ಎಲ್ಲರೂ ಅನಿಲ್‌ ಕುಂಬ್ಳೆ ಆಗೋಕಾಗಲ್ಲ…


Team Udayavani, May 26, 2020, 4:36 AM IST

sant tank

ಸಂತೋಷದ ಮೂಲ ಇರುವುದು ಎಲ್ಲಿ ಗೊತ್ತಾ? ಕೃತಜ್ಞತೆಯಲ್ಲಿ. ಬೇರೆಯವರಿಗೆ ಕಷ್ಟದಲ್ಲಿ ಸಹಾಯ ಮಾಡುವುದು, ನಮಗೆ ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುವುದು ಇದೆಯಲ್ಲ; ಅದು ನಮ್ಮ ಸಂತೋಷವನ್ನು ಹೆಚ್ಚಿಸುತ್ತಾ  ಹೋಗುತ್ತದೆ. ಸುಖದ ಇನ್ನೊಂದು ಮೂಲ ಅಂದರೆ, ಚಾಪೆ ಎಷ್ಟಿರುತ್ತದೆಯೋ ಅಷ್ಟು ಮಾತ್ರ ಕಾಲು ಚಾಚುವುದು. ನಿಮ್ಮ ಆಸೆಯ ಕಾಲಿಗೆ ತಕ್ಕಷ್ಟು ಚಾಪೆ ಹುಡುಕದೇ ಇರುವುದು. ಅಂದರೆ, ದೇವರು ಇಷ್ಟನ್ನಾದರೂ ಕೊಟ್ಟಿದ್ದಾನಲ್ಲ  ಅಂತ ತೃಪ್ತಿ ಪಡುವುದು. ಬೇರೆಯವರನ್ನು ನೋಡಿ ಕರುಬದೇ ಇರುವುದು.

ಬೇಕಿದ್ದರೆ ಗಮನಿಸಿ ನೋಡಿ: ಸದಾ ಕೊರಗುವ ಮನಃಸ್ಥಿಯಲ್ಲಿರುವವರು ಸುಖವಾಗಿರೋಲ್ಲ. ಯಾವ ಮಟ್ಟಿಗೆ ಅಂದರೆ, ನಿದ್ದೆ ಮಾತ್ರೆ ಕೊಟ್ಟರೂ ಅವರ ಕಣ್ಣಿಗೆ  ನಿದ್ದೆ ಹತ್ತೂಲ್ಲ. ಕಾರಣ, ಅವನಿಗೆ ಲಕ್ಷ ರುಪಾಯಿ ಸಂಬಳದ ಕೆಲಸ ಸಿಕು¤, ನನಗೇಕೆ ಇಲ್ಲ? ನಾನೇನು ತಪ್ಪು ಮಾಡಿದ್ದೀನಿ ಅಂತ, ಇನ್ನೊಬ್ಬರೊಂದಿಗೆ ತಮ್ಮನ್ನುಹೋಲಿಕೆ ಮಾಡಿಕೊಳ್ಳುತ್ತಾ ಹೋಗುತ್ತಾರೆ. ಅಷ್ಟೇ ಅಲ್ಲ; ಈ  ಜನ, ಸಮಾಜ ನನಗೆ ಅನ್ಯಾಯ ಮಾಡಿಬಿಟ್ಟಿತು ಎಂಬ ನೆಗೆಟಿವ್‌ ಯೋಚನೆಯನ್ನು ಮನಸ್ಸಿಗೆ ತಂದುಕೊಳ್ಳುತ್ತಾರೆ.

ಆನಂತರದಲ್ಲಿ ಚಿಂತೆ ಹೆಚ್ಚುತ್ತಲೇ ಹೋಗುತ್ತದೆ. ಚಿಂತೆಯ ಸಂತೆಯೊಳಗೆ, ಸಂತೋಷ ಕಾಣೆಯಾಗುತ್ತದೆ. ಇದರಿಂದ  ಮುಕ್ತಿ ಪಡೆಯಬೇಕು ಅಂದರೆ, ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳದೇ ಬದುಕಲು ಕಲಿಯಬೇಕು. ಬೇರೆಯವರು ಎತ್ತರಕ್ಕೆ  ಳೆದಿದ್ದಾರೆ ಅಂದಾಗ, ಅದಕ್ಕೆ ಸಂತೋಷಪಡಿ. ಅವರು ಆ ಸ್ಥಾನ ತಲುಪಲು ಎಷ್ಟು ಕಷ್ಟಪಟ್ಟರು  ಎಂಬುದನ್ನು ಗಮನಿಸಿ.

