ಸ್ತ್ರೀಯರಿಗೆ ಮಾತ್ರ ಪ್ರವೇಶ


Team Udayavani, Jun 10, 2020, 4:30 AM IST

stri chande

ಯದುವಂಶದ ಕುಲಗುರು ಗರ್ಗಾಚಾರ್ಯರು, ಶ್ರೀಕೃಷ್ಣನ ರಾಸಕ್ರೀಡೆಗೆ ಸಂಬಂಧಿಸಿದಂತೆ ವಿಚಿತ್ರ ಘಟನೆಯೊಂದನ್ನು ವಿವರಿಸಿದ್ದಾರೆ. ಕೃಷ್ಣ ಭಕ್ತರೂ, ಮಹಾತಪ ‌ಸ್ವಿಯೂ ಆದ ಮಹರ್ಷಿಗಳೊಬ್ಬರು ಶ್ರೀಕೃಷ್ಣನ ದರ್ಶನಕ್ಕಾಗಿ  ಹಾತೊರೆಯುತ್ತ ಮಹಾದೇವನೊಡನೆ ಬೃಂದಾವನಕ್ಕೆ ತೆರಳುತ್ತಾ ರೆ. ರಾಸಕ್ರೀಡೆಯನ್ನು ನೋಡಿ ಆನಂದಿಸಲೆಂದು ಬಂದವರಿಗೆ ಅಚ್ಚರಿ ಕಾದಿತ್ತು. ಅಲ್ಲಿಯ ವೃಕ್ಷಗಳು ಗೋಪಿಕೆಯರ ರೂಪ ತಳೆದು ಕಾವಲಿಗೆ ನಿಂತಿದ್ದರು.

ಇವರಿಬ್ಬರನ್ನೂ ಒಳಗೆ ಪ್ರವೇಶಿಸಲು ಅನುಮತಿಸಲಿಲ್ಲ. “ಬೃಂದಾವನದಲ್ಲಿ ಸ್ತ್ರೀಯರಿಗೆ ಮಾತ್ರವೇ ಪ್ರವೇಶವುಂಟು. ಶ್ರೀಕೃಷ್ಣನೊಬ್ಬನೇ ಇಲ್ಲಿ ಪುರುಷ. ಆದ್ದರಿಂದ ನೀವು ಸ್ತ್ರೀರೂಪ ತಳೆದರೆ ಮಾತ್ರ ಒಳಗೆ ಪ್ರವೇಶಿಸಬಹುದು’  ಎನ್ನುತ್ತಾರೆ. ಮತ್ತೆ ಮುಂದುವರಿಸುತ್ತಾ “ಮಾನಸ ಸರೋವರ ದಲ್ಲಿ ಮುಳುಗಿ, ಸ್ತ್ರೀರೂಪ ತಳೆದು ಬನ್ನಿ’ ಎಂದು ಸಲಹೆ ನೀಡುತ್ತಾರೆ. ಅವರಿಬ್ಬರೂ ಮಾನಸ ಸರೋವರದಲ್ಲಿ ಮುಳುಗಿ ಸ್ತ್ರೀರೂಪ ತಳೆದು, ಬೃಂದಾವನವನ್ನು ಪ್ರವೇಶಿಸಿ,  ರಾಸಕ್ರೀಡೆಯ ವೈಭವವನ್ನು ಕಂಡು ಆನಂದತುಂದಿಲರಾದರು. ಮೇಲಿನ ಘಟನೆ ವಿಚಿತ್ರವಾಗಿ ಕಾಣುತ್ತಿದೆ.

ಮಾನಸಸರೋವರಕ್ಕೆ ತೀರ್ಥಯಾತ್ರೆ ಮಾಡಿಬಂ ದ ಅನೇಕ ಪುರುಷರುಂಟು. ಅವರಲ್ಲಿ ಯಾರೂ ಸ್ತ್ರೀಯಾಗಿ ಬದಲಾದ ಸುದ್ದಿ  ಇಲ್ಲಿವರೆಗೆ ತಿಳಿದುಬಂದಿಲ್ಲ. ಆದ್ದರಿಂದ, ಮೇಲಿನ ಘಟನೆ ಕಾಲ್ಪನಿಕವೇ ಹೌದು ಎಂದೆನಿ  ಸುತ್ತದೆ. ಪುರಾಣಗಳು ಮುಂತಾದ ಋಷಿ  ಪ್ರಣೀತ ವಾದ ಗ್ರಂಥಗಳಲ್ಲಿ, ಅನೇಕ ಘಟನೆಗಳು ತತ್ತ್ವಾರ್ಥಗರ್ಭಿತವಾಗಿರುತ್ತವೆ. ಮೇಲಿನ  ಘಟನೆಯೂ ಉತ್ಕೃಷ್ಟ ವಿಚಾರವ ನ್ನೇ ತಿಳಿಸುತ್ತಿದೆ. ಇಲ್ಲಿ ಸ್ತ್ರೀರೂಪವೆನ್ನುವುದು ಬಾಹ್ಯರೂಪವಲ್ಲ. ಸೃಷ್ಟೀಶನಾದ ಭಗವಂತ  ನೊ ಬ್ಬನೇ ಪುರುಷ- ಪರಮಪುರುಷ.

ಇತರರೆಲ್ಲರೂ ಶ್ರೀಪತಿಯಾದ ಆತನನ್ನೇ ತಮ್ಮ ಪತಿ/ ಸ್ವಾಮಿಯಾಗಿ ಭಾವಿಸಿ, ಆತನಲ್ಲಿ  ತನ್ಮಯ ರಾಗುವುದನ್ನು, ಸ್ತ್ರೀಭಾವವೆಂಬುದಾಗಿ ಹೇಳಬಹುದು. ಅಂತಹ ಸ್ತ್ರೀರೂಪ- ಭಾವವ ನ್ನು ತಾಳಿದಾಗ, ಅಂತರಂಗದಲ್ಲಿ ರಮಿಸುವ ಭಗವಂತನ ದರ್ಶನ ಸಾಧ್ಯವೆಂಬ ಸತ್ಯವನ್ನೇ ಸಾರುತ್ತಿದೆ ಈ ಕಥೆ.  ಮಾನಸಸರೋವರ  ಎಂಬುದು ಹಿಮಾಲಯ ಪ್ರಾಂತ್ಯದಲ್ಲಿನ ಒಂದು ಸರೋವರ. ಪವಿತ್ರವಾದ ಯಾತ್ರಾಸ್ಥಳ. ಈ ಹೊರ ಸರೋವರವು ನಮ್ಮ ಮನಸ್ಸಿನಾಳದಲ್ಲಿನ ಪವಿತ್ರಸ್ನಾನದ ಹೊರನಕ್ಷೆ. ಇಂತಹ ಸ್ತ್ರೀಭಾವವನ್ನು ಎಲ್ಲರೂ ತಳೆದು, ಭಗವಂತನನ್ನು  ಅನುಭವಿಸಬಹುದಾಗಿದೆ.

* ಮೈಥಿಲೀ ರಾಘವನ್‌, ಸಂಸ್ಕೃತಿ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನಮಂದಿರಂ

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.