ಅಂಜನಾದ್ರಿಯಲ್ಲಿ ಅರ್ಚಕ ವಿದ್ಯಾದಾಸ ಬಾಬಾರಿಂದ ನಿರಾತಂಕವಾಗಿ ಪೂಜೆ ಆರಂಭ
Team Udayavani, Oct 14, 2020, 12:11 PM IST
ಗಂಗಾವತಿ: ಇತಿಹಾಸ ಪ್ರಸಿದ್ದ ಪ್ರವಾಸಿತಾಣ ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇಗುಲದಲ್ಲಿ ಹೈಕೋರ್ಟ್ ಸೂಚನೆಯಂತೆ ಜಿಲ್ಲಾಡಳಿತ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಅವರಿಗೆ ಪೂಜೆ ಧಾರ್ಮಿಕ ಕಾರ್ಯ ಮಾಡಲು ಅವಕಾಶ ಕಲ್ಪಿಸಿದ್ದು ಬುಧವಾರ ಬೆಳಗಿನ ಜಾವ ಯಾವುದೇ ಆತಂಕವಿಲ್ಲದೇ ಪೂಜಾ ಕಾರ್ಯವನ್ನು ನೆರವೇರಿಸಲಾಯಿತು. ಮಂಗಳವಾರ ಸಂಜೆ ನಾಲ್ವರು ಶಿಷ್ಯರ ಜತೆ ಅಂಜನಾದ್ರಿ ಹತ್ತಿದ ಬಾಬಾ ಇವರಿಗೆ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಮೊದಲು ವಾಸವಾಗಿದ್ದ ಕೋಣೆಯಲ್ಲಿ ಬಾಬಾ ಅವರು ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು.
ದೇಗುಲದ ಮಾಲೀಕತ್ವ ಮತ್ತು ಪೂಜೆ ವಿಷಯವಾಗಿ ಆನೆಗೊಂದಿ ರಾಜವಂಶಸ್ಥರ ನೇತೃತ್ವದ ಟ್ರಸ್ಟ್ ಹಾಗೂ ವಿದ್ಯಾದಾಸ ಬಾಬಾ ಇವರ ನಡುವೆ ವಿವಾದವುಂಟಾಗಿ ಅರ್ಚಕ ಸ್ಥಾನದಿಂದ ವಿದ್ಯಾದಾಸ ಬಾಬಾ ಅವರನ್ನು ಟ್ರಸ್ಟ್ ನವರು ಪದಚ್ಯುತಿಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಗಂಗಾವತಿ ಜೆಎಂಎಫ್ ಸಿ ನ್ಯಾಯಾಲದಿಂದ ಬಾಬಾ ತಡೆಯಾಜ್ಞೆ ತಂದು ಅರ್ಚಕ ಹಾಗೂ ದೇಗುಲದ ಎಲ್ಲ ಕಾರ್ಯಗಳನ್ನು ಬಾಬಾ ಮುಂದುವರಿಸಿದರು. ಈ ಮಧ್ಯೆ ಬಾಬಾ ಬೆಂಬಲಿಗರು ಮತ್ತು ಆನೆಗೊಂದಿ ರಾಜಮನೆತನದವರ ಟ್ರಸ್ಟ್ ಪದಾಧಿಕಾರಿಗಳ ಮಧ್ಯೆ ಸಂಷರ್ಘವುಂಟಾಯಿತು.
ಇದನ್ನೂ ಓದಿ:ವಿಡಿಯೋ ವೈರಲ್: ಆನೆ ಮೇಲೆ ಯೋಗ: ದಿಢೀರ್ ಕೆಳಗೆ ಬಿದ್ದ ಬಾಬಾರಾಮ್ ದೇವ್
ಅಂಜನಾದ್ರಿ ದೇಗುಲದ ಬಳಿ ನಡೆದಿದೆ ಎನ್ನಲಾಗುವ ಲೈಂಗಿಕ ಪ್ರಕರಣಕ್ಕಾಗಿ ಬಾಬಾ ಅವರನ್ನು ಟ್ರಸ್ಟ್ ನವರ ಒತ್ತಾಯ ಮೇರೆ ಬೆಟ್ಟದಿಂದ ಪೊಲೀಸರ ನೇತೃತ್ವದಲ್ಲಿ ಕೆಳಗೆ ಇಳಿಸಿ ಕಳುಹಿಸಲಾಯಿತು. ಈ ಮಧ್ಯೆ ಪೊಲೀಸ್ ಮತ್ತು ಕಂದಾಯ ಇಲಾಖೆ ಶಿಫಾರಸ್ಸಿನಂತೆ ಜಿಲ್ಲಾಡಳಿತ ದೇಗುಲವನ್ನು ಕಳೆದ ಎರಡು ವರ್ಷಗಳ ಸರಕಾರದ ವಶಕ್ಕೆ ಪಡೆದಿತ್ತು. ಅರ್ಚಕ ವಿದ್ಯಾದಾಸ ಹೈಕೋರ್ಟ್ ಮೊರೆ ಹೋಗಿ ಪೂಜೆ ಮಾಡಲು ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಪೂಜೆ ಅವಕಾಶ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು. ಇದೀಗ ಬಾಬಾ ಗೆ ಪೂಜೆ ಮಾಡಲು ಅವಕಾಶ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