ಭಾರತದ 14 ಟೆಸ್ಟ್‌ ಸರಣಿ ವಿಜಯಗಳ ಅದ್ಭುತ ಯಾನ


Team Udayavani, Dec 8, 2021, 6:50 AM IST

ಭಾರತದ 14 ಟೆಸ್ಟ್‌ ಸರಣಿ ವಿಜಯಗಳ ಅದ್ಭುತ ಯಾನ

21ನೇ ಶತಮಾನದಲ್ಲಿ ಅಂದರೆ 2000ನೇ ಇಸವಿ ಆರಂಭವಾದ ಅನಂತರ ಭಾರತ ತವರಲ್ಲಿ ಎಷ್ಟು ಸರಣಿ ಸೋತಿರಬಹುದು? ಕೇವಲ ಮೂರು ಬಾರಿ. 2012ರಲ್ಲಿ ಇಂಗ್ಲೆಂಡ್‌ ವಿರುದ್ಧ ಸರಣಿ ಸೋತಿದ್ದೇ ಕೊನೆ. ಅದಾದ ಅನಂತರ ಭಾರತ ಸತತ 14 ಟೆಸ್ಟ್‌ ಸರಣಿಗಳನ್ನು ಗೆದ್ದಿದೆ! ಅಂದರೆ 9 ವರ್ಷಗಳಿಂದ ಭಾರತ ತವರಲ್ಲಿ ಟೆಸ್ಟ್‌ ಸರಣಿಯನ್ನು ಸೋತೇ ಇಲ್ಲ. ಅದರಲ್ಲೂ ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ ವಿದೇಶದಲ್ಲೂ ಸರಣಿ ಗೆಲ್ಲುತ್ತಿದೆ. ಇನ್ನೇನು ಮುಗಿದೇ ಹೋಯಿತು ಎನ್ನುವಂತಹ ಸ್ಥಿತಿಯಲ್ಲೂ ಅತ್ಯದ್ಭುತವಾಗಿ ತಿರುಗಿಬಿದ್ದಿರುವ ಭಾರತೀಯರು ಆಸ್ಟ್ರೇಲಿಯ, ಇಂಗ್ಲೆಂಡ್‌ನ‌ಂತಹ ದೇಶಗಳಲ್ಲಿ ಸರಣಿ ಗೆದ್ದು ಬಂದಿದ್ದಾರೆ.

ಹೀಗಿರುವಾಗ ತವರು ನೆಲದಲ್ಲಿ ಈ ತಂಡವನ್ನು ತಡೆಯಲು ಸಾಧ್ಯವಾದೀತೆ? ಸದ್ಯದ ಅಂಕಿಅಂಶಗಳು ಅದನ್ನು ಸಾಬೀತು ಮಾಡಿವೆ. ಸೋಮವಾರ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ ಸಾಧಿಸಿದ ಟೆಸ್ಟ್‌ ಸರಣಿ ಜಯ ಹಲವು ಕಾರಣಗಳಿಗೆ ಚಾರಿತ್ರಿಕ. ಇವೆಲ್ಲ ಶುರುವಾಗಿದ್ದು 2013ರಲ್ಲಿ. ಆಗ ಧೋನಿ ನಾಯಕತ್ವದ ಭಾರತ ಆಸ್ಟ್ರೇಲಿಯವನ್ನು 4-0 ಸೋಲಿಸಿತು. ಮುಂದೆ ವೆಸ್ಟ್‌ ಇಂಡೀಸ್‌ ವಿರುದ್ಧ 2-0ಯಿಂದ, ದ.ಆಫ್ರಿಕಾ ವಿರುದ್ಧ 3-0ಯಿಂದ, ನ್ಯೂಜಿಲೆಂಡ್‌ ವಿರುದ್ಧ 3-0ಯಿಂದ, ಇಂಗ್ಲೆಂಡ್‌ ವಿರುದ್ಧ 4-0ಯಿಂದ, ಬಾಂಗ್ಲಾ ವಿರುದ್ಧ 1-0ಯಿಂದ, ಆಸ್ಟ್ರೇಲಿಯ ವಿರುದ್ಧ 2-1ರಿಂದ, ಶ್ರೀಲಂಕಾ ವಿರುದ್ಧ 1-0ಯಿಂದ, ಅಫ್ಘಾನಿಸ್ಥಾನದ ವಿರುದ್ಧ 1-0ಯಿಂದ, ವೆಸ್ಟ್‌ ಇಂಡೀಸ್‌ ವಿರುದ್ಧ 2-0ಯಿಂದ, ದ.ಆಫ್ರಿಕಾ ವಿರುದ್ಧ 3-0ಯಿಂದ, ಬಾಂಗ್ಲಾ ವಿರುದ್ಧ 2-0ಯಿಂದ, ಇಂಗ್ಲೆಂಡ್‌ ವಿರುದ್ಧ 3-1ರಿಂದ, ನ್ಯೂಜಿಲೆಂಡ್‌ ವಿರುದ್ಧ 1-0ಯಿಂದ ಗೆಲುವು ಸಾಧಿಸಿದೆ.

ಈ ಇಷ್ಟೂ ಗೆಲುವುಗಳಲ್ಲಿ ಎರಡು ಸರಣಿ ಧೋನಿ ನಾಯಕತ್ವದಲ್ಲಿ, ಉಳಿದೆಲ್ಲ ಸರಣಿಗಳು ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ದಕ್ಕಿವೆ!

