ಭತ್ತ ಕಟಾವು ಯಂತ್ರಗಳ ಚಾಲಕರಿಗೆ ಕೋವಿಡ್-19 ಸೋಂಕು ಜಾಗೃತಿ
Team Udayavani, Apr 6, 2020, 11:16 AM IST
ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಕಟಾವು ಕಾರ್ಯ ಇದೀಗ ಆರಂಭವಾಗಿದ್ದು ಸ್ಥಳೀಯ ಮತ್ತು ಅನ್ಯ ಊರುಗಳಿಂದ ಭತ್ತ ಕಟಾವು ಮಾಡುವ ಯಂತ್ರಗಳ ಚಾಲಕರು ಮತ್ತು ಕ್ಲೀನರ್ ಗಳು ಆಗಮಿಸಿದ್ದು ಅವರಿಗೆ ಕೋವಿಡ್-19 ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯಿತು.
ಕೋವಿಡ್-19 ಜಾಗೃತಿ ಕುರಿತು ತಾಲೂಕು ಪಂಚಾಯತ್ ಇಒ ಡಾ.ಮೋಹನ ಕುಮಾರ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
ಬಸಾಪಟ್ಟಣ ಸೇರಿ ಇತರೆ ಭಾಗದಲ್ಲಿ ಈ ಟಾಸ್ಕ್ ಫೋರ್ಸ್ ಸದಸ್ಯರು ಸಂಚರಿಸಿ ಕೋವಿಡ್-19 ವೈರಸ್ ಹರಡುವ ಬಗೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರಿಸಿದರು.
ಜನರು ಸೋಂಕು ಹರಡದಂತೆ ತಡೆಗಟ್ಟಲು ಮಾಸ್ಕ್ ಧರಿಸಬೇಕು, ಸಾಬೂನು ಇತರೆ ಸ್ವಚ್ಛತೆ ವಸ್ತು ಬಳಕೆ ಮಾಡಬೇಕು, ಇತರೆ ಕಾರ್ಮಿಕರ ಜತೆ ಭೌತಿಕ ಅಂತರ ಕಾಪಾಡುವಂತೆ ಸಲಹೆ ನೀಡಿದರು.