ನೆರೆ ಸಂತ್ರಸ್ತರ ನೆರವಿಗೆ ಧಾವಿಸೋಣ : ನಟ ಪುನೀತ್ ಕರೆ
Team Udayavani, Aug 9, 2019, 2:09 PM IST
ಬೆಂಗಳೂರು: ಉತ್ತರ ಕರ್ನಾಟಕವನ್ನು ತತ್ತರಗೊಳಿಸಿರುವ ಮಹಾ ಪ್ರವಾಹದಿಂದ ತೊಂದರೆಗೊಳಗಾಗಿರುವ ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಟ್ವಿಟ್ಟರ್ ಮೂಲಕ ವಿನಂತಿ ಮಾಡಿಕೊಂಡಿದ್ದಾರೆ.
ಪುನೀತ್ ಅವರು ತಮ್ಮ ಸಂಸ್ಥೆಯ ಮೂಲಕ ನೆರೆ ಪೀಡಿತರಿಗೆ ಅಗತ್ಯ ನೆರವನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ ಮತ್ತು ಸಂತ್ರಸ್ತರಿಗೆ ಅಗತ್ಯವಿರುವ ಸಹಾಯವನ್ನು ಸಂಘ-ಸಂಸ್ಥೆಗಳ ನೆರವಿನಿಂದ ಒದಗಿಸುವಂತೆ ಪುನೀತ್ ಅವರು ತಮ್ಮ ಅಭಿಮಾನಿಗಳಲ್ಲಿ ಹಾಗೂ ಕರ್ನಾಟಕದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈಗಾಗಲೇ ಚಿತ್ರರಂಗದ ಹಲವಾರು ನಟರು ಪ್ರವಾಹ ಸಂತ್ರಸ್ತರ ನೆರವಿಗೆ ಕೈಜೋಡಿಸಿದ್ದಾರೆ. ಮತ್ತು ಪ್ರವಾಹ ಸಂಬಂಧಿ ಪರಿಹಾರ ಕಾರ್ಯಗಳಲ್ಲಿ ಕೈಜೋಡಿಸುವಂತೆ ಶಿವರಾಜ್ ಕುಮಾರ್, ಉಪೇಂದ್ರ, ಸುದೀಪ್, ಗಣೇಶ್, ದರ್ಶನ್ ಸೇರಿದಂತೆ ಇನ್ನೂ ಹಲವಾರು ನಟರು ತಮ್ಮ ತಮ್ಮ ಅಭಿಮಾನಿಗಳಲ್ಲಿ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯಾಧ್ಯಂತ ಪ್ರಮುಖವಾಗಿ ಉತ್ತರಕರ್ನಾಟಕದ ಪ್ರವಾಹಕ್ಕೆ ನಾವೆಲ್ಲರೂ ನಮ್ಮ ಶಕ್ತಿಮೀರಿ ಸಹಾಯಮಾಡಬೇಕೆಂದು ನಾನು ಕೋರಿಕೊಳ್ಳುತ್ತೇನೆ….. ವರುಣನ ಆರ್ಭಟ ನಿಲ್ಲಲೆಂದು ಪ್ರಾರ್ಥಿಸೋಣ…. #KarnatakaFloods pic.twitter.com/s11hG7iWq2
— Puneeth Rajkumar (@PuneethRajkumar) August 9, 2019