ಇದನ್ನೂ ಓದಿ:ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಇದು ಕೊಹ್ಲಿ ನಾಯಕತ್ವದ ಸಾಮರ್ಥ್ಯಕ್ಕೂ ಒಂದು ಹೆಗ್ಗಳಿಕೆ. ಇದುವರೆಗೆ ಎಲ್ಲ ಮಾದರಿಗಳಲ್ಲೂ ತಲಾ 50 ಗೆಲುವುಗಳನ್ನು ಕಾಣುವ ಮೂಲಕ ತಾವೊಬ್ಬರು ಯಶಸ್ವಿ ನಾಯಕ ಎಂಬು ದನ್ನೂ ಕೊಹ್ಲಿ ನಿರೂಪಿಸಿದ್ದಾರೆ. ಹಾಗೆಯೇ ಭಾರತ ತಂಡ ತವರಲ್ಲಿ ಎಷ್ಟು ಬಲಿಷ್ಠ ಅಭೇದ್ಯ ಎನ್ನುವುದಕ್ಕೂ ಮಾನದಂಡ. ವಿಶೇಷವೆಂದರೆ ತವರಲ್ಲಿ ಸತತವಾಗಿ ಟೆಸ್ಟ್‌ ಸರಣಿ ಗೆದ್ದ ತಂಡಗಳ ಲೆಕ್ಕಾಚಾರದಲ್ಲಿ ಭಾರತ ಬಹಳ ಮುಂದಿದೆ. ಅಗ್ರಸ್ಥಾನದಲ್ಲಿರುವ ಭಾರತ 2013 ಫೆಬ್ರವರಿಯಿಂದ ಇಲ್ಲಿಯವರೆಗೆ ಸತತ 14 ಸರಣಿಗಳನ್ನು ಗೆದ್ದಿದೆ. ದ್ವಿತೀಯ ಸ್ಥಾನಿ ಆಸ್ಟ್ರೇಲಿಯ 1994 ನವೆಂಬರ್‌ನಿಂದ 2000ನೇ ವರ್ಷ ನವೆಂಬರ್‌ವರೆಗೆ ಸತತವಾಗಿ 10 ಸರಣಿಗಳನ್ನು ಗೆದ್ದಿತ್ತು.

ಭಾರತದ ಈ ಸರಣಿ ಜಯ ಕೇವಲ ತವರಲ್ಲಿ ಮಾತ್ರ ಸಾಧ್ಯವಾಗಿದ್ದು ಎಂದು ತಿರಸ್ಕರಿಸುವವರಿಗೆ ಇಲ್ಲಿ ಮುಂದಿನ ಮಾತುಕತೆಗೆ ಆಸ್ಪದವೇ ಇಲ್ಲ. ಕಾರಣ ಬಲಿಷ್ಠ ಆಸ್ಟ್ರೇಲಿಯ, ಇಂಗ್ಲೆಂಡ್‌ನ‌ಂತಹ ಘಟಾನುಘಟಿ ರಾಷ್ಟ್ರಗಳನ್ನೇ ಭಾರತ ಅವುಗಳ ನಾಡಿನಲ್ಲೇ ನಿರ್ಣಾಯಕವಾಗಿ ಸೋಲಿಸಿದೆ. ಭಾರತ ಯಾವುದೇ ದೇಶಕ್ಕೆ ಹೋದರೂ ಆತಿಥೇಯ ತಂಡಗಳೇ ಭಾರತವನ್ನು ಸೋಲಿಸುವುದನ್ನು ದೊಡ್ಡ ಸಾಧನೆಯನ್ನಾಗಿ ಪರಿಗಣಿಸುತ್ತಿವೆ! ಟೆಸ್ಟ್‌ ತಂಡವಾಗಿ ಭಾರತ ಅಷ್ಟು ಅದ್ಭುತ ಪ್ರಗತಿ ಸಾಧಿಸಿದೆ. ಇದೇ ವರ್ಷ ಇಂಗ್ಲೆಂಡ್‌ನ‌ಲ್ಲಿ ನಡೆದ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ಸೋತಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಆ ಸರಣಿಗೂ ಮುನ್ನ ಭಾರತಕ್ಕೆ ಪೂರ್ವಭಾವಿ ಅಭ್ಯಾಸಕ್ಕೆ ಅವಕಾಶ ಸಿಕ್ಕಿರಲಿಲ್ಲ. ಕ್ರಿಕೆಟ್‌ನಲ್ಲಿ ಇರುವ ಭಾರತದ ಈ ಶಕ್ತಿ ಉಳಿದ ಕ್ರೀಡೆಗಳಲ್ಲೂ ವ್ಯಕ್ತವಾಗಲಿ ಎನ್ನುವುದು ಎಲ್ಲರ ಆಶಯ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

ವಿಶ್ವ ದಿಗ್ಗಜ ರಾಷ್ಟ್ರಗಳ ಅಪ್ರಬುದ್ಧ ರಾಜತಾಂತ್ರಿಕತೆ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Wild Elephant ದಾಳಿ ಸಮಸ್ಯೆ: ವೈಜ್ಞಾನಿಕ ಪರಿಹಾರ ಅಗತ್ಯ

Terror 2

Terrorism ನಿಗ್ರಹ ಎಲ್ಲ ದೇಶಗಳ ಧ್ಯೇಯವಾಗಲಿ

1-aww

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಸರಕಾರ ತುರ್ತು ಗಮನ ನೀಡಲಿ

14-editorial

Campaigns: ಪ್ರಚಾರದಲ್ಲಿ ದ್ವೇಷ ಭಾಷಣ: ಸ್ವಯಂ ನಿಯಂತ್ರಣ ಅಗತ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.