ಗೊತ್ತಿಲ್ಲದೆಯೇ ತೊಳೆದು ಶುಭ್ರವಾಗುವ ಮನಸ್ಸು


Team Udayavani, Apr 26, 2021, 5:00 AM IST

ಗೊತ್ತಿಲ್ಲದೆಯೇ ತೊಳೆದು ಶುಭ್ರವಾಗುವ ಮನಸ್ಸು

ಮನಸ್ಸಿನಲ್ಲಿ ಸದಾ ಒಳ್ಳೆಯ ಆಲೋಚನೆಗಳು, ನಾಲಗೆಯ ಮೇಲೆ ಸರ್ವಥಾ ಒಳ್ಳೆಯ ನುಡಿಗಳು ಇರಬೇಕು ಎಂಬುದು ನಮ್ಮ ಹಿರಿಯರ ಮಾತು. ಸಕಾರಾತ್ಮಕ ಯೋಚನೆಗಳಿಂದ ನಮ್ಮ ಸುತ್ತ ಧನಾತ್ಮಕ ವಲಯವೊಂದು ನಿರ್ಮಾಣವಾಗುತ್ತದೆ ಎನ್ನುತ್ತಾರೆ. ಹಾಗೆಯೇ ಒಳ್ಳೆಯ ಮಾತುಗಳು ಕೂಡ ಒಳ್ಳೆಯದನ್ನೇ ಮಾಡುತ್ತವೆ. ಸದಾ ಸಿಡುಕುತ್ತ, ಕೇಡನ್ನು ಆಲೋಚಿಸುತ್ತ ಇದ್ದರೆ ಋಣಾತ್ಮಕ ಪರಿಸರ ಸೃಷ್ಟಿಯಾಗುತ್ತದೆ. ಬೆಳಗ್ಗೆ ಎದ್ದ ಕೂಡಲೇ, ಕಚೇರಿಯ ಒಳಹೊಕ್ಕ ಕೂಡಲೇ, ಕೆಲಸ ವೊಂದನ್ನು ಆರಂಭಿಸು ವುದಕ್ಕೆ ಮುನ್ನ ದೇವರನ್ನು ನೆನೆಯುವುದು, ಒಳಿತಾ ಗುತ್ತದೆ ಎಂಬ ಆಲೋ ಚನೆ ಮಾತ್ರದಿಂದಲೇ ಉಂಟಾಗುವ ಪರಿ ಣಾಮ ವಿಭಿನ್ನವಾಗಿ ರುತ್ತದೆ. ದೇವರು ಒಳ್ಳೆಯದು ಮಾಡು ತ್ತಾನೆಯೋ ಇಲ್ಲವೋ; ಕೆಲಸದಲ್ಲಿ ಜಯವೇ ಆಗುತ್ತದೆಯೋ ಇಲ್ಲವೋ ಎಂಬುದನ್ನು ಬದಿಗಿಡಿ. ಆದರೆ ಮಾಡುವ ಕೆಲಸವನ್ನು ಪೂರ್ಣ ಸಾಮರ್ಥ್ಯದೊಂದಿಗೆ, ಒಳ್ಳೆಯದೇ ಆಗುತ್ತದೆ ಎಂಬ ವಿಶ್ವಾಸದೊಂದಿಗೆ ಮಾಡಲು ನಮಗೆ ಸಾಧ್ಯವಾಗುತ್ತದೆ ಯಲ್ಲ! ಇಷ್ಟು ಮಾತ್ರದಿಂದಲೇ ಅಪೂರ್ವ ಪರಿವರ್ತನೆ ಸಾಧ್ಯ.
ಹೀಗೊಂದು ಕಥೆ.

ಒಂದು ಕಾಲದಲ್ಲಿ ಒಬ್ಬ ವೃದ್ಧ ರೈತ ಇದ್ದ. ಅವನ ಪುಟಾಣಿ ಮೊಮ್ಮಗ ಎಲ್ಲ ಕೆಲಸಗಳಲ್ಲೂ ಅಜ್ಜನಿಗೆ ಸಂಗಾತಿ.
ಪ್ರತೀ ದಿನ ಬೆಳ್ಳಂಬೆಳಗ್ಗೆ ಎದ್ದು ನಿತ್ಯವಿಧಿಗಳನ್ನು ಪೂರೈಸಿ ಸ್ನಾನ ಮಾಡಿ ಭಗವದ್ಗೀತೆಯನ್ನು ಪಠಿಸುವುದು ವೃದ್ಧನ ರೂಢಿ. ಅಜ್ಜ ಎದ್ದ ಸ್ವಲ್ಪ ಹೊತ್ತಿನಲ್ಲಿಯೇ ಮೊಮ್ಮಗನೂ ಹಾಸಿಗೆ ಬಿಟ್ಟೇಳುತ್ತಿದ್ದ. ಅಜ್ಜನನ್ನು ಅನುಸರಿಸುತ್ತಿದ್ದ. ತಾನೂ ಅಜ್ಜನ ಹಾಗೆ ಆಗಬೇಕು ಎಂಬುದು ಮೊಮ್ಮಗನ ಹಂಬಲ. ಅಜ್ಜನ ಪಾರಾಯಣ ಮುಗಿದ ಬಳಿಕ ಗೀತೆಯನ್ನು ತಾನೂ ಕೈಗೆತ್ತಿಕೊಂಡು ಓದಲು ಪ್ರಯತ್ನಿಸುತ್ತಿದ್ದ.

ಒಂದು ದಿನ ಅಜ್ಜ ಬಚ್ಚಲು ಒಲೆಗೆ ಬೆಂಕಿ ಹಾಕುತ್ತಿದ್ದಾಗ ಮೊಮ್ಮಗ ಅಲ್ಲಿಗೆ ಬಂದು ಕೇಳಿದ, “ಅಜ್ಜಾ, ನಾನು ಕೂಡ ನಿಮ್ಮ ಹಾಗೆ ಭಗವದ್ಗೀತೆ ಓದಬೇಕು ಎಂದು ಆಶೆ. ಓದಲು ಪ್ರಯತ್ನಿಸುತ್ತೇನೆ ಕೂಡ. ಆದರೆ ನನಗೇನೂ ಅರ್ಥವಾಗು ವುದಿಲ್ಲ. ಅಲ್ಲದೆ ಇವತ್ತು ಓದಿದ್ದು ನಾಳೆಗೆ ಮರೆತು ಹೋಗುತ್ತದೆ. ಹಾಗಾದರೆ ಇಷ್ಟರ ತನಕ ಓದಿದ್ದು ನಿಷ#ಲವೇ?’

ಅಜ್ಜ ಏನೂ ಹೇಳಲಿಲ್ಲ. ಬದಲಿಗೆ ತಾನು ಇದ್ದಿಲುಗಳನ್ನು ತುಂಬಿಸಿ ಇರಿಸಿದ್ದ ಬೆತ್ತದ ಸಣ್ಣ ಬುಟ್ಟಿಯನ್ನು ಮೊಮ್ಮಗನ ಕೈಗೆ ಕೊಟ್ಟ ಮತ್ತು ಹತ್ತಿರವೇ ಇರುವ ತೊರೆ ಯಿಂದ ನೀರು ತುಂಬಿ ತರುವಂತೆ ಹೇಳಿದ.

ಮೊಮ್ಮಗ ಅಜ್ಜ ಹೇಳಿ ದಂತೆಯೇ ತೊರೆಯತ್ತ ಹೋಗಿ ಬುಟ್ಟಿಯಲ್ಲಿ ನೀರು ತುಂಬಿಕೊಂಡು ಬಂದ. ಆದರೆ ಮನೆಯ ಹತ್ತಿರ ಬರುವಷ್ಟರಲ್ಲಿ ನೀರೆಲ್ಲ ಸೋರಿಹೋಯಿತು. ಇನ್ನೊಮ್ಮೆ ಪ್ರಯತ್ನಿಸಿದ. ಆಗಲೂ ಆಗಲಿಲ್ಲ.
ಮನೆಗೆ ಬಂದು “ಇಲ್ಲ ಅಜ್ಜಾ ನೀರು ಸೋರಿ ಹೋಯಿತು’ ಎಂದು ಹೇಳಿದ.
“ಪ್ರಾಯಃ ವೇಗವಾಗಿ ಓಡಿ ಬಂದರೆ ಸಾಧ್ಯವಾಗಬಹುದು’ ಎಂದ ಅಜ್ಜ.
ಹುಡುಗ ನೀರು ತುಂಬಿಸಿಕೊಂಡು ಓಡೋಡಿ ಬಂದ. ಆದರೂ ನೀರು ಸೋರಿ ಹೋಯಿತು. ಎರಡೂ¾ರು ಬಾರಿ ಪ್ರಯತ್ನಿಸಿದರೂ ಆಗಲಿಲ್ಲ.

“ಇಲ್ಲ, ಇದು ಸಾಧ್ಯವೇ ಇಲ್ಲ. ಈ ಪ್ರಯತ್ನ ನಿರರ್ಥಕ’ ಎಂದು ಮೊಮ್ಮಗ ಅಜ್ಜನಿಗೆ ವಿವರಿಸಿದ.
“ನಿನ್ನ ಕೆಲಸ ಅರ್ಥವಿಲ್ಲದ್ದು ಎನ್ನುತ್ತೀಯಾ? ಬುಟ್ಟಿಯನ್ನೊಮ್ಮೆ ಗಮನವಿಟ್ಟು ನೋಡು’ ಎಂದ ಅಜ್ಜ.
ನಿಜ! ಇದ್ದಿಲು ತುಂಬಿ ಮಸಿ ಮೆತ್ತಿ ಕೊಂಡಿದ್ದ ಬುಟ್ಟಿ ನೀರು ತರುವ ಪ್ರಯತ್ನದಲ್ಲಿ ತೊರೆಯಲ್ಲಿ ಮುಳುಗಿಸಿ ಮುಳುಗಿಸಿ ಸ್ವತ್ಛವಾಗಿತ್ತು.

“ಗೊತ್ತಿಧ್ದೋ ಗೊತ್ತಿಲ್ಲದೆಯೋ; ಅರ್ಥವಾಗಿಯೋ ಅರ್ಥವಾಗದೆಯೋ ನೀನು ದಿನವೂ ಗೀತೆಯನ್ನು ಅಷ್ಟಿಷ್ಟು ಓದುವುದರಿಂದ ಮನಸ್ಸು ಈ ಬುಟ್ಟಿ ಯಂತೆ ಸ್ವತ್ಛವಾಗುತ್ತದೆ, ಶುಭ್ರವಾಗು ತ್ತದೆ’ ಎಂದ ಅಜ್ಜ.
ಸಕಾರಾತ್ಮಕ ಆಲೋಚನೆಗಳು, ಮಾತು, ನಡತೆಯ ಪರಿಣಾಮವೂ ಹೀಗೆಯೇ.

( ಸಾರ ಸಂಗ್ರಹ)

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.