ಅಧಿಕಾರಿಗಳಿಂದ ನಿಧಾನಗತಿಯ ಕೆಲಸವನ್ನು ಖಂಡಿಸಿ ಚರಂಡಿಗಿಳಿದು ಪ್ರತಿಭಟಿಸಿದ ಶಾಸಕ!
Team Udayavani, Jul 5, 2022, 10:32 PM IST
ವಿಶಾಖಪಟ್ಟಣ: ಅಧಿಕಾರಿಗಳಿಂದ ನಿಧಾನಗತಿಯ ಕೆಲಸವನ್ನು ಖಂಡಿಸಿ, ಆಡಳಿತ ಪಕ್ಷದ ಶಾಸಕರೇ ಚರಂಡಿಗಿಳಿದು ಪ್ರತಿಭಟನೆ ನಡೆಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರದ ನೆಲ್ಲೂರು ಗ್ರಾಮಾಂತರ ಕ್ಷೇತ್ರದ ಶಾಸಕ ಕೋಟಂರೆಡ್ಡಿ ಶ್ರೀಧರ್ರೆಡ್ಡಿ ಈ ರೀತಿ ಪ್ರತಿಭಟನೆ ಮಾಡಿದವರು. ಅವರ ಕ್ಷೇತ್ರದಲ್ಲಿ 2018ರಿಂದಲೂ ರೈಲ್ವೆ ಇಲಾಖೆ ಮತ್ತು ಸ್ಥಳೀಯ ಆಡಳಿತ ಬ್ರಿಡ್ಜ್ ಒಂದರ ನಿರ್ಮಾಣದಲ್ಲಿ ತೊಡಗಿದೆ.
ಆದರೆ ಕಾಮಗಾರಿ ನಿಧಾನವಾಗಿರುವುದರಿಂದಾಗಿ 2018ರಲ್ಲಿ ವಿರೋಧ ಪಕ್ಷದಲ್ಲಿದ್ದಾಗಲೂ ಕೋಟಂರೆಡ್ಡಿ ಪ್ರತಿಭಟಿಸಿದ್ದರು.
ಇದೀಗ ತಮ್ಮದೇ ಸರ್ಕಾರವಿದ್ದರೂ ಕೆಲಸ ನಿಧಾನವಾಗುತ್ತಿದ್ದು, ಇದಕ್ಕೆ ಕಾರಣವಾದ ಸ್ಥಳೀಯ ಆಡಳಿತ ಮತ್ತು ರೈಲ್ವೆ ಇಲಾಖೆ ವಿರುದ್ಧ ಅವರು ಪ್ರತಿಭಟಿಸಿದ್ದಾರೆ.
ನಗರ ಪರಿಶೀಲನೆಗೆ ಬಂದಾಗ ಚರಂಡಿ ನೀರಿಗಿಳಿದು ಅಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