ಜೋಡೆತ್ತಿನ ಸಾವು : 4,000 ಮಂದಿಗೆ ಸಂತರ್ಪಣೆ ಹಾಕಿ ಗೌರವ ಕೊಟ್ಟ ರೈತ
ಧಾರ್ಮಿಕ ವಿಧಿವಿಧಾನಗಳಿಗೆ 2 ಲಕ್ಷ ರೂ. ಖರ್ಚು
Team Udayavani, Feb 2, 2022, 7:10 PM IST
ಸಾಂದರ್ಭಿಕ ಚಿತ್ರ ಮಾತ್ರ
ಶಾಜಾಪುರ : ಇತ್ತೀಚೆಗೆ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ರೈತರೊಬ್ಬರು ತಮ್ಮ ಎತ್ತುಗಳು ಸಾವನ್ನಪ್ಪಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಿ ಸುಮಾರು 4,000 ಮಂದಿಗೆ ಸಂತರ್ಪಣೆ ನೀಡಿ ತಮ್ಮ ಬಹುಕಾಲದ ಒಡನಾಡಿಗಳಿಗೆ ಭಾವುಕ ವಿದಾಯ ಹೇಳಿದ್ದಾರೆ.
ಮದನ ಗ್ರಾಮದಲ್ಲಿ ಮಂಗಳವಾರ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಎತ್ತುಗಳ ಮರಣಾನಂತರದ ಧಾರ್ಮಿಕ ವಿಧಿವಿಧಾನಗಳಿಗೆ ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ ಎಂದು ರೈತ ಜಗದೀಶ್ ಸಿಂಗ್ ಸಿಸೋಡಿಯಾ ಹೇಳಿದ್ದಾರೆ.
ನಾನು ಕೇವಲ 12 ವರ್ಷದವನಿದ್ದಾಗ `ರಾಮ್’ ಮತ್ತು `ಶ್ಯಾಮ್’ ಎಂಬ ಜೋಡೆತ್ತುಗಳನ್ನು ತರಲಾಗಿತ್ತು ಎಂದು ಅವರು ಹೇಳಿದರು.
ರಾಮ್ ಸುಮಾರು ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಶ್ಯಾಮ್ ಹದಿನೈದು ದಿನಗಳ ಹಿಂದೆ ಕೊನೆಯುಸಿರೆಳೆದಿದ್ದಾನೆ. ಅವರಿಬ್ಬರು ನನಗೆ ಮಕ್ಕಳಿದ್ದಂತೆ ಎಂದು ಅವರು ಹೇಳಿದರು.
ಸಿಸೋಡಿಯಾ ಅವರು ಉಜ್ಜಯಿನಿಗೆ ಭೇಟಿ ನೀಡುವ ಮೂಲಕ ಶ್ಯಾಮ್ ಅವರ ಮರಣದ ನಂತರ ಆಚರಣೆಗಳನ್ನು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು