30,000 ಬೆಲೆಯ ಮಾವಿನ ಹಣ್ಣುಗಳನ್ನು ಕದ್ದ ದಾರಿಹೋಕರು
Team Udayavani, May 22, 2020, 7:21 PM IST
ನವದೆಹಲಿ: ರಸ್ತೆ ಬದಿ ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದ ವ್ಯಾಪಾರಿಯ ಗಾಡಿಯಿಂದ ದಾರಿಹೋಕರು ಸುಮಾರು 30,000 ಬೆಲೆ ಬಾಳುವ ಮಾವಿನ ಹಣ್ಣುಗಳನ್ನು ಕದ್ದುಕೊಂಡು ಹೋಗಿರುವ ಘಟನೆ ದೆಹಲಿಯ ಜಗತ್ಪುರಿ ಪ್ರದೇಶದಲ್ಲಿ ನಡೆದಿದೆ.
ಹಣ್ಣಿನ ಗಾಡಿಯನ್ನು ಬೇರೆಡೆ ಸಾಗಿಸಬೇಕು ಎಂದು ಹತ್ತಿರದ ಶಾಲೆಯ ಸಿಬ್ಬಂದಿ ಮತ್ತು ಇತರರು ವ್ಯಾಪಾರಿ ಛೋಟೆ ಜೊತೆ ತಗಾದೆ ತೆಗೆದ ವೇಳೆ ಅಲ್ಲಿಯ ಜನರು ಪರಿಸ್ಥಿತಿಯ ಲಾಭ ಪಡೆದರು. ವರ್ತಕನ ಗಮನ ಬೇರೆಡೆ ಇದ್ದಿದ್ದರಿಂದ ಕೈಗೆ ಸಿಕ್ಕಷ್ಟು ಹಣ್ಣುಗಳನ್ನ ಕದ್ದುಕೊಂಡು ಹೋದರು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ಗಳಲ್ಲೂ ಹಣ್ಣುಗಳನ್ನು ತುಂಬಿಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಈ ಸಂಬಂಧ ಛೋಟೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು