ಆಸ್ಟ್ರೇಲಿಯಾದ ಸಂಶೋಧನಾ ಕ್ಷೇತ್ರಕ್ಕೆ ಭಾರೀ ನಷ್ಟವುಂಟು ಮಾಡಿದ ಕೋವಿಡ್‌


Team Udayavani, May 15, 2020, 3:45 PM IST

ಆಸ್ಟ್ರೇಲಿಯಾದ ಸಂಶೋಧನಾ ಕ್ಷೇತ್ರಕ್ಕೆ ಭಾರೀ ನಷ್ಟವುಂಟು ಮಾಡಿದ ಕೋವಿಡ್‌

ಕ್ಯಾನ್‌ಬೆರ: ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಆಸ್ಪತ್ರೆಗಳು, ವೈದ್ಯರು, ದಾದಿಯರು ಮುಂತಾದವರಿಗೆಲ್ಲ ಬೆಂಗಾವಲಾಗಿ ನಿಂತದ್ದು ಸಂಶೋಧನಾ ಕ್ಷೇತ್ರ. ಲಸಿಕೆ ಮತ್ತು ಔಷಧಿ ಶೋಧದ ಜತೆಗೆ ತಕ್ಷಣಕ್ಕೆ ಅಗತ್ಯವಿರುವ ಪರೀಕ್ಷಾ ಕಿಟ್‌ಗಳು, ಶಮನಕಾರಿ ಔಷಧಿ, ಸುರಕ್ಷಾ ಉಡುಗೆಗಳು ಇತ್ಯಾದಿಗಳನ್ನು ಆವಿಷ್ಕರಿಸಿ ಕೊಟ್ಟದ್ದು ಸಂಶೋಧನಾ ಕ್ಷೇತ್ರ. ಆದರೆ ಈಗ ಈ ಸಂಶೋಧನಾ ಕ್ಷೇತ್ರವೇ ಕೋವಿಡ್‌ ಹೊಡೆತದಿಂದ ಭಾರೀ ಸಮಸ್ಯೆಯನ್ನು ಎದುರಿಸುತ್ತಿದೆ.

ಆಸ್ಟ್ರೇಲಿಯದ ರಾಷ್ಟ್ರೀಯ ಸಂಶೋಧನಾ ಕ್ಷೇತ್ರ ಕೋವಿಡ್‌ ದಿಂದ ಅತಿ ಹೆಚ್ಚಿನ ಹಾನಿಯನ್ನು ಅನುಭವಿಸಲಿದೆ. ಉದ್ಯೋಗ ನಷ್ಟದ ಭೀತಿ ಒಂದೆಡೆಯಾದರೆ ಅನುದಾನ ಕಡಿತವಾಗುವ ಸಾಧ್ಯತೆ ಇನ್ನೊಂದೆಡೆ. ಸಂಶೋಧನಾ ಕ್ಷೇತ್ರದ ಮೇಲೆ ಕೋವಿಡ್‌ ಪರಿಣಾಮ ಕನಿಷ್ಠ ಕೆಲವು ವರ್ಷಗಳಾದರೂ ಇರಲಿದೆ ಎನ್ನುತ್ತಿದೆ ಒಂದು ಅಧ್ಯಯನ ವರದಿ. ಸಂಶೋಧನಾ ಕ್ಷೇತ್ರದಲ್ಲಿ ನಿಕಟ ಭವಿಷ್ಯದಲ್ಲೇ ಸುಮಾರು 10,000 ಉದ್ಯೋಗ ನಷ್ಟವಾಗಲಿದೆ. ದೀರ್ಘಾವಧಿಯಲ್ಲಿ ಉದ್ಯೋಗ ಕಡಿತ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.

ವಿಶ್ವವಿದ್ಯಾಲಯಗಳ ವರಮಾನ 2020ರಲ್ಲಿ 3 ರಿಂದ 4.6 ಶತಕೋಟಿ ಡಾಲರ್‌ ಕಡಿತವಾಗುವ ಸಾಧ್ಯತೆಯಿದೆ. ಇದು ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳನ್ನು ತೀವ್ರವಾಗಿ ಬಾಧಿಸಲಿದೆ.

