ಬರ್ಮುಡಾ ಟ್ರಯಾಂಗಲ್ ರಹಸ್ಯ ಬಯಲು?
ನಿಗೂಢ ಪ್ರದೇಶ ಕುರಿತು ಆಸ್ಟ್ರೇಲಿಯಾದ ವಿಜ್ಞಾನಿಯ ವಾದವೇನು?
Team Udayavani, May 9, 2022, 5:55 AM IST
ಸಿಡ್ನಿ: ಬರ್ಮುಡಾ ಟ್ರಯಾಂಗಲ್… ಈ ಹೆಸರು ಕೇಳಿದೊಡನೆ ವಿಜ್ಞಾನಿಗಳು ತಲೆಕೆರೆದುಕೊಳ್ಳಲು ಆರಂಭಿಸುತ್ತಾರೆ, ನೌಕಾಯಾನಿಗಳಿಗೆ ಕುಳಿತಲ್ಲೇ ನಡುಕ ಶುರುವಾಗುತ್ತದೆ.
ಅಟ್ಲಾಂಟಿಕ್ ಸಮುದ್ರದ ತ್ರಿಕೋನಾಕೃತಿಯ ಈ ಪ್ರದೇಶದಲ್ಲಿ ದಶಕಗಳಿಂದಲೂ ಹಲವಾರು ಹಡಗು ಗಳು, ಅನೇಕ ವಿಮಾನಗಳು ನಿಗೂಢವಾಗಿ ಕಣ್ಮರೆಯಾಗಿವೆ. ಇದಕ್ಕೆ ಕಾರಣವೇನು ಎಂಬುದನ್ನು ಇದುವರೆಗೂ ಯಾರಿಗೂ ಕಂಡುಹಿಡಿಯಲು ಆಗಿಲ್ಲ. ಹೀಗಾಗಿಯೇ 5 ಲಕ್ಷ ಚದರ ಮೈಲುಗಳ ಈ ಪ್ರದೇಶವನ್ನು “ಡೆವಿಲ್ಸ್ ಟ್ರಯಾಂಗಲ್’ ಎಂದೂ ಕರೆಯುತ್ತಾರೆ.
ಆದರೆ ಈಗ ಆಸ್ಟ್ರೇಲಿಯಾದ ವಿಜ್ಞಾನಿಯೊಬ್ಬರು ಈ ಬರ್ಮುಡಾ ಟ್ರಯಾಂಗಲ್ನ ರಹಸ್ಯವನ್ನು ಭೇದಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಕಾರ್ಲ್ ವಾದವೇನು?: ಸಿಡ್ನಿ ವಿಶ್ವವಿದ್ಯಾನಿಲಯದ ವಿಜ್ಞಾನಿ ಕಾರ್ಲ್ ಕ್ರುಸೆಲ್ನಿಕಿ ಅವರೇ ಈ ರಹಸ್ಯ ಭೇದಿಸಿರುವುದಾಗಿ ಹೇಳಿಕೊಂಡವರು. ಅವರ ಪ್ರಕಾರ, ಬರ್ಮುಡಾ ಟ್ರಯಾಂಗಲ್ನಲ್ಲಿ ನೌಕೆಗಳು, ವಿಮಾನಗಳು ಮಾಯವಾಗಲು ಯಾವುದೇ ಅಗೋಚರ ಶಕ್ತಿ ಕಾರಣವಲ್ಲ. ಪ್ರತಿಕೂಲ ಹವಾಮಾನ ಮತ್ತು ಮಾನವನ ಎಡವಟ್ಟುಗಳಿಂದಾಗಿಯೇ ದುರ್ಘಟನೆಗಳು ಸಂಭವಿ ಸಿವೆ ಎನ್ನುವುದು ಅವರ ವಾದ. ಶೇಕಡಾವಾರು ಲೆಕ್ಕಾ ಚಾರದಲ್ಲಿ ನೋಡುವುದಾದರೆ, ಜಗತ್ತಿನಾದ್ಯಂತ ಸಮು ದ್ರದ ಇತರ ಪ್ರದೇಶಗಳಲ್ಲಿ ದಾಖಲಾದ ನಾಪತ್ತೆ ಘಟನೆ ಗಳಷ್ಟೇ ಪ್ರಕರಣಗಳು ಬರ್ಮುಡಾ ಟ್ರಯಾಂಗ ಲ್ನಲ್ಲಿ ದಾಖಲಾಗಿವೆ. ಅದರಲ್ಲಿ ವಿಶೇಷವೇನೂ ಇಲ್ಲ.
