ಶರಾವತಿಗೆ ಕನ್ನ ಹಾಕಿದ್ದವರಿಗೆ ಬೆಂಡೆತ್ತಿದ್ದ ಬ್ರಿಟಿಷ್‌ ಅಧಿಕಾರಿ


Team Udayavani, Jun 27, 2019, 3:08 AM IST

sharavati

ಶಿವಮೊಗ್ಗ: ಶರಾವತಿ ನದಿಯ ನೀರು ಬಳಸಿ ಬೆಂಗಳೂರಿನ ದಾಹ ನೀಗಿಸಲು ಸರ್ಕಾರ ಸಿದ್ಧವಾಗಿದೆ. ಇದಕ್ಕೆ ಪರ-ವಿರೋಧ ಧ್ವನಿ ಮೊಳಗುತ್ತಿದೆ. ಆದರೆ, ಶರಾವತಿ ನದಿಯಿಂದ ಬೆಳಗುವ ಜೋಗದ ಸಿರಿ ಸೊಬಗು ಅಂದಗೆಡಿಸುವ ಯೋಜನೆಗೆ ಬ್ರಿಟಿಷರ ಕಾಲದಲ್ಲೇ ವಿರೋಧ ವ್ಯಕ್ತವಾಗಿತ್ತು.

1899, ಜ.6ರಿಂದ 1905, ನ.18ರವರೆಗೆ ಲಾರ್ಡ್‌ ಕರ್ಜನ್‌, ಭಾರತದ ವೈಸ್‌ರಾಯ್‌ ಆಗಿದ್ದರು. 1903ರ ವೇಳೆಗೆ ಜೋಗ ಜಲಪಾತದಲ್ಲಿ ವಿದ್ಯುತ್‌ ಉತ್ಪಾದಿಸಲು ಮೆಸರ್ಸ್‌ ಸ್ಟೆವಾರ್ಟ್‌ ಆ್ಯಂಡ್‌ ಕಂಪನಿ, ಮೆಸರ್ಸ್‌ ರಿಚ್‌ ಆ್ಯಂಡ್‌ ಕಂಪನಿ ಮೊದಲಾದ ಕೆಲವರು ಮೈಸೂರು ಆಡಳಿತದ ಅನುಮತಿ ಬೇಡಿದ್ದರು. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್‌ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದರು.

ಪೂರ್ಣಯ್ಯನವರ ಮೊಮ್ಮಗ ಪಿ.ಎನ್‌.ಕೃಷ್ಣಮೂರ್ತಿ ರಾಜ್ಯದ ದಿವಾನರಾಗಿದ್ದರು. ಮೈಸೂರು ದರ್ಬಾರ್‌ ವಿದ್ಯುತ್‌ ಉತ್ಪಾದನೆಗೆ ಅನುಮತಿ ನೀಡುವ ಮೊದಲು ಬಾಂಬೆ ಸರ್ಕಾರದ ಒಪ್ಪಿಗೆಯ ಅಗತ್ಯವಿತ್ತು. ಏಕೆಂದರೆ ಜಲಪಾತದ ಒಂದು ಬದಿ ಮತ್ತು ಕೆಳಹರಿವಿನ ಬಹಳಷ್ಟು ಪ್ರದೇಶ ಬಾಂಬೆ ಪ್ರಾಂತ್ಯದ ಸ್ವಾಮ್ಯದಲ್ಲಿತ್ತು.

ಬಾಂಬೆ ಸರ್ಕಾರದ ಅನುಮತಿ ಕೊಡಿಸುವಂತೆ ಮೈಸೂರು ದರ್ಬಾರ್‌ ಆಗಿನ ಭಾರತ ಸರ್ಕಾರದ ವೈಸ್‌ರಾಯ್‌ ಲಾರ್ಡ್‌ ನಥೇನಿಯಲ್‌ ಕರ್ಜನ್‌ ಅವರನ್ನು ಕೋರಿ ಪತ್ರ ಬರೆದಿದ್ದರು. ಆಗ ಜೋಗಕ್ಕೆ ಬಂದು ಜಲಪಾತವನ್ನು ಸ್ವತ: ವೀಕ್ಷಿಸಿದ ಕರ್ಜನ್‌, ಅದರ ಅದ್ಭುತ ಸೌಂದರ್ಯಕ್ಕೆ ಮಾರು ಹೋಗಿದ್ದರು. ಅಲ್ಲಿಂದ ಹಿಂದಿರುಗಿದ ಅವರು, ಜೋಗದ ಜಲಪಾತವನ್ನು ಅಂದಗೆಡಿಸುವ ವಿದ್ಯುತ್‌ ಯೋಜನೆಗೆ ಅನುಮತಿ ಕೊಡಲು ನಿರಾಕರಿಸಿದ್ದರು.