ಆ ದಾರಿ ಒಳ್ಳೆಯದು ಅನಿಸಿದರೆ, ಅದನ್ನು ಅನುಸರಿಸಿಯೇ ನೀವೂ ಹೆಜ್ಜೆಯಿಡಿ. ಅದು ಬಿಟ್ಟು ಕರುಬುವುದು ಸರಿಯಲ್ಲ. ಒಂದು ಸಲ ಕರುಬುವಿಕೆ ಶುರುವಾದರೆ, ಆನಂತರದಲ್ಲಿ ನಿಮ್ಮ ಯೋಚನೆಗಳೆಲ್ಲವೂ  ನೆಗೆಟೀವ್‌ ಆಗುತ್ತವೆ. ಅದೇ ಕಾರಣದಿಂದ ದೈಹಿಕ, ಮಾನಸಿಕ ಖನ್ನತೆ ಜೊತೆಯಾಗುತ್ತದೆ. ಒಂದು   ಸತ್ಯವನ್ನು ತಿಳಿಯಬೇಕು. ಈ ಜಗತ್ತಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ಪೇಸ್‌ ಇದೆ.

ಅದನ್ನು ಹೆಚ್ಚಿಗೆ, ಕಡಿಮೆ ಮಾಡಿಕೊಳ್ಳುವ  ಸಾಮರ್ಥ್ಯ, ನೈಪುಣ್ಯ ಎಲ್ಲವೂ ನಮ್ಮಕೈಯಲ್ಲೇ ಇರುವುದು. “ಲೋ, ಆ ಅನಿಲ್‌ ಕುಂಬ್ಳೆ 15 ಸಿ ಬಸ್‌ನಲ್ಲಿ ಓಡಾಡ್ತಾ ಇದ್ರು ಕಣೋ… ನಾನೇ ನೋಡಿದ್ದೀನಿ…’ ಅಂತ ಹೇಳ್ಳೋರು ಇದ್ದಾರೆ. ಸರಿ, ಅನಿಲ್‌ ಕುಂಬ್ಳೆ ಆಗ ಬಸ್‌ನಲ್ಲಿ ಓಡಾಡಿದರು ಅನ್ನುವುದು ಮುಖ್ಯ  ಅಲ್ಲ; ಬಸ್‌ನಲ್ಲಿ ಓಡಾಡುತ್ತಿದ್ದ ಒಬ್ಬ ಹುಡುಗ, ನಂತರ ಅಂತಾರಾಷ್ಟ್ರೀಯ ಮಟ್ಟದ ಆಟಗಾರನಾಗಿ ಬೆಳೆದನಲ್ಲ, ಅದಷ್ಟೇ ನಮಗೆ ಮುಖ್ಯವಾಗಬೇಕು.

ನೆನಪಿಡಿ: ಎಲ್ಲರೂ ಅನಿಲ್‌ ಕುಂಬ್ಳೆ ಆಗೋಕಾಗಲ್ಲ, ಹಾಗಂತ ಕರುಬುವ  ವಿಚಾರವಲ್ಲ ಇದು. ನೀವು ಕ್ರಿಕೆಟ್‌ನಲ್ಲಿ ಏನೂ ಮಾಡಲಾಗಲಿಲ್ಲ ಅಂತಾದರೆ ಬಿಡಿ, ನಿಮ್ಮದೇ ಒಂದು ಕ್ಷೇತ್ರ ಗುರುತಿಸಿಕೊಂಡು ಅಲ್ಲಿ   ನಾದರೂ ಸಾಧಿಸಬಹುದಲ್ಲ… ಗೊತ್ತಿರಲಿ, ಅನಿಲ್‌ ಕುಂಬ್ಳೆ ಮಾಡಿದ್ದು, ತೆಂಡೂಲ್ಕರ್‌  ಕಂಡುಕೊಂಡಿದ್ದು ಇದನ್ನೇ. ಅವರವರ ತಾಕತ್ತು, ಅಭಿರುಚಿ ಅರಿತು, ಬದುಕಿನ ದಾರಿಗಳನ್ನು ಹುಡುಕಿಕೊಂಡದ್ದು.

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.