಕ್ ಶ್ರವಣ ಶಕ್ತಿ ಚೆನ್ನಾಗಿತ್ತು. ಆದರೆ 2021 ಅಕ್ಟೋಬರ್ನಲ್ಲಿ
ಈ ಹಿಂದೆ ಅಳವಡಿಸಿದ್ದ ಶ್ರವಣ ಸಾಧನ ನಿಷ್ಕ್ರಿಯವಾಗುತ್ತಾ ಬಂದಿತ್ತು. ಹಳೆಯದನ್ನು ಬದಲಾಯಿಸಿ ಹೊಸ ಶ್ರವಣ ಸಾಧನ ಅಳವಡಿಸಲು 5 ಲಕ್ಷ ರೂ. ಬೇಕಾಗಿದ್ದು, ಅಷ್ಟು ವೆಚ್ಚ ಭರಿಸುವ ಸಾಮರ್ಥ್ಯ ಆ ಬಡ ಕುಟುಂಬಕ್ಕೆ ಇರಲಿಲ್ಲ. ಈ ಸಂದರ್ಭದಲ್ಲಿ ಮಾಹೆ- ಪೈ ಎಂಡೋಮೆಂಟ್ ನೆರವಿಗೆ ಬಂತು.
ಮಾನವ ಪ್ರೇಮಿ ಅನುರಾಧಾ ಗೋಪಾಲ ಪೈ ಅವರ ವಚ್ಯುವಲ್ ಉಪಸ್ಥಿತಿಯಲ್ಲಿ ಕೆಎಂಸಿ ಡೀನ್ ಡಾ| ಬಿ. ಉಣ್ಣಿಕೃಷ್ಣನ್ ಅವರು ಶ್ರವಣ ಸಾಧನವನ್ನು ಹಸ್ತಾಂತರಿಸಿದರು. ಅಸೋಸಿಯೇಟ್ ಡೀನ್ ಮತ್ತು ಇತರ ವೈದ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ:ನಿವೃತ್ತ ಯೋಧರಿಗೆ ಪಿಂಚಣಿ ಸಮಸ್ಯೆ ನಿವಾರಿಸಲು ವೆಬ್ಸೈಟ್
ಶ್ರವಣ ಸಾಧನ ಅಳವಡಿಸಿದ ಮಗು ಈಗ ಇತರ ಮಕ್ಕಳ ಜತೆಗೆ ಶಾಲೆಯಲ್ಲಿ ಕಲಿಯುತ್ತಿದೆ. ಮಾಹೆ-ಪೈ ಫ್ಯಾಮಿಲಿ ಎಂಡೋಮೆಂಟ್ ಮುಖಾಂತರ ಲೇಡಿಗೋಶನ್ ಆಸ್ಪತ್ರೆಯಲ್ಲಿ ಶ್ರವಣ ತಪಾಸಣಾ ಯಂತ್ರವನ್ನು ಅಳವಡಿಸಿದ್ದು, 2020ರಿಂದೀಚೆಗೆ ಅಲ್ಲಿ ಹುಟ್ಟಿದ ಸುಮಾರು 10,000 ನವಜಾತ ಶಿಶುಗಳಿಗೆ ಶ್ರವಣ ಪರೀಕ್ಷೆ ನಡೆಸಲಾಗಿದೆ. ಅಗತ್ಯ ಇರುವ ಮಕ್ಕಳಿಗೆ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಶ್ರವಣ ದೋಷ ನಿವಾರಿಸಲು ಚಿಕಿತ್ಸೆ ನೀಡಲಾಗುತ್ತಿದೆ ಎಂದ ಆಸ್ಪತ್ರೆಯ ವಾಕ್ ಶ್ರವಣ ತಜ್ಞ ಡಾ| ರಾದಿಶ್ ಕುಮಾರ್ ಬಿ. ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