ಅಷ್ಟಕ್ಕೂ ಪತ್ರದಲ್ಲೇನಿದೆ?: “ನಾನು ಭಾರತದಲ್ಲಿ ಇರುವವರೆಗೂ ಉದ್ದಿಮೆದಾರ ಮೆಸರ್ಸ್‌ ರಿಚಿ, ಮೆಸರ್ಸ್‌ ಸ್ಟಿವಾರ್ಟ್‌ ಆ್ಯಂಡ್‌ ಕಂಪನಿ ಅಥವಾ ಇನ್ಯಾರದೋ ಲಾಭಕ್ಕಾಗಿ ವಿಶ್ವದ ಸುಂದರ ನಿಸರ್ಗ ತಾಣಗಳಲ್ಲಿ ಒಂದಾಗಿರುವ ಗೇರುಸೊಪ್ಪ ಜಲಪಾತವನ್ನು ವಿನಾಶಕ್ಕೆ ದೂಡುವ ಮೂರ್ಖ ನಿರ್ಣಯಕ್ಕೆ ಪಾಲುಗಾರನಾಗಲಾರೆ.

ಜಲಪಾತದ ನೀರನ್ನು ಬಳಸುವುದಕ್ಕೆ ಯಾರು ಎಂತಹ ಕಾರಣವನ್ನೇ ಕೊಡಲಿ, ಎಂತಹ ಕರಾರು ಅಥವಾ ಪಂಥವನ್ನೊಡ್ಡಲಿ ಜಲಪಾತವನ್ನು ಕಣ್ಣಾರೆ ಕಂಡ ಯಾರೊಬ್ಬರೂ ಅದಕ್ಕೆ ಸಮ್ಮತಿ ನೀಡುವುದು ಅಸಾಧ್ಯ. ಏಕೆಂದರೆ ವರ್ಷದ ಬಹುತೇಕ ಸಮಯ ನದಿಯ ಪಾತ್ರದಲ್ಲಿ ಹರಿಯುವ ನೀರು ಅತ್ಯಲ್ಪವಾಗಿದ್ದು, ಅದರಲ್ಲಿ ತುಸು ನೀರನ್ನು ತಿರುವಿದರೂ ಜಲಪಾತದ ನೈಸರ್ಗಿಕ ಚೆಲುವು ಸಂಪೂರ್ಣ ನಾಶವಾಗುತ್ತದೆ.

ಮಳೆಗಾಲದಲ್ಲಿ ಮಾತ್ರ ಸಮೃದ್ಧವಾಗಿ ಸುರಿಯುವ ಜಲರಾಶಿ ನವೆಂಬರ್‌ ಹೊತ್ತಿಗೇ ಕುಸಿದು, ಅದರ ಮೇಲ್ಭಾಗದ ಯಾವುದೇ ಸ್ಥಳದಲ್ಲಿ ನದಿಯ ಹರಿವಿನ ಮಟ್ಟ ಆರರಿಂದ ಎಂಟು ಇಂಚಿಗಿಂತ ಹೆಚ್ಚು ಇರುವುದಿಲ್ಲ. ಬಾಂಬೆ ಪ್ರಾಂತ್ಯದಲ್ಲೇ ಇರುವ ಗೋಕಾಕ ಜಲಪಾತವನ್ನು ಅದರ ಮಡಿಲಿನಲ್ಲೇ ನಿರ್ಮಾಣಗೊಂಡ ಕೆಲವು ಗಿರಣಿಗಳು ಅದರ ಬಹುತೇಕ ಪಾಲಿನ ನೀರನ್ನು ಬಳಸುವ ಮೂಲಕ ಈಗಾಗಲೇ ನಾಶಗೈದಿವೆ ಎಂಬುದನ್ನು ನಾನಿಗಾಗಲೇ ಕೇಳಲ್ಪಟ್ಟಿದ್ದೇನೆ.’

