ಅನ್ನಪೂರ್ಣ ದೇವಿ ವಿಗ್ರಹ ಹಸ್ತಾಂತರ
Team Udayavani, Nov 12, 2021, 4:02 AM IST
ಹೊಸದಿಲ್ಲಿ: ಸುಮಾರು ನೂರು ವರ್ಷಗಳ ಹಿಂದೆ ವಾರಾಣಸಿಯ ಕಾಶಿ ದೇಗುಲದಿಂದ ಕಳವಾಗಿದ್ದ ಅನ್ನಪೂರ್ಣಾ ದೇವಿಯ ಮೂರ್ತಿಯನ್ನು ದೇಶಕ್ಕೆ ವಾಪಸು ತರಲಾಗಿದೆ. ಅದನ್ನು ಗುರುವಾರ ಹೊಸದಿಲ್ಲಿಯಲ್ಲಿ ಉತ್ತರ ಪ್ರದೇಶ ಸರಕಾರಕ್ಕೆ ಕೇಂದ್ರ ಸಂಸ್ಕೃತಿ ಖಾತೆ ಸಚಿವಾಲಯ ಜಿ. ಕಿಶನ್ ರೆಡ್ಡಿ ಹಸ್ತಾಂತರಿಸಿದ್ದಾರೆ.
ಅನ್ನಪೂರ್ಣಾ ದೇವಿಯ ಮೂರ್ತಿಯನ್ನು 1913ರಲ್ಲಿ ಕಳವು ಮಾಡಲಾಗಿತ್ತು. ಅನಂತರ ಅದನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡಲಾ ಗಿತ್ತು. ಕೆನಡಾದ ಕಲಾ ಸಂಗ್ರಹಾಲಯದಲ್ಲಿದ್ದ ಮೂರ್ತಿಯನ್ನು ಅ.15ರಂದು ಭಾರತದ ಪುರಾತತ್ವ ಇಲಾಖೆಯು ವಾಪಸು ಪಡೆದುಕೊಂಡಿತ್ತು. ಅದನ್ನು ವಾರಾಣಸಿ ಯಲ್ಲಿರುವ ಕಾಶೀ ವಿಶ್ವನಾಥ ದೇಗುಲದಲ್ಲಿ ನ.15ರಂದು ಪುನರ್ ಪ್ರತಿಷ್ಠಾಪಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು