ಅದಮಾರು ಪರ್ಯಾಯ ವೈಭವದ ಹೊರೆಕಾಣಿಕೆ ಮೆರವಣಿಗೆ
Team Udayavani, Jan 16, 2020, 12:58 AM IST
ಉಡುಪಿ: ಅದಮಾರು ಶ್ರೀಗಳ ಪರ್ಯಾಯ ಮಹೋತ್ಸವಕ್ಕೆ ದಿನ ಬಾಕಿ ಇರುವಂತೆಯೇ ಬುಧವಾರ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಜೋಡು ಕಟ್ಟೆಯಿಂದ ರಥಬೀದಿ ತನಕ ವೈಭವದ ಹಸುರುವಾಣಿ ಮೆರವಣಿಗೆ ಸಾಗಿ ಬಂತು.
ಅದಮಾರು, ಮಲ್ಪೆ, ಮಟ್ಟು ಭಾಗ ದಿಂದ ಸಾಲುಗಟ್ಟಿದ ವಾಹನಗಳಲ್ಲಿ ಅಕ್ಕಿ, ಬೆಲ್ಲ, ತೆಂಗಿನಕಾಯಿ, ಮಟ್ಟುಗುಳ್ಳ, ಸೀಯಾಳ,ಎಣ್ಣೆ ಸಮರ್ಪಿಸಲ್ಪಟ್ಟಿತು. ಜೋಡುಕಟ್ಟೆ ಯಿಂದ ಹೊರಟ ಮೆರವಣಿಗೆ ಕೋರ್ಟ್ ರಸ್ತೆ, ಕೆ.ಎಂ. ಮಾರ್ಗ, ಸಂಸ್ಕೃತ ಕಾಲೇಜು ಮೂಲಕ ರಥಬೀದಿ ತಲುಪಿತು. ಪಾರ್ಕಿಂಗ್ ಪಕ್ಕದ ಉಗ್ರಾಣದಲ್ಲಿ ಸಾಮಗ್ರಿಗಳನ್ನು ಜಮಾವಣೆ ಮಾಡಲಾಯಿತು.
ವೈಶಿಷ್ಟéಪೂರ್ಣ ಮೆರವಣಿಗೆ
ಮಠದ ಬಿರುದಾವಳಿ, ನಾಸಿಕ್ ಬ್ಯಾಂಡ್ ನಿನಾದಗಳೊಂದಿಗೆ ಕೀಲುಕುದುರೆ ಸಹಿತ ವೇಷಭೂಷಣಗಳು ಮೆರವಣಿಗೆಯಲ್ಲಿದ್ದವು.ಇಸ್ಕಾನ್ ವೃಂದದವರ ಭಜನೆ, ಮಹಿಳೆ ಯರ ಚೆಂಡೆ ನಿನಾದದೊಂದಿಗೆ ಸಮವಸ್ತ್ರ ಧಾರಿ ಮಹಿಳೆಯರ ಸಹಿತ 2,000 ಮಂದಿ ಭಾಗವಹಿಸಿದ್ದರು.
ಬುಟ್ಟಿ, ಬೋಟ್ನಲ್ಲಿ ಬಂತು ಮಟ್ಟು ಗುಳ್ಳ
ಹೊರೆಕಾಣಿಕೆ ಮೆರವಣಿಗೆಯಲ್ಲಿ ಮಟ್ಟು ಲಕ್ಷ್ಮೀನಾರಾಯಣ ಮತ್ತು ಸಹೋದರರು ಮಿನಿ ಬೋಟ್ನಲ್ಲಿ ಮಟ್ಟುಗುಳ್ಳಗಳನ್ನು ತುಂಬಿ ತಂದಿದ್ದರು. ಬೆಳೆಗಾರ ಮಹಿಳೆಯರು ಮತ್ತು ಪುರುಷರು 50ಕ್ಕೂ ಅಧಿಕ ಅಲಂಕೃತ ಬುಟ್ಟಿಗಳಲ್ಲಿ ಗುಳ್ಳದ ಹೊರೆ ಹೊತ್ತು ತಂದರ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yugadi: ಯುಗಾದಿ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