“ಹಾಗೆಂದು ಕೋಲಾರದ ಚಿನ್ನದ ಗಣಿಗೆ ವಿದ್ಯುತ್‌ ಸರಬರಾಜು ಮಾಡುವ ಕಾವೇರಿಯ ಶಿವನಸಮುದ್ರಕ್ಕೂ ಜೋಗ ಜಲಪಾತಕ್ಕೂ ಹೋಲಿಕೆ ಸಲ್ಲದು. ಏಕೆಂದರೆ, ಸೌಂದರ್ಯದ ದೃಷ್ಟಿಯಿಂದ ಕಾವೇರಿ ಜಲಪಾತ ಗೇರುಸೊಪ್ಪೆಯ ಜಲಪಾತಕ್ಕೆ ಕಿಂಚಿತ್ತೂ ಸಾಟಿಯಾಗಲಾರದು ಮತ್ತು ನೀರಿನ ಪ್ರಮಾಣದ ದೃಷ್ಟಿಯಿಂದ ಕಾವೇರಿಯ ಅಪಾರ ಜಲರಾಶಿಗೆ ಜೋಗ ಸರಿದೂಗದು.

ಇಷ್ಟಾಗಿಯೂ ಅಲ್ಲಿ ಕೂಡ ಬಹಳಷ್ಟು ನೀರನ್ನು ವಿದ್ಯುತ್‌ ಉತ್ಪಾದನೆಗೆ ಬಳಸಿರುವುದರಿಂದ ಜಲಪಾತದ ಚೆಲುವು ನಷ್ಟವಾಗಿಯೇ ಇರುತ್ತದೆ ಎಂಬುದು ನನ್ನ ಖಚಿತ ಅಭಿಪ್ರಾಯ. ಪ್ರಸ್ತುತ ಈ ಯೋಜನೆಯ ವಿಚಾರದಲ್ಲೂ, ದೇಶದ ಅಭಿವೃದ್ಧಿಗೆ ಬೃಹತ್‌ ಕೈಗಾರಿಕೆಗಳ ಸ್ಥಾಪನೆ ಅಗತ್ಯವೆಂಬ ಸ್ಥೂಲ ವಿಚಾರದ ಹೊರತಾಗಿ ಯಾವುದೇ ಸ್ಪಷ್ಟ ಉದೇಶವನ್ನು ನಮಗೆ ಮೈಸೂರು ತಿಳಿಯಪಡಿಸಿಲ್ಲ.

ಪ್ರಸ್ತುತ ಭಾರತ ಸರ್ಕಾರವು ಬಾಂಬೆ ಸರ್ಕಾರ ಮತ್ತು ಮೈಸೂರು ದರ್ಬಾರ್‌ಗಳಿಗೆ ಸ್ಪಷ್ಟಪಡಿಸುವುದೇನೆಂದರೆ, ಈ ಸಂದರ್ಭದಲ್ಲಿ ಎರಡೂ ರಾಜ್ಯಗಳ ಗಡಿ ವಿಚಾರವನ್ನು ಚರ್ಚಿಸುವುದು ಅಸಂಗತ. ಏಕೆಂದರೆ, ಗೇರುಸೊಪ್ಪ ಜಲಪಾತದ ಮೇಲ್ದಂಡೆಯಲ್ಲಿ ಶರಾವತಿ ನದಿಯಿಂದ ನೀರನ್ನು ಬಳಸುವ ಯಾವುದೇ ಯೋಜನೆಗೆ ಭಾರತ ಸರ್ಕಾರವು ಅನುಮತಿಯನ್ನು ನಿರಾಕರಿಸುತ್ತಿದೆ.

ಜಲಪಾತದ ನೀರಿನ ಬಳಕೆಯನ್ನು ನಿರ್ಬಂಧಿ ಸುವ ಕುರಿತು ಮೈಸೂರು ದರ್ಬಾರ್‌ ಅಧ್ಯಾದೇಶವೊಂದನ್ನು ಜಾರಿಗೊಳಿಸುವ ಸ್ಪಂದನೆಯನ್ನು ತೋರಿದ ಪಕ್ಷದಲ್ಲಿ ಭಾರತ ಸರ್ಕಾರವೂ ಸ್ವತ: ಇಂತಹದ್ದೊಂದು ಅಧ್ಯಾದೇಶವನ್ನು ಜಾರಿಗೊಳಿಸಲು ಹಿಂಜರಿಯಲಾರದು’ ಎಂದು ಎಚ್ಚರಿಕೆ ನೀಡಿದ್ದರು.

ಮಾಹಿತಿ: ಗಜಾನನ ಶರ್ಮ,ಲೇಖಕರು.

ಟಾಪ್ ನ್ಯೂಸ್

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.