ಈ ಮಗುವಿಗೆ ಎರಡು ಬಾಯಿ; 1900 ಇಸವಿ ಬಳಿಕ ಹೀಗಿದ್ದದ್ದು 35 ಮಂದಿಗೆ ಮಾತ್ರ!


Team Udayavani, Jun 2, 2020, 8:18 PM IST

ಈ ಮಗುವಿಗೆ ಎರಡು ಬಾಯಿ; 1900 ಇಸವಿ ಬಳಿಕ ಹೀಗಿದ್ದದ್ದು 35 ಮಂದಿಗೆ ಮಾತ್ರ!

ನ್ಯೂಯಾರ್ಕ್‌: ಕೈಯಲ್ಲಿ ಹೆಚ್ಚುವರಿ ಬೆರಳುಗಳು, ಎರಡು ಕುತ್ತಿಗೆ ಅಥವಾ ಜೋಡಿದ ದೇಹ ಹೊಂದಿದ ಸಯಾಮಿ ಅವಳಿಗಳ ಬಗ್ಗೆ ನಾವು ಕೇಳಿದ್ದೇವೆ. ಆದರೆ ಎರಡು ಬಾಯಿ ಹೊಂದಿದ ಮಗು!

ಊಹೂಂ! ಇದು ಅಪರೂಪದಲ್ಲೇ ಅಪರೂಪ. ಅದೂ ಕಳೆದೊಂದು ಶತಮಾನದಲ್ಲೇ ಬೆರಳೆಣಿಕೆಯಷ್ಟು.

ಅಮೆರಿಕದ ದಕ್ಷಿಣ ಕೆರೊಲಿನಾದ ಕಾರ್ಲ್ಸ್ಟನ್‌ನಲ್ಲಿ ಆ ಮಗುವಿಗಿದ್ದಿದ್ದು ಎರಡು ಬಾಯಿ. 6 ತಿಂಗಳ ಆ ಹೆಣ್ಣುಮಗುವಿಗೆ ಹುಟ್ಟುವಾಗಲೇ 0.8 ಇಂಚಿನ ಎರಡನೇ ಬಾಯಿ ಇತ್ತು. ಆಕೆಯ ತಾಯಿ ಗರ್ಭವತಿಯಾದ 28ನೇ ವಾರದಲ್ಲಿ ಮಗುವಿಗೆ ಎರಡು ಬಾಯಿಗಳು ಸೃಷ್ಟಿಯಾಗಿರುವುದು ಪತ್ತೆಯಾಗಿತ್ತು.

ಈ ಎರಡನೇ ಬಾಯಿಯಿಂದಾಗಿ ಮಗುವಿಗೆ ಯಾವುದೇ ಅಪಾಯವಿರಲಿಲ್ಲ. ಆಕೆ ಆಹಾರ, ಉಸಿರಾಟ ಎಲ್ಲವನ್ನೂ ಸರಿಯಾಗಿ ಮಾಡುತ್ತಿದ್ದಳು ಮತ್ತು ಎರಡನೇ ಬಾಯಿಗೆ ಮತ್ತು ಸಾಮಾನ್ಯ ಬಾಯಿಗೆ ಯಾವುದೇ ಆಂತರಿಕ ಸಂಪರ್ಕವೂ ಇರಲಿಲ್ಲ. ಆದರೆ ಇದರಿಂದಾಗಿ ಇದ್ದ ಸಮಸ್ಯೆಯೆಂದರೆ ಆ ಮಗುವಿನ ಮುದ್ದು ಮುಖದ ಸೌಂದರ್ಯಕ್ಕೆ ಪ್ರಮುಖವಾಗಿ ಧಕ್ಕೆಯಾಗಿತ್ತು. ಅಲ್ಲದೇ ಬಾಯಿಯ ಜೊಲ್ಲನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗದೇ ಇರುವುದು ಸಮಸ್ಯೆಯಾಗಿತ್ತು.

ಅಚ್ಚರಿಯೆಂದರೆ ಆ ಪುಟ್ಟ ಎರಡನೇ ಬಾಯಿಯಲ್ಲಿ ಸಣ್ಣದಾದ ಹಲ್ಲು ನಾಲಗೆ ಎಲ್ಲವೂ ಇತ್ತು.

ಆದ್ದರಿಂದ ವೈದ್ಯರು ಶಸ್ತ್ರ ಚಿಕಿತ್ಸೆಗೆ ಉದ್ದೇಶಿಸಿದ್ದು ಎರಡನೇ ಬಾಯಿಯನ್ನು ತೆಗೆದಿದ್ದಾರೆ. ಇನ್ನು ಆರು ತಿಂಗಳಲ್ಲಿ ಮಗುವಿನ ಮುಖ ಸಾಮಾನ್ಯದಂತೆ ಆಗಲಿದೆ ಎಂದು ಹೇಳಿದ್ದಾರೆ. ಜತೆಗೆ ಇದರಿಂದ ಭವಿಷ್ಯದಲ್ಲಿ ಮಗುವಿಗೆ ಯಾವುದೇ ಸಮಸ್ಯೆಯಿಲ್ಲ ಎಂದೂ ಹೇಳಿದ್ದಾರೆ.

ವೈದ್ಯರ ಹೇಳಿಕೆ ಪ್ರಕಾರ ಇಂತಹ ಸಮಸ್ಯೆ ಮನುಷ್ಯರಲ್ಲಿ ಅತಿ ಕಡಿಮೆ. ಕೋಳಿಗಳು, ಕುರಿ, ಬೆಕ್ಕು ಇತ್ಯಾದಿ ಪ್ರಾಣಿಗಳಲ್ಲಿ ಎರಡು ಬಾಯಿಯ ಸಂರಚನೆ ಕೆಲವೊಮ್ಮೆ ಕಂಡುಬರುತ್ತದೆ. ಮುಖವನ್ನು ರೂಪಿಸುವ ಪ್ರೊಟೀನ್‌ಗಳಲ್ಲಿ ಸಂಕೇತದ ಸಮಸ್ಯೆಗಳಿಂದಾಗಿ ಗರ್ಭದಲ್ಲಿ ಇಂತಹ ಅಚಾತುರ್ಯ ಘಟಿಸುತ್ತದೆ ಎನ್ನಲಾಗಿದೆ. ಈ ಮೊದಲು 2004ರಲ್ಲಿ ದೊಡ್ಡ ಬಾಯಿ, ಎರಡು ಪ್ರತ್ಯೇಕ ಮೂಗು ಇದ್ದ ಮಗು ಜನಿಸಿತ್ತು. ಆ ಮಗು ಬದುಕುವುದು ಅಸಾಧ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರೂ, ಇದೀಗ ಆತನಿಗೆ 17 ವರ್ಷವಾಗಿದೆ.

ಟಾಪ್ ನ್ಯೂಸ್

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.