ಮಿತ್ರ ಮಂಡಳಿ ಇಬ್ಭಾಗವಾಗಿಲ್ಲ: ಬಿ.ಸಿ.ಪಾಟೀಲ್
Team Udayavani, Aug 17, 2021, 9:45 PM IST
ಚಿತ್ರದುರ್ಗ: ನಮ್ಮಲ್ಲಿ ಬಾಂಬೆ ಟೀಮ್ ಸೇರಿ ಯಾವುದೂ ಇಲ್ಲ. ಪಕ್ಷದ ವರಿಷ್ಠರು ಕೊಟ್ಟ ಖಾತೆ ಸರಿಯಾಗಿ ನಿಭಾಯಿಸಬೇಕು ಅಷ್ಟೇ. ಎಲ್ಲ ಕೆಲಸವೂ ದೇವರ ಕೆಲಸ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮಿತ್ರ ಮಂಡಳಿ ಇಬ್ಭಾಗ ಸೇರಿ ಯಾವುದೇ ಗೊಂದಲ ಇಲ್ಲ. ಎಲ್ಲ ಕಡೆಗೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಓಡಾಡಲು ಆಗಲ್ಲ. ಮಾಧ್ಯಮಗಳು ನಾಲ್ಕು ಜನ ಸೇರಿದರೂ ಒಂದು ಅರ್ಥ ಕಲ್ಪಿಸುತ್ತವೆ. ಬೇರೆ ಇದ್ದರೂ ಒಂದು ಹೇಳುತ್ತವೆ. ಒಂದು ಮನೆಯಲ್ಲಿ ಎಲ್ಲವೂ ಸರಿ ಇರುವುದಿಲ್ಲ. ಆದರೆ ತಂದೆ-ತಾಯಿ ಅದನ್ನು ಸರಿಪಡಿಸುತ್ತಾರೆ. ಇಲ್ಲಿಯೂ ಹಾಗೇ. ಹಿಂದೆ ಆ ಸರ್ಕಾರ ತೆಗೆಯಬೇಕಾಗಿತ್ತು, ಎಲ್ಲರೂ ಒಟ್ಟಾಗಿದ್ದೇವು. ಈಗ ಸರ್ಕಾರ ಬಂದಿದೆ. ಒಬ್ಬಿಬ್ಬರನ್ನು ಬಿಟ್ಟು ಉಳಿದ ಯಾರಿಗೂ ಅನ್ಯಾಯ ಆಗಿಲ್ಲ. ಎಲ್ಲವೂ ಸರಿಯಾಗುತ್ತದೆ. ಸಚಿವ ಆನಂದ್ ಸಿಂಗ್ ಮುನಿಸು ಸರಿಯಾಗುತ್ತದೆ. ಸಿಎಂ ಬಳಿ ಅವರ ಅಸಮಾಧಾನ ಹೇಳಿಕೊಂಡಿದ್ದಾರೆ. ಪಕ್ಷದ ವರಿಷ್ಠರು ಹಾಗೂ ಸಿಎಂ ಎಲ್ಲವನ್ನೂ ಸರಿಪಡಿಸುತ್ತಾರೆ ಎಂದರು.
ಇದನ್ನೂ ಓದಿ:ಆನ್ಲೈನ್ ಕ್ಲಾಸ್ ನಡೆಯುತ್ತಿರುವ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ಹುಕ್ಕಾ ಬಾರ್ ವಿಚಾರವಾಗಿ ಸಿ.ಟಿ. ರವಿ ಹಾಗೂ ಕಾಂಗ್ರೆಸ್ ಮುಖಂಡರು ಗುದ್ದಾಡಲಿ. ನಾವು ರೈತರ ವಿಚಾರವಾಗಿ ಗುದ್ದಾಡೋಣ. “ಮದ್ದಾನೆಗಳು ಗುದ್ದಾಡುವಾಗ, ಗುಬ್ಬಿ ಹೋಗಿ ಬುದ್ಧಿ ಹೇಳುವುದು ಪೆದ್ದಲ್ಲವೇನೆ ಸರಸಿ’ ಎಂದು ಡಿವಿಜಿ ಅವರ ಕಗ್ಗವನ್ನು ಸ್ಮರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್