ಸಿದ್ದು ಅವಧಿಯ ಹಗರಣ ತನಿಖೆಗೆ ಆಗ್ರಹಿಸಿ ಸಿಎಂಗೆ ಪತ್ರ: ಡಾ| ಅಶ್ವತ್ಥನಾರಾಯಣ
Team Udayavani, Jul 15, 2022, 6:55 AM IST
ರಾಮನಗರ: “ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ. ಪಿಎಸ್ಐ ನೇಮಕಾತಿ ಹಗರಣ ಆರಂಭ ಆಗಿದ್ದೇ ಅವರ ಕಾಲದಲ್ಲಿ. ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಯಾವ ಯಾವ ತನಿಖೆಗಳು ಹೇಗೆಲ್ಲ ನಡೆದಿವೆ ಎಂಬುದು ಗೊತ್ತಿದೆ. ಅವರ ಆಡಳಿತ ಅವಧಿಯಲ್ಲಿ ನಡೆದ ಎಲ್ಲ ಹಗರಣಗಳ ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ ಎಂದು ಸಚಿವ ಡಾ| ಅಶ್ವತ್ಥನಾರಾಯಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಕಾವತಿ ಹಗರಣ, ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮೊದಲಾದ ಪ್ರಕರಣ ಗಳು ಏನೇನಾಗಿವೆ, ಸಿದ್ದರಾಮಯ್ಯ “ಆಳ- ಅಗಲ ಎಲ್ಲವೂ ಗೊತ್ತಿದೆ’. ಸಿದ್ದರಾಮೋತ್ಸವ ಕಾರ್ಯಕ್ರಮ ದಿಂದ ಕಾಂಗ್ರೆಸ್ನ ಕೆಲವರಿಗೆ ಆತಂಕ ಆಗಿದೆಯೇ ಹೊರತು ಬಿಜೆಪಿಗೆ ಅಲ್ಲ ಎಂದು ಹೇಳಿದರು.