ಕಾರ್ಲ್ ಪ್ರಕಾರ ಅಂದು ಆಗಿದ್ದೇನು?
1945ರ ಡಿ.5ರಂದು ಫ್ಲೋರಿಡಾದಿಂದ ಅಮೆರಿಕ ನೌಕಾಪಡೆಯ 5 ವಿಮಾನಗಳು ಒಟ್ಟಿಗೇ ಟೇಕ್ ಆಫ್ ಆಗಿದ್ದವು. ಬರ್ಮುಡಾ ಟ್ರಯಾಂಗಲ್ ಸಮೀಪಕ್ಕೆ ಬರುತ್ತಿದ್ದಂತೆ, ಸಂಪರ್ಕ ಕಡಿದುಕೊಂಡ ಈ ಎಲ್ಲ 5 ವಿಮಾನಗಳೂ ನಾಪತ್ತೆಯಾಗಿದ್ದವು. ಅವುಗಳ ಅವಶೇಷಗಳಾಗಲೀ, ಮೃತದೇಹಗ ಳಾಗಲೀ ಇಂದಿಗೂ ಪತ್ತೆಯಾಗಿಲ್ಲ. ಶೋಧಕ್ಕೆಂದು ತೆರಳಿದ್ದ ವಿಮಾನವೂ ಅದೇ ರಾತ್ರಿ ಕಣ್ಮರೆಯಾಗಿತ್ತು. ಈ ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಕಾರ್ಲ್ ಕ್ರುಸೆಲ್ನಿಕಿ, “ಆ ಘಟನೆ ನಡೆದ ದಿನ ಅಟ್ಲಾಂಟಿಕ್ನಲ್ಲಿ 15 ಮೀಟರ್ ಎತ್ತರದ ಅಲೆಗಳು ಎದ್ದಿದ್ದವು. ಹವಾಮಾನ ಪ್ರತಿಕೂಲವಾಗಿದ್ದ ಕಾರಣ ವಿಮಾನ ಗಳು ಪತನಗೊಂಡವು’ ಎಂದಿದ್ದಾರೆ. ಇನ್ನು, ಶೋಧ ಕಾರ್ಯಕ್ಕೆಂದು ಹೋಗಿದ್ದ ವಿಮಾನದ ಐವರು ಪೈಲಟ್ಗಳ ಪೈಕಿ ಲೆ. ಚಾರ್ಲ್ಸ್ ಟೈಲರ್ವೊಬ್ಬರೇ ಅನುಭವಿ ಪೈಲಟ್ ಆಗಿದ್ದರು.
ಹ್ಯಾಂಗೋವರ್ನಲ್ಲಿದ್ದ ಅವರು ಆ ದಿನ ವಿಮಾನ ಚಲಾಯಿಸುವ ವೇಳೆ ಮಾಡಿದ ಎಡವಟ್ಟಿನಿಂದ ಆ ವಿಮಾನವೂ ಪತನಗೊಂಡಿತು. ಸಮುದ್ರದ ಈ ಭಾಗ (ಟ್ರಯಾಂಗಲ್) ಬಹಳಷ್ಟು ಆಳವಿರುವ ಕಾರಣ ಇಲ್ಲಿ ನೌಕೆ ಮುಳುಗಿದರೂ, ವಿಮಾನಗಳು ಪತನಗೊಂಡರೂ ಅವಶೇಷಗಳು ಸಿಗುವುದಿಲ್ಲ ಅಷ್ಟೆ. ಇದಲ್ಲದೇ ಬೇರೆ ಯಾವ ಅತೀಂದ್ರೀಯ ಶಕ್ತಿಯೂ ಇದರ ಹಿಂದಿಲ್ಲ ಎಂದಿದ್ದಾರೆ ಕಾರ್ಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