ಸಂಶೋಧನಾ ವೃತ್ತಿ ಶುರು ಮಾಡಿದವರು, ವೃತ್ತಿಯ ಮಧ್ಯ ಭಾಗದಲ್ಲಿರುವವರು, ಪದವೀಧರರು, ಸ್ನಾತಕೋತ್ತರ ಸೇರಿದಂತೆ ಎಲ್ಲರನ್ನೂ ಕೋವಿಡ್‌ ವಿವಿಧ ಸ್ತರಗಳಲ್ಲಿ ಬಾಧಿಸುವುದು ನಿಶ್ಚಿತ. ಮಹಿಳೆಯರ ಮೇಲೆ ವರಮಾನ ಮತ್ತು ಅನುದಾನ ಕಡಿತದ ಪರಿಣಾಮ ತುಸು ಹೆಚ್ಚೇ ಆಗಲಿದೆ. ಕೋವಿಡ್‌ ಹಾವಳಿ ಶುರುವಾದ ಬಳಿಕ ಮಹಿಳೆಯರ ಪ್ರಬಂಧ ಮಂಡನೆ ಬಹಳ ಕಡಿಮೆಯಾಗಿರುವ ಅಂಶ ಗಮನಾರ್ಹವಾಗಿದೆ. ವಿದೇಶಗಳಿಂದ ಸಂಶೋಧನಾರ್ಥಿಗಳಾಗಿ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಲಿದೆ.

ಆಸ್ಟ್ರೇಲಿಯದ ಸಂಶೋಧನಾ ಕ್ಷೇತ್ರ ಸಂಪೂರ್ಣವಾಗಿ ಸರಕಾರದ ಅನುದಾನವನ್ನೇ ಅವಲಂಬಿಸಿದೆ. ಅಲ್ಲದೆ ನಿರ್ದಿಷ್ಟ ಪ್ರೊಜೆಕ್ಟ್ ಗಳಿಗಾಗಿ ಸರಕಾರ ವಿಶೇಷ ಹಣಕಾಸಿನ ನೆರವು ನೀಡುತ್ತದೆ. ಕೊರೊನೋತ್ತರ ಕಾಲದಲ್ಲಿ ಇಂಥ ನೆರವುಗಳು ಸಿಗುವುದು ಅಸಂಭವ ಎನ್ನಲಾಗುತ್ತಿದೆ.

2019-20ನೇ ಸಾಲಿನಲ್ಲಿ 9.6 ಶತಕೋಟಿ ಡಾಲರ್‌ ಅನುದಾನವನ್ನು ಸಂಶೋಧನಾ ಕ್ಷೇತ್ರಕ್ಕೆ ಒದಗಿಸಲಾಗಿತ್ತು. ಇದರ ಕ್ಷೇತ್ರವಾರು ಹಂಚಿಕೆಯೂ ನಡೆದಿದೆ. ಆದರೆ ಈಗ ಅನುದಾನ ಬಿಡುಗಡೆಗೊಳಿಸುವ ಸ್ಥಿತಿಯಲ್ಲಿ ಸರಕಾರ ಇಲ್ಲದಿರುವುದರಿಂದ ಅನೇಕ ಸಂಶೋಧನಾ ಕೆಲಸಗಳು ನನೆಗುದಿಗೆ ಬಿದ್ದಿವೆ.

ಆವಿಷ್ಕಾರಗಳು ಕಡಿಮೆಯಾದರೆ ಅದರ ಪರಿಣಾಮ ಅಭಿವೃದ್ಧಿಯ ಮೇಲೂ ಆಗುತ್ತದೆ. ಹೊಸ ತಂತ್ರಜ್ಞಾನಗಳನ್ನು ಕಂಡು ಹಿಡಿಯದಿದ್ದಾರೆ ಕೌಶಲ, ಸಂಪನ್ಮೂಲ ಇತ್ಯಾದಿಗಳು ಉಪಯೋಗವಿಲ್ಲದೆ ವ್ಯರ್ಥವಾಗುತ್ತವೆ.

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.