ಅಂಜನಾದ್ರಿ ಬೆಟ್ಟಕ್ಕೆ ನಟ ಧ್ರುವ ಸರ್ಜಾ ಭೇಟಿ
Team Udayavani, Sep 24, 2019, 6:29 PM IST
ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಖ್ಯಾತ ಯುವ ನಟ ಧ್ರುವಸರ್ಜಾ ಮಂಗಳವಾರ ಭೇಟಿ ನೀಡಿ ಶ್ರೀ ಆಂಜನೇಯ ಸ್ವಾಮಿ ದರ್ಶನ ಪಡೆದರು.
ಕಳೆದ 15 ದಿನಗಳಿಂದ ಧ್ರುವಸರ್ಜಾ ಅವರು ಹನುಮದೀಕ್ಷೆ ಪಡೆದು ಮಂಗಳವಾರ ಅಂಜನಾದ್ರಿ ಗೆ ಭೇಟಿ ನೀಡಿ ಪೂಜೆ ಮಾಡಿಸುವ ಮೂಲಕ ದೀಕ್ಷೆ ತೊರೆದು ದೇಗುಲ ಅನ್ನಸಂತರ್ಪಣೆ ಕೋಣೆಯಲ್ಲಿ ಪ್ರಸಾದ ಸೇವನೆ ಮಾಡಿದರು.
20 ವರ್ಷಗಳ ಹಿಂದೆ ಧ್ರುವಸರ್ಜಾ ಸಹೋದರ ಮಾವ ಅರ್ಜುನ್ ಸರ್ಜಾ ಹಾಗೂ ತೆಲುಗು ನಟ ನಿತಿನ್ ಜತೆಗೂಡಿ ಶ್ರೀ ಆಂಜನೇಯಂ ತೆಲುಗು ಸಿನೆಮಾ ಶೂಟಿಂಗ್ ಇಲ್ಲೆ ನಡೆದಿತ್ತು ಸಿನೆಮಾ ತೆಲುಗು ತಮಿಳು ಭಾಷೆಯಲ್ಲಿ 100ದಿನ ಪ್ರದರ್ಶನ ಕಂಡಿತ್ತು. ಪ್ರತಿ ವರ್ಷ ಅರ್ಜುನ್ ಸರ್ಜಾ ಇಲ್ಲಿ ಆಗಮಿಸಿ ವಿಶೇಷ ಪೂಜೆ ನಡೆಸುತ್ತಿದ್ದರು. ಇತ್ತಿಚಿನ ವರ್ಷಗಳಲ್ಲಿ ಅವರು ಬಂದಿರಲಿಲ್ಲ. ಧ್ರುವಸರ್ಜಾ ಅವರು ಅಪಾರ ಅಭಿಮಾನಿಗಳ ಬಳಗ ಹೊಂದಿದ್ದು ಅವರು ಆಂಜನೇಯ ನ ಪರಮ ಭಕ್ತರಾಗಿದ್ದಾರೆ. ಭಜರಂಗಿ ಎನ್ನುವ ಹೆಸರಿನಲ್ಲಿ ಸಿನೆಮಾದಲ್ಲಿ ಪಾತ್ರವನ್ನು ಸಹ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…